ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಹೀಯಾಳಿಸಿದ್ದಾರೆ.
ಈ ಕುರಿತು 'ಎನ್ಡಿಟಿವಿ' ವರದಿ ಮಾಡಿದೆ.
ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಮಾರ್ಮಿಕ ಪೋಸ್ಟ್ ಮಾಡಿರುವ ರಾಯುಡು, 'ಐದು ಬಾರಿಯ ಚಾಂಪಿಯನ್ ತಂಡದಿಂದ 'ಜೆಂಟಲ್ ರಿಮೈಂಡರ್'. ಕೆಲವೊಮ್ಮೆ ಸೌಮ್ಯವಾಗಿ ನೆನಪಿಸುವುದು ಅಗತ್ಯವಾಗಿರುತ್ತದೆ' ಎಂದು ಬರೆದಿದ್ದಾರೆ.
ರಾಯುಡು ಅವರ ಪೋಸ್ಟ್ಗೆ ಸಿಎಸ್ಕೆ ಆಟಗಾರರಾದ ದೀಪಕ್ ಚಾಹರ್ ಹಾಗೂ ಮತೀಶ ಪತಿರಣ, ಇಮೋಜಿ ಮೂಲಕ ಕಾಮೆಂಟ್ ಮಾಡಿದ್ದಾರೆ.