<p>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿದೆ.</p><p>ಆರ್ಸಿಬಿ, ಬರೋಬ್ಬರಿ 18 ವರ್ಷದಿಂದ ಪ್ರಶಸ್ತಿ ಬರ ಅನುಭವಿಸುತ್ತಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್ಗೇರಿತ್ತಾದರೂ, 'ಚಾಂಪಿಯನ್' ಎನಿಸಿಕೊಳ್ಳಲು ವಿಫಲವಾಗಿತ್ತು.</p><p>ಈವರೆಗಿನ ಆವೃತ್ತಿಗಳಿಗೆ ಹೋಲಿಸಿದರೆ ಈ ವರ್ಷ ಸಮತೋಲನದಿಂದ ಕೂಡಿರುವ ತಂಡ ಟ್ರೋಫಿಗೆ ಮುತ್ತಿಡುವ ಭರವಸೆ ಮೂಡಿಸಿದೆ. ಹಾಗಾಗಿಯೇ, 'ಈ ಸಲ ಕಪ್ ನಮ್ಮದೇ' ಎನ್ನುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.</p>.<p>ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆಲ್ಲುವ ತಂಡಕ್ಕೆ ಆರ್ಸಿಬಿಯಿಂದ 'ಅಂತಿಮ' ಸವಾಲು ಎದುರಾಗಲಿದೆ. ಫೈನಲ್ ಪಂದ್ಯ ಜೂನ್ 3ರಂದು ಅಹಮದಾಬಾದ್ನಲ್ಲೇ ನಡೆಯಲಿದೆ.</p>.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.IPL 2025: 10 ಜಯ, 9 ಮಂದಿ ಪಂದ್ಯಶ್ರೇಷ್ಠ: ಮ್ಯಾಚ್ವಿನ್ನರ್ಗಳಿಂದ ಕೂಡಿದೆ RCB.<p><strong>ಮುಖ್ಯಮಂತ್ರಿಗೊಂದು ಪತ್ರ<br></strong>ಆರ್ಸಿಬಿ ಫೈನಲ್ಗೇರುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಸತತ 18 ವರ್ಷಗಳಿಂದ ಪ್ರಶಸ್ತಿಗಾಗಿ ಕಾದು ಸಾಕಾಗಿರುವ ಈ ಅಭಿಮಾನಿ, ಮುಖ್ಯಮಂತ್ರಿ ಎದುರು ವಿಶೇಷ ಬೇಡಿಕೆ ಇಟ್ಟಿದ್ದಾರೆ. 'ಈ ಬಾರಿ ಆರ್ಸಿಬಿ ಗೆದ್ದರೆ, ಅಧಿಕೃತ ರಜೆ ನೀಡಬೇಕು. ಟ್ರೋಫಿ ಗೆದ್ದ ದಿನವನ್ನು 'ಕರ್ನಾಟಕ ರಾಜ್ಯ ಆರ್ಸಿಬಿ ಅಭಿಮಾನಿ ಹಬ್ಬ'ವೆಂದು ಘೋಷಿಸಬೇಕು' ಎಂದು ಕೋರಿದ್ದಾರೆ.</p><p>ಮುಂದುವರಿದು, 'ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವಂತೆಯೇ, ಎಲ್ಲ ಜಿಲ್ಲೆಗಳಲ್ಲಿ ಆರ್ಸಿಬಿ ಅಭಿಮಾನಿಗಳ ಹಬ್ಬ ಆಚರಿಸುವುದಕ್ಕೆ ಅನುವು ಮಾಡಿಕೊಡಬೇಕು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿದೆ.</p><p>ಆರ್ಸಿಬಿ, ಬರೋಬ್ಬರಿ 18 ವರ್ಷದಿಂದ ಪ್ರಶಸ್ತಿ ಬರ ಅನುಭವಿಸುತ್ತಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್ಗೇರಿತ್ತಾದರೂ, 'ಚಾಂಪಿಯನ್' ಎನಿಸಿಕೊಳ್ಳಲು ವಿಫಲವಾಗಿತ್ತು.</p><p>ಈವರೆಗಿನ ಆವೃತ್ತಿಗಳಿಗೆ ಹೋಲಿಸಿದರೆ ಈ ವರ್ಷ ಸಮತೋಲನದಿಂದ ಕೂಡಿರುವ ತಂಡ ಟ್ರೋಫಿಗೆ ಮುತ್ತಿಡುವ ಭರವಸೆ ಮೂಡಿಸಿದೆ. ಹಾಗಾಗಿಯೇ, 'ಈ ಸಲ ಕಪ್ ನಮ್ಮದೇ' ಎನ್ನುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ.</p>.<p>ಇಂದು ಅಹಮದಾಬಾದ್ನಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗೆಲ್ಲುವ ತಂಡಕ್ಕೆ ಆರ್ಸಿಬಿಯಿಂದ 'ಅಂತಿಮ' ಸವಾಲು ಎದುರಾಗಲಿದೆ. ಫೈನಲ್ ಪಂದ್ಯ ಜೂನ್ 3ರಂದು ಅಹಮದಾಬಾದ್ನಲ್ಲೇ ನಡೆಯಲಿದೆ.</p>.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.IPL 2025: 10 ಜಯ, 9 ಮಂದಿ ಪಂದ್ಯಶ್ರೇಷ್ಠ: ಮ್ಯಾಚ್ವಿನ್ನರ್ಗಳಿಂದ ಕೂಡಿದೆ RCB.<p><strong>ಮುಖ್ಯಮಂತ್ರಿಗೊಂದು ಪತ್ರ<br></strong>ಆರ್ಸಿಬಿ ಫೈನಲ್ಗೇರುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>ಸತತ 18 ವರ್ಷಗಳಿಂದ ಪ್ರಶಸ್ತಿಗಾಗಿ ಕಾದು ಸಾಕಾಗಿರುವ ಈ ಅಭಿಮಾನಿ, ಮುಖ್ಯಮಂತ್ರಿ ಎದುರು ವಿಶೇಷ ಬೇಡಿಕೆ ಇಟ್ಟಿದ್ದಾರೆ. 'ಈ ಬಾರಿ ಆರ್ಸಿಬಿ ಗೆದ್ದರೆ, ಅಧಿಕೃತ ರಜೆ ನೀಡಬೇಕು. ಟ್ರೋಫಿ ಗೆದ್ದ ದಿನವನ್ನು 'ಕರ್ನಾಟಕ ರಾಜ್ಯ ಆರ್ಸಿಬಿ ಅಭಿಮಾನಿ ಹಬ್ಬ'ವೆಂದು ಘೋಷಿಸಬೇಕು' ಎಂದು ಕೋರಿದ್ದಾರೆ.</p><p>ಮುಂದುವರಿದು, 'ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವಂತೆಯೇ, ಎಲ್ಲ ಜಿಲ್ಲೆಗಳಲ್ಲಿ ಆರ್ಸಿಬಿ ಅಭಿಮಾನಿಗಳ ಹಬ್ಬ ಆಚರಿಸುವುದಕ್ಕೆ ಅನುವು ಮಾಡಿಕೊಡಬೇಕು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>