'ಮೊದಲ ಎಸೆತದಿಂದಲೂ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ಬದಲಾವಣೆ ಉನ್ನತ ದರ್ಜೆಯಲ್ಲಿದ್ದವು. ಅವರ ರಣನೀತಿ ಅದ್ಭುತವಾಗಿತ್ತು ಎಂದು ನನಗೆ ಅನಿಸಿತು. ಮೊದಲ ಆರು ಓವರ್ಗಳಲ್ಲಿ ಭಾರತ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. ನನ್ನ ಪಾಲಿಗೆ ಆರರಿಂದ 10ನೇ ಓವರ್ ವರೆಗಿನ ಹಂತವು ನಿರ್ಣಾಯಕವೆನಿಸಿತ್ತು. ಈ ಅವಧಿಯಲ್ಲಿ ನಾವು 24 ಎಸೆತಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 13 ರನ್ ಮಾತ್ರ ಗಳಿಸಿದೆವು. ಸುಲಭವಾಗಿ ಒಂಟಿ ರನ್ ಕದಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬ್ಯಾಟರ್ಗಳು ದೊಡ್ಡ ಹೊಡೆತಕ್ಕೆ ಮುಂದಾದರು. ಇದರಿಂದಾಗಿ ರೋಹಿತ್ ಹಾಗೂ ವಿರಾಟ್ ಔಟ್ ಆದರು' ಎಂದು ಹೇಳಿದರು.