<p><strong>ವಡೋದರ:</strong> ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಕರ್ನಾಟಕ ತಂಡ 36 ರನ್ಗಳಿಂದ ಪರಾಭವಗೊಳಿಸುವ ಮೂಲಕ ಜಯ ಸಾಧಿಸಿದೆ. ಆ ಮೂಲಕ 5ನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.</p><p>ಟಾಸ್ ಗೆದ್ದಿರುವ ವಿದರ್ಭ ತಂಡ, ಎದುರಾಳಿ ಕರ್ನಾಟಕವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. </p>. <p>ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಕರ್ನಾಟಕ ಪರ ಸಮರನ್ ರವಿಚಂದ್ರನ್ ಭರ್ಜರಿ ಶತಕ (101) ಸಿಡಿಸಿದರು. ಶ್ರೀಜಿತ್ 78, ಅಭಿನವ್ ಮನೋಹರ್ 79 ರನ್ ಬಾರಿಸುವ ಮೂಲಕ ಕರ್ನಾಟಕ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. </p><p>ವಿದರ್ಭ ಪರ ನಚಿಕೇತ್. ದರ್ಶನ್ ತಲಾ 2 ವಿಕೆಟ್ ಪಡೆದರು.</p><p>ಕರ್ನಾಟಕದ ಬೃಹತ್ ಗುರಿಯನ್ನು ಬೆನ್ನಟ್ಟಿದ ವಿದರ್ಭ 48.2 ಓವರ್ಗಳಲ್ಲಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ 312ರನ್ಗಳನ್ನಷ್ಟೇ ಗಳಿಸಿ ಪರಾಭವಗೊಂಡಿತು. ಹರ್ಷ ದುಬೇ 30 ಎಸೆತಗಳಲ್ಲಿ 63 ರನ್ಗಳಿಸಿದರು. </p><p>ವಿಜಯ್ ಹಜಾರೆ ಟ್ರೋಫಿಯನ್ನು ತಮಿಳುನಾಡು ತಂಡ 5ನೇ ಬಾರಿ ಪಡೆದು ದಾಖಲಿ ನಿರ್ಮಿಸಿತ್ತು. ಇದೀಗ ಕರ್ನಾಟಕ ತಂಡವೂ 5 ಬಾರಿ ಈ ಟ್ರೋಫಿಯನ್ನು ಪಡೆದ ಸಾಧನೆ ಮಾಡಿದೆ.</p>.Vijay Hazare Trophy Final: ಕರ್ನಾಟಕಕ್ಕೆ ಕರುಣ್ ಕಟ್ಟಿಹಾಕುವ ಸವಾಲು.Vijay Hazare Trophy | ಫೈನಲ್ನಲ್ಲಿ ಕರುಣ್ ನಾಯರ್–ಕರ್ನಾಟಕ ಮುಖಾಮುಖಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡೋದರ:</strong> ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಕರ್ನಾಟಕ ತಂಡ 36 ರನ್ಗಳಿಂದ ಪರಾಭವಗೊಳಿಸುವ ಮೂಲಕ ಜಯ ಸಾಧಿಸಿದೆ. ಆ ಮೂಲಕ 5ನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.</p><p>ಟಾಸ್ ಗೆದ್ದಿರುವ ವಿದರ್ಭ ತಂಡ, ಎದುರಾಳಿ ಕರ್ನಾಟಕವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. </p>. <p>ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಕರ್ನಾಟಕ ಪರ ಸಮರನ್ ರವಿಚಂದ್ರನ್ ಭರ್ಜರಿ ಶತಕ (101) ಸಿಡಿಸಿದರು. ಶ್ರೀಜಿತ್ 78, ಅಭಿನವ್ ಮನೋಹರ್ 79 ರನ್ ಬಾರಿಸುವ ಮೂಲಕ ಕರ್ನಾಟಕ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. </p><p>ವಿದರ್ಭ ಪರ ನಚಿಕೇತ್. ದರ್ಶನ್ ತಲಾ 2 ವಿಕೆಟ್ ಪಡೆದರು.</p><p>ಕರ್ನಾಟಕದ ಬೃಹತ್ ಗುರಿಯನ್ನು ಬೆನ್ನಟ್ಟಿದ ವಿದರ್ಭ 48.2 ಓವರ್ಗಳಲ್ಲಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ 312ರನ್ಗಳನ್ನಷ್ಟೇ ಗಳಿಸಿ ಪರಾಭವಗೊಂಡಿತು. ಹರ್ಷ ದುಬೇ 30 ಎಸೆತಗಳಲ್ಲಿ 63 ರನ್ಗಳಿಸಿದರು. </p><p>ವಿಜಯ್ ಹಜಾರೆ ಟ್ರೋಫಿಯನ್ನು ತಮಿಳುನಾಡು ತಂಡ 5ನೇ ಬಾರಿ ಪಡೆದು ದಾಖಲಿ ನಿರ್ಮಿಸಿತ್ತು. ಇದೀಗ ಕರ್ನಾಟಕ ತಂಡವೂ 5 ಬಾರಿ ಈ ಟ್ರೋಫಿಯನ್ನು ಪಡೆದ ಸಾಧನೆ ಮಾಡಿದೆ.</p>.Vijay Hazare Trophy Final: ಕರ್ನಾಟಕಕ್ಕೆ ಕರುಣ್ ಕಟ್ಟಿಹಾಕುವ ಸವಾಲು.Vijay Hazare Trophy | ಫೈನಲ್ನಲ್ಲಿ ಕರುಣ್ ನಾಯರ್–ಕರ್ನಾಟಕ ಮುಖಾಮುಖಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>