2016ರಲ್ಲಿ ವಾಡಾ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತದಲ್ಲೂ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ನಡೆದಿದ್ದವು ಎಂಬ ಮಾಹಿತಿ ಇತ್ತು. ಆದರೆ ವರದಿಯನ್ನು ಬಿಸಿಸಿಐಬಹಿರಂಗಪಡಿಸಿರಲಿಲ್ಲ. ಈಗ, ಪ್ರದೀಪ್ ಸಾಂಗ್ವಾನ್, ಯೂಸುಫ್ ಪಠಾಣ್ ಮತ್ತು ಅಭಿಷೇಕ್ ಗುಪ್ತಾ ಕೂಡ ವಿವಿಧ ಆವೃತ್ತಿಗಳಲ್ಲಿ ಉದ್ದೀಪನ ಮದ್ದು ಸೇವಿಸಿದ್ದಾಗಿ ಬಿಸಿಸಿಐ ಹೇಳಿದೆ.