ರಾಜಸ್ಥಾನದ ರಣಥಂಬೋರ್ ಸಮೀಪ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಅದರಲ್ಲಿ ಅಜರ್ ಜೊತೆಗೆ ಇನ್ನೂ ಮೂವರು ವ್ಯಕ್ತಿಗಳಿದ್ದರು. ಕಾರು ಪಲ್ಟಿಯಾಗುವ ಮುನ್ನ ರಸ್ತೆ ಬದಿಯ ಹೋಟೆಲ್ಗೂ ಡಿಕ್ಕಿಯಾಗಿತ್ತೆನ್ನಲಾಗಿದೆ. ಅಜರ್, ಸಹಪ್ರಯಾಣಿಕರು ಮತ್ತು ಅಂಗಡಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಎಲ್ಲರೂ ಮನೆಗೆ ತೆರಳಿದರು. ಅಜರುದ್ದೀನ್ ಅವರು ಇನ್ನೊಂದು ವಾಹನದಲ್ಲಿ ಪ್ರಯಾಣ ಬೆಳೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.