<p><strong>ನವದೆಹಲಿ:</strong> ‘2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.</p><p>ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ‘ಸ್ಪೋರ್ಟ್ಸ್ ಟುಡೆ’ ಜೊತೆ ಮಾತನಾಡಿರುವ ಗವಾಸ್ಕರ್, ‘ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಿದವರು. ಬರಲಿರುವ ದಿನಗಳಲ್ಲಿ ಈ ಇಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಶತಕಗಳ ಮೇಲೆ, ಶತಕಗಳನ್ನು ಭಾರಿಸಲಿದ್ದಾರೆ. ದೇವರೂ ಇವರನ್ನು ತಡೆಯಲಾರರು’ ಎಂದಿದ್ದಾರೆ.</p><p>‘ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದದ್ದು ಅಚ್ಚರಿಯ ಸಂಗತಿಯಲ್ಲ. ಇಬ್ಬರೂ ಆಟಗಾರರು ಆಯ್ಕೆ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿಯೇ ಈ ತೀರ್ಮಾನಕ್ಕೆ ಬಂದಂತಿದೆ. ಜತೆಗೆ ತಾವು ತೆಗೆದುಕೊಂಡ ನಿರ್ಧಾರದ ಕುರಿತು ಅವರಿಗೆ ಸಂತಸವಿದ್ದಂತಿದೆ’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.</p><p>ಆಯ್ಕೆ ಸಮಿತಿಯ ಹಾಲಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಕಾರ್ಯವೈಖರಿಯನ್ನು ಹೊಗಳಿರುವ ಅವರು, ಭಾರತದ ಕ್ರಿಕೆಟ್ನ ಹಿತಾಸಕ್ತಿಗೆ ಪೂರಕವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.</p>.<h3>ಬೂಮ್ರಾ ಟೆಸ್ಟ್ ತಂಡದ ನಾಯಕರಾಗಲಿ</h3><p>ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಸಂದರ್ಭದಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಅವರು ನಾಯಕರಾಗಲಿ ಎಂದು ಸುನಿಲ್ ಗವಾಸ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.</p><p>‘ಬೂಮ್ರಾ ವಿಕೆಟ್ ತೆಗೆಯುವ ಬೌಲರ್. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೇ ನಾಯಕನನ್ನಾಗಿ ಮಾಡಿದರೂ ಅವರು ಒಂದು ಹೆಚ್ಚುವರಿ ಓವರ್ ತೆಗೆದುಕೊಳ್ಳಲಿದ್ದಾರೆ. ಆದರೆ ತಂಡಕ್ಕೆ ಆ ಒಂದು ಹೆಚ್ಚುವರಿ ಓವರ್ ಬೇಕಾಗಿದೆ’ ಎಂದಿದ್ದಾರೆ.</p><p>‘ರೋಹಿತ್ ಶರ್ಮಾ ತನ್ನ ಸ್ವಂತಕ್ಕಾಗಿ ಆಡಿದ ಆಟಗಾರನಲ್ಲ. ಆಡಿದ ಅಷ್ಟೂ ಪಂದ್ಯಗಳನ್ನು ಅವರು ಸಂಭ್ರಮಿಸಿದ್ದಾರೆ. ಶತಕದ ಹೊಸ್ತಿಲಲ್ಲೂ ಸವಾಲುಗಳನ್ನು ಎದುರಿಸುವ ಅವರ ಮನೋಭಾವವೇ ಅವರನ್ನು ಹಲವು ಶತಕಗಳಿಂದ ವಂಚಿತರನ್ನಾಗಿಸಿದೆ. ಹೀಗಾಗಿ ಅವರ ಆಟವನ್ನು ನೋಡಲು ಸಂತಸವೆನಿಸುತ್ತದೆ’ ಎಂದು ಗವಾಸ್ಕರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘2027ರಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.</p><p>ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ‘ಸ್ಪೋರ್ಟ್ಸ್ ಟುಡೆ’ ಜೊತೆ ಮಾತನಾಡಿರುವ ಗವಾಸ್ಕರ್, ‘ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಿದವರು. ಬರಲಿರುವ ದಿನಗಳಲ್ಲಿ ಈ ಇಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಶತಕಗಳ ಮೇಲೆ, ಶತಕಗಳನ್ನು ಭಾರಿಸಲಿದ್ದಾರೆ. ದೇವರೂ ಇವರನ್ನು ತಡೆಯಲಾರರು’ ಎಂದಿದ್ದಾರೆ.</p><p>‘ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದದ್ದು ಅಚ್ಚರಿಯ ಸಂಗತಿಯಲ್ಲ. ಇಬ್ಬರೂ ಆಟಗಾರರು ಆಯ್ಕೆ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿಯೇ ಈ ತೀರ್ಮಾನಕ್ಕೆ ಬಂದಂತಿದೆ. ಜತೆಗೆ ತಾವು ತೆಗೆದುಕೊಂಡ ನಿರ್ಧಾರದ ಕುರಿತು ಅವರಿಗೆ ಸಂತಸವಿದ್ದಂತಿದೆ’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.</p><p>ಆಯ್ಕೆ ಸಮಿತಿಯ ಹಾಲಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಕಾರ್ಯವೈಖರಿಯನ್ನು ಹೊಗಳಿರುವ ಅವರು, ಭಾರತದ ಕ್ರಿಕೆಟ್ನ ಹಿತಾಸಕ್ತಿಗೆ ಪೂರಕವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.</p>.<h3>ಬೂಮ್ರಾ ಟೆಸ್ಟ್ ತಂಡದ ನಾಯಕರಾಗಲಿ</h3><p>ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಸಂದರ್ಭದಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಅವರು ನಾಯಕರಾಗಲಿ ಎಂದು ಸುನಿಲ್ ಗವಾಸ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.</p><p>‘ಬೂಮ್ರಾ ವಿಕೆಟ್ ತೆಗೆಯುವ ಬೌಲರ್. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೇ ನಾಯಕನನ್ನಾಗಿ ಮಾಡಿದರೂ ಅವರು ಒಂದು ಹೆಚ್ಚುವರಿ ಓವರ್ ತೆಗೆದುಕೊಳ್ಳಲಿದ್ದಾರೆ. ಆದರೆ ತಂಡಕ್ಕೆ ಆ ಒಂದು ಹೆಚ್ಚುವರಿ ಓವರ್ ಬೇಕಾಗಿದೆ’ ಎಂದಿದ್ದಾರೆ.</p><p>‘ರೋಹಿತ್ ಶರ್ಮಾ ತನ್ನ ಸ್ವಂತಕ್ಕಾಗಿ ಆಡಿದ ಆಟಗಾರನಲ್ಲ. ಆಡಿದ ಅಷ್ಟೂ ಪಂದ್ಯಗಳನ್ನು ಅವರು ಸಂಭ್ರಮಿಸಿದ್ದಾರೆ. ಶತಕದ ಹೊಸ್ತಿಲಲ್ಲೂ ಸವಾಲುಗಳನ್ನು ಎದುರಿಸುವ ಅವರ ಮನೋಭಾವವೇ ಅವರನ್ನು ಹಲವು ಶತಕಗಳಿಂದ ವಂಚಿತರನ್ನಾಗಿಸಿದೆ. ಹೀಗಾಗಿ ಅವರ ಆಟವನ್ನು ನೋಡಲು ಸಂತಸವೆನಿಸುತ್ತದೆ’ ಎಂದು ಗವಾಸ್ಕರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>