<p><strong>ಬ್ಯಾಂಬೊಲಿಮ್ (ಗೋವಾ):</strong> ರಾಯ್ ಕೃಷ್ಣ ಅವರ ಕಾಲ್ಚಳಕದ ಮೋಡಿಯಿಂದಾಗಿ ಎಟಿಕೆ ಮೋಹನ್ ಬಾಗನ್ ತಂಡವು ಶುಕ್ರವಾರ ಆರಂಭವಾದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.</p>.<p>ಕೊರೊನಾ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಕ್ರೀಡಾ ಚಟುವಟಿಕೆಯಾಗಿ ಐಎಸ್ಎಲ್ ಆರಂಭವಾಯಿತು.</p>.<p>ಗೋವಾದ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ತುರುಸಿನ ಪೈಪೋಟಿಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡವು 1–0 ಯಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯಭೇರಿ ಬಾರಿಸಿತು.</p>.<p>ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆಟಗಾರರ ಪೈಪೋಟಿ ಜೋರಾಗಿತ್ತು. ಡಿಜಿಟಲ್ ಫ್ಯಾನ್ ವಾಲ್ನಲ್ಲಿ ದೇಶ, ವಿದೇಶಗಳ ಅಭಿಮಾನಿಗಳು ಪಂದ್ಯ ವೀಕ್ಷಿಸಿದರು. ಈ ವಾತಾವರಣದಲ್ಲಿಯೂ ಆಟಗಾರರ ಉತ್ಸಾಹಕ್ಕೆ ಕೊರತೆ ಇರಲಿಲ್ಲ.</p>.<p>ಪಂದ್ಯದ 67ನೇ ನಿಮಿಷದವರೆಗೂ ಎರಡೂ ತಂಡಗಳಿಗೆ ಗೋಲು ಒಲಿಯಲಿಲ್ಲ. ಅಷ್ಟರ ಮಟ್ಟಿಗೆ ಉಭಯ ತಂಡಗಳ ರಕ್ಷಣಾ ಪಡೆಯು ಜಿಗುಟುತನದ ಅಟ ತೋರಿದವು. ಆದರೆ, ರಾಯ್ ಕೃಷ್ಣ ಕೊನೆಗೂ ತಮ್ಮ ಚುರುಕುತನಿಂದ ಕೇರಳದ ಗೋಡೆಯನ್ನು ಪುಡಿಗಟ್ಟಿ ಗೋಲಿನ ಕಾಣಿಕೆ ನೀಡಿದರು.</p>.<p>ಕೇರಳದ ಅನುಭವಿ ಗೋಲ್ಕೀಪರ್ ಗೋಮ್ಸ್ ಅವರನ್ನು ವಂಚಿಸಿದ ಕೃಷ್ಣ ತಮ್ಮ ಮೋಡಿ ತೋರಿಸಿದರು. ಎಟಿಕೆ ತಂಡವು ಎರಡು ಬಾರಿ ಗೋಲ್ ಪೋಸ್ಟ್ ಬಳಿ ಸಾಗಿ ವಿಫಲವಾಗಿತ್ತು.</p>.<p>ಆದರೆ, ಪಾಸಿಂಗ್ನಲ್ಲಿಅಮೋಘ ಚುರುಕುತನ ಮತ್ತು ಶಿಸ್ತು ತೋರಿದ ಕೇರಳ ತಂಡವು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.</p>.<p>ಪಂದ್ಯದಲ್ಲಿ ಕೇರಳ ತಂಡದ ಫೆಸುಂಡೊ ಪೆರೇರಾ (89ನೇ ನಿಮಿಷ) ಮತ್ತು ಸಹಲ್ ಅಬ್ದುಲ್ ಸಮದ್ (78ನೇ ನಿ) ಒರಟು ಆಟವಾಡಿ ಹಳದಿ ಕಾರ್ಡ್ ದರ್ಶನ ಮಾಡಿದರು.</p>.<p>42ನೇ ನಿಮಿಷದಲ್ಲಿ ಎಟಿಕೆಯ ಎಡು ಗಾರ್ಸಿಯಾ ಅವರಿಗೂ ರೆಫರಿ ಹಳದಿ ಕಾರ್ಡ್ ತೋರಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಬೊಲಿಮ್ (ಗೋವಾ):</strong> ರಾಯ್ ಕೃಷ್ಣ ಅವರ ಕಾಲ್ಚಳಕದ ಮೋಡಿಯಿಂದಾಗಿ ಎಟಿಕೆ ಮೋಹನ್ ಬಾಗನ್ ತಂಡವು ಶುಕ್ರವಾರ ಆರಂಭವಾದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.</p>.<p>ಕೊರೊನಾ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಕ್ರೀಡಾ ಚಟುವಟಿಕೆಯಾಗಿ ಐಎಸ್ಎಲ್ ಆರಂಭವಾಯಿತು.</p>.<p>ಗೋವಾದ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ತುರುಸಿನ ಪೈಪೋಟಿಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡವು 1–0 ಯಿಂದ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯಭೇರಿ ಬಾರಿಸಿತು.</p>.<p>ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆಟಗಾರರ ಪೈಪೋಟಿ ಜೋರಾಗಿತ್ತು. ಡಿಜಿಟಲ್ ಫ್ಯಾನ್ ವಾಲ್ನಲ್ಲಿ ದೇಶ, ವಿದೇಶಗಳ ಅಭಿಮಾನಿಗಳು ಪಂದ್ಯ ವೀಕ್ಷಿಸಿದರು. ಈ ವಾತಾವರಣದಲ್ಲಿಯೂ ಆಟಗಾರರ ಉತ್ಸಾಹಕ್ಕೆ ಕೊರತೆ ಇರಲಿಲ್ಲ.</p>.<p>ಪಂದ್ಯದ 67ನೇ ನಿಮಿಷದವರೆಗೂ ಎರಡೂ ತಂಡಗಳಿಗೆ ಗೋಲು ಒಲಿಯಲಿಲ್ಲ. ಅಷ್ಟರ ಮಟ್ಟಿಗೆ ಉಭಯ ತಂಡಗಳ ರಕ್ಷಣಾ ಪಡೆಯು ಜಿಗುಟುತನದ ಅಟ ತೋರಿದವು. ಆದರೆ, ರಾಯ್ ಕೃಷ್ಣ ಕೊನೆಗೂ ತಮ್ಮ ಚುರುಕುತನಿಂದ ಕೇರಳದ ಗೋಡೆಯನ್ನು ಪುಡಿಗಟ್ಟಿ ಗೋಲಿನ ಕಾಣಿಕೆ ನೀಡಿದರು.</p>.<p>ಕೇರಳದ ಅನುಭವಿ ಗೋಲ್ಕೀಪರ್ ಗೋಮ್ಸ್ ಅವರನ್ನು ವಂಚಿಸಿದ ಕೃಷ್ಣ ತಮ್ಮ ಮೋಡಿ ತೋರಿಸಿದರು. ಎಟಿಕೆ ತಂಡವು ಎರಡು ಬಾರಿ ಗೋಲ್ ಪೋಸ್ಟ್ ಬಳಿ ಸಾಗಿ ವಿಫಲವಾಗಿತ್ತು.</p>.<p>ಆದರೆ, ಪಾಸಿಂಗ್ನಲ್ಲಿಅಮೋಘ ಚುರುಕುತನ ಮತ್ತು ಶಿಸ್ತು ತೋರಿದ ಕೇರಳ ತಂಡವು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.</p>.<p>ಪಂದ್ಯದಲ್ಲಿ ಕೇರಳ ತಂಡದ ಫೆಸುಂಡೊ ಪೆರೇರಾ (89ನೇ ನಿಮಿಷ) ಮತ್ತು ಸಹಲ್ ಅಬ್ದುಲ್ ಸಮದ್ (78ನೇ ನಿ) ಒರಟು ಆಟವಾಡಿ ಹಳದಿ ಕಾರ್ಡ್ ದರ್ಶನ ಮಾಡಿದರು.</p>.<p>42ನೇ ನಿಮಿಷದಲ್ಲಿ ಎಟಿಕೆಯ ಎಡು ಗಾರ್ಸಿಯಾ ಅವರಿಗೂ ರೆಫರಿ ಹಳದಿ ಕಾರ್ಡ್ ತೋರಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>