‘ಮಕ್ಕಳಿಗೆ ಪೋಷಕಾಂಶ ಭರಿತ ಹಾಗೂ ಗುಣಮಟ್ಟದ ಆಹಾರ ನೀಡಬೇಕಾದ್ದು ಪ್ರಥಮ ಕರ್ತವ್ಯ. ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕೆ ನೀಡುವ ಕಾಳಜಿ, ಮುಂದೊಂದು ದಿನ ಅವರ ಹಾಗೂ ದೇಶದ ಭವಿಷ್ಯಕ್ಕೆ ಬುನಾದಿಯಾಗಲಿದೆ’ ಎಂದು ಸಚಿನ್ ಅಭಿಪ್ರಾಯಪಟ್ಟರು.
‘ಮಕ್ಕಳು ಅತ್ಯುತ್ತಮ ಗುರುಗಳು. ಅತಿ ಸಣ್ಣ ವಿಷಯಗಳಲ್ಲೂ ದೊಡ್ಡ ಸಂಗತಿಯನ್ನು ಅವರು ತೋರಿಸಬಲ್ಲರು. ಶಾಲಾ ದಿನಗಳಲ್ಲಿ ಎಲ್ಲರೂ ತರುತ್ತಿದ್ದ ಊಟದ ಒಂದು ಪಾಲನ್ನು ಎತ್ತಿಡುತ್ತಿದ್ದರು. ಅದನ್ನು ನಂತರ ಪಕ್ಷಿಗಳಿಗೆ ನೀಡುತ್ತಿದ್ದ ಸಂಗತಿಯಂತೂ ದೊಡ್ಡ ಪಾಠ’ ಎಂದು ಸಚಿನ್ ಹೇಳಿದ್ದಾರೆ.
‘ಶ್ರೀಲಂಕಾದ ಹಲವು ಮನೆಗಳಲ್ಲಿ ಇಂದಿಗೂ ಕುಟುಂಬಕ್ಕೆ ಅಗತ್ಯವಿರುವ ಗುಣಮಟ್ಟದ ಹಾಗೂ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತಿಲ್ಲ ಎಂದು ಕೇಳಿ ಬೇಸರವೆನಿಸುತ್ತದೆ’ ಎಂದು ಆಘಾತ ವ್ಯಕ್ತಪಡಿಸಿದರು.
ನಂತರ ಮಕ್ಕಳೊಂದಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.