<p><strong>ಅಹಮದಾಬಾದ್</strong>: ಮಧ್ಯಮ ಕ್ರಮಾಂಕದ ಬ್ಯಾಟರ್ ಅನುಕೂಲ್ ರಾಯ್ (ಔಟಾಗದೇ 95; 58ಎ) ಅವರ ಏಕಾಂಗಿ ಹೋರಾಟದ ಬಲದಿಂದ ಜಾರ್ಖಂಡ್ ತಂಡವು ಶುಕ್ರವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಎರಡು ವಿಕೆಟ್ಗಳ ರೋಚಕ ಜಯ ಸಾಧಿಸಿತು.</p>.<p>ಕೊನೆಯ ಓವರ್ವರೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆ ಜಾರ್ಖಂಡ್ ಜಯಭೇರಿ ಬಾರಿಸಿತು. ಸತತ ಎರಡು ಪಂದ್ಯಗಳನ್ನು ಗೆದ್ದ ಜಾರ್ಖಂಡ್ (8 ಅಂಕ) ತಂಡವು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. </p>.<p>158 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್ ತಂಡವು ಒಂದು ಹಂತದಲ್ಲಿ 60 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಅನುಕೂಲ್ ಅವರು ಛಲಬಿಡದೆ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.</p>.<p>ಟಾಸ್ ಗೆದ್ದ ಜಾರ್ಖಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡಕ್ಕೆ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 157 ರನ್ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ನಾಯಕ ಮಯಂಕ್ ಅಗರವಾಲ್ (37;28ಎ) ಮತ್ತು ಸ್ಮರಣ್ ರವಿಚಂದ್ರನ್ (32;29ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎದುರಾಳಿ ತಂಡದ ಸುಶಾಂತ್ ಮಿಶ್ರಾ ಮೂರು ವಿಕೆಟ್ ಪಡೆದರೆ, ಸೌರಭ್ ಶೇಖರ್ ಮತ್ತು ಅನುಕೂಲ್ ರಾಯ್ ತಲಾ ಎರಡು ವಿಕೆಟ್ ಪಡೆದರು. </p>.<p>ಜಾರ್ಖಂಡ್ ತಂಡಕ್ಕೆ ಆರಂಭದಲ್ಲೇ ವಿದ್ಯಾಧರ ಪಾಟೀಲ್ (45ಕ್ಕೆ 3) ಪೆಟ್ಟು ನೀಡಿದರು. 38 ರನ್ ಗಳಿಸುವಷ್ಟರಲ್ಲಿ ಆರಂಭದ ಮೂರು ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ, ಈ ಹಂತದಲ್ಲಿ ಕ್ರೀಸ್ಗೆ ಬಂದ ಅನುಕೂಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಅವರ ಇನಿಂಗ್ಸ್ನಲ್ಲಿ ಐದು ಸಿಕ್ಸರ್, ಒಂಬತ್ತು ಬೌಂಡರಿಗಳಿದ್ದವು. </p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್ಗಳಲ್ಲಿ 9 ವಿಕೆಟ್ಗೆ 157 (ಮಯಂಕ್ ಅಗರವಾಲ್ 37, ಆರ್.ಸ್ಮರಣ್ 32; ಅನುಕೂಲ್ ರಾಯ್ 13ಕ್ಕೆ 2, ಸುಶಾಂತ್ ಮಿಶ್ರಾ 39ಕ್ಕೆ 3); ಜಾರ್ಖಂಡ್: 19.4 ಓವರ್ಗಳಲ್ಲಿ 8 ವಿಕೆಟ್ಗೆ 158 (ಅನುಕೂಲ್ ರಾಯ್ ಔಟಾಗದೇ 95; ವಿದ್ಯಾಧರ ಪಾಟೀಲ 45ಕ್ಕೆ 3). ಫಲಿತಾಂಶ: ಜಾರ್ಖಂಡ್ಗೆ 2 ವಿಕೆಟ್ಗಳ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್</strong>: ಮಧ್ಯಮ ಕ್ರಮಾಂಕದ ಬ್ಯಾಟರ್ ಅನುಕೂಲ್ ರಾಯ್ (ಔಟಾಗದೇ 95; 58ಎ) ಅವರ ಏಕಾಂಗಿ ಹೋರಾಟದ ಬಲದಿಂದ ಜಾರ್ಖಂಡ್ ತಂಡವು ಶುಕ್ರವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಎರಡು ವಿಕೆಟ್ಗಳ ರೋಚಕ ಜಯ ಸಾಧಿಸಿತು.</p>.<p>ಕೊನೆಯ ಓವರ್ವರೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆ ಜಾರ್ಖಂಡ್ ಜಯಭೇರಿ ಬಾರಿಸಿತು. ಸತತ ಎರಡು ಪಂದ್ಯಗಳನ್ನು ಗೆದ್ದ ಜಾರ್ಖಂಡ್ (8 ಅಂಕ) ತಂಡವು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. </p>.<p>158 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್ ತಂಡವು ಒಂದು ಹಂತದಲ್ಲಿ 60 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಅನುಕೂಲ್ ಅವರು ಛಲಬಿಡದೆ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.</p>.<p>ಟಾಸ್ ಗೆದ್ದ ಜಾರ್ಖಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡಕ್ಕೆ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 157 ರನ್ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ನಾಯಕ ಮಯಂಕ್ ಅಗರವಾಲ್ (37;28ಎ) ಮತ್ತು ಸ್ಮರಣ್ ರವಿಚಂದ್ರನ್ (32;29ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎದುರಾಳಿ ತಂಡದ ಸುಶಾಂತ್ ಮಿಶ್ರಾ ಮೂರು ವಿಕೆಟ್ ಪಡೆದರೆ, ಸೌರಭ್ ಶೇಖರ್ ಮತ್ತು ಅನುಕೂಲ್ ರಾಯ್ ತಲಾ ಎರಡು ವಿಕೆಟ್ ಪಡೆದರು. </p>.<p>ಜಾರ್ಖಂಡ್ ತಂಡಕ್ಕೆ ಆರಂಭದಲ್ಲೇ ವಿದ್ಯಾಧರ ಪಾಟೀಲ್ (45ಕ್ಕೆ 3) ಪೆಟ್ಟು ನೀಡಿದರು. 38 ರನ್ ಗಳಿಸುವಷ್ಟರಲ್ಲಿ ಆರಂಭದ ಮೂರು ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡಿದ್ದರು. ಆದರೆ, ಈ ಹಂತದಲ್ಲಿ ಕ್ರೀಸ್ಗೆ ಬಂದ ಅನುಕೂಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಅವರ ಇನಿಂಗ್ಸ್ನಲ್ಲಿ ಐದು ಸಿಕ್ಸರ್, ಒಂಬತ್ತು ಬೌಂಡರಿಗಳಿದ್ದವು. </p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್ಗಳಲ್ಲಿ 9 ವಿಕೆಟ್ಗೆ 157 (ಮಯಂಕ್ ಅಗರವಾಲ್ 37, ಆರ್.ಸ್ಮರಣ್ 32; ಅನುಕೂಲ್ ರಾಯ್ 13ಕ್ಕೆ 2, ಸುಶಾಂತ್ ಮಿಶ್ರಾ 39ಕ್ಕೆ 3); ಜಾರ್ಖಂಡ್: 19.4 ಓವರ್ಗಳಲ್ಲಿ 8 ವಿಕೆಟ್ಗೆ 158 (ಅನುಕೂಲ್ ರಾಯ್ ಔಟಾಗದೇ 95; ವಿದ್ಯಾಧರ ಪಾಟೀಲ 45ಕ್ಕೆ 3). ಫಲಿತಾಂಶ: ಜಾರ್ಖಂಡ್ಗೆ 2 ವಿಕೆಟ್ಗಳ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>