<p><strong>ಬೆಂಗಳೂರು:</strong> ನಾಯಕನಿಗೆ ತಕ್ಕ ಆಟವಾಡಿದ ನಿಕಿನ್ ಜೋಸ್ ಅವರ ಜವಾಬ್ದಾಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಇಲೆವನ್ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಚೇತರಿಸಿಕೊಂಡಿತು. </p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಧ್ಯಪ್ರದೇಶ ತಂಡವು 101.2 ಓವರ್ಗಳಲ್ಲಿ 338 ರನ್ ಗಳಿಸಿತು. ಅದಕ್ಕುತ್ತರವಾಗಿ ಕೆಎಸ್ಸಿಎ ತಂಡವು ಶನಿವಾರ ದಿನದಾಟದ ಮುಕ್ತಾಯಕ್ಕೆ 58 ಓವರ್ಗಳಲ್ಲಿ 4 ವಿಕೆಟ್ಗಳಿಗೆ 163 ರನ್ ಗಳಿಸಿದೆ. ನಿಕಿನ್ (ಬ್ಯಾಟಿಂಗ್ 58; 133ಎಸೆತ) ಮತ್ತು ಪಿ ಧ್ರುವ (ಬ್ಯಾಟಿಂಗ್ 28) ಅವರು ತಂಡದ ಕುಸಿತ ತಡೆದರು. </p>.<p>ಕುಮಾರ್ ಕಾರ್ತಿಕೇಯ (35ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಕರ್ನಾಟಕ ತಂಡವು ಇನಿಂಗ್ಸ್ ಆರಂಭದಲ್ಲಿ ಆಘಾತ ಅನುಭವಿಸಿತು. 74 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಲೋಚನ್ ಎಸ್ ಗೌಡ (20; 55ಎ), ತುಷಾರ್ ಸಿಂಗ್ (35; 72ಎ), ಫೈಜಾನ್ ಖಾನ್ (1; 3ಎ) ಅವರು ಬೇಗನೆ ನಿರ್ಗಮಿಸಿದರು. </p>.<p>ಆದರೆ ಇನ್ನೊಂದು ಬದಿಯಲ್ಲಿ ತಾಳ್ಮೆಯಿಂದ ಆಡುತ್ತಿದ್ದ ನಿಕಿನ್ ಇನಿಂಗ್ಸ್ಗೆ ಬಲ ತುಂಬಿದರು. ಅವರೊಂದಿಗೆ ಒಂದಿಷ್ಟು ಹೊತ್ತು ಕ್ರೀಸ್ನಲ್ಲಿದ್ದ ಸಮಿತ್ ದ್ರಾವಿಡ್ 25 ಎಸೆತಗಳಲ್ಲಿ 9 ರನ್ ಗಳಿಸಿದರು. ಆರ್ಯನ್ ಪಾಂಡೆ ಬೌಲಿಂಗ್ನಲ್ಲಿ ಹಿಮಾಂಶು ಮಂತ್ರಿ ಪಡೆದ ಕ್ಯಾಚ್ಗೆ ಸಮಿತ್ ಔಟಾದರು. ನಿಕಿನ್ ಜೊತೆಗೂಡಿದ ಧ್ರುವ ಅವರು ತಾಳ್ಮೆಯ ಆಟವಾಡಿದರು. ಇದರೊಂದಿಗೆ ವಿಕೆಟ್ ಪತನಕ್ಕೆ ತಡೆಯೊಡ್ಡಿದರು. </p>.<p>ಪಂದ್ಯದಲ್ಲಿ ಇನ್ನೆರಡು ದಿನಗಳು ಬಾಕಿ ಇವೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವ ತಂಡಕ್ಕೆ ಪ್ರಶಸ್ತಿ ಗೆಲುವಿನ ಅವಕಾಶ ಹೆಚ್ಚು.</p>.<p>ಇದಕ್ಕೂ ಮುನ್ನ ಮಧ್ಯಪ್ರದೇಶ ತಂಡದ ವೆಂಕಟೇಶ್ ಅಯ್ಯರ್ (48 ರನ್) ಕೇವಲ ಎರಡು ರನ್ಗಳ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರು. ಕರ್ನಾಟಕದ ವೇಗಿ ಎಂ. ವೆಂಕಟೇಶ್ ಅವರು (75ಕ್ಕೆ5) ಮಿಂಚಿದರು.</p>.<p><strong>ಸಂಕ್ಷಿಪ್ತ ಸ್ಕೋರು:</strong> </p><p><strong>ಮಧ್ಯಪ್ರದೇಶ:</strong> 101.2 ಓವರ್ಗಳಲ್ಲಿ 338 (ವೆಂಕಟೇಶ್ ಅಯ್ಯರ್ 48, ಎಂ. ವೆಂಕಟೇಶ್ 75ಕ್ಕೆ5, ಮಾಧವ್ ಪಿ ಬಜಾಜ್ 105ಕ್ಕೆ3) </p><p><strong>ಕೆಎಸ್ಸಿಎ ಕಾರ್ಯದರ್ಶಿ ಇಲೆವನ್:</strong> 58 ಓವರ್ಗಳಲ್ಲಿ 4ಕ್ಕೆ163 (ಲೋಚನ್ ಎಸ್ ಗೌಡ 20, ಎಸ್.ಜೆ. ನಿಕಿನ್ ಜೋಸ್ ಔಟಾಗದೇ 58, ತುಷಾರ್ ಸಿಂಗ್ 35, ಪಿ. ಧ್ರುವ ಔಟಾಗದೇ 28, ಕುಮಾರ ಕಾರ್ತಿಕೇಯ 35ಕ್ಕೆ2) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಯಕನಿಗೆ ತಕ್ಕ ಆಟವಾಡಿದ ನಿಕಿನ್ ಜೋಸ್ ಅವರ ಜವಾಬ್ದಾಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಇಲೆವನ್ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಚೇತರಿಸಿಕೊಂಡಿತು. </p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಧ್ಯಪ್ರದೇಶ ತಂಡವು 101.2 ಓವರ್ಗಳಲ್ಲಿ 338 ರನ್ ಗಳಿಸಿತು. ಅದಕ್ಕುತ್ತರವಾಗಿ ಕೆಎಸ್ಸಿಎ ತಂಡವು ಶನಿವಾರ ದಿನದಾಟದ ಮುಕ್ತಾಯಕ್ಕೆ 58 ಓವರ್ಗಳಲ್ಲಿ 4 ವಿಕೆಟ್ಗಳಿಗೆ 163 ರನ್ ಗಳಿಸಿದೆ. ನಿಕಿನ್ (ಬ್ಯಾಟಿಂಗ್ 58; 133ಎಸೆತ) ಮತ್ತು ಪಿ ಧ್ರುವ (ಬ್ಯಾಟಿಂಗ್ 28) ಅವರು ತಂಡದ ಕುಸಿತ ತಡೆದರು. </p>.<p>ಕುಮಾರ್ ಕಾರ್ತಿಕೇಯ (35ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಕರ್ನಾಟಕ ತಂಡವು ಇನಿಂಗ್ಸ್ ಆರಂಭದಲ್ಲಿ ಆಘಾತ ಅನುಭವಿಸಿತು. 74 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಲೋಚನ್ ಎಸ್ ಗೌಡ (20; 55ಎ), ತುಷಾರ್ ಸಿಂಗ್ (35; 72ಎ), ಫೈಜಾನ್ ಖಾನ್ (1; 3ಎ) ಅವರು ಬೇಗನೆ ನಿರ್ಗಮಿಸಿದರು. </p>.<p>ಆದರೆ ಇನ್ನೊಂದು ಬದಿಯಲ್ಲಿ ತಾಳ್ಮೆಯಿಂದ ಆಡುತ್ತಿದ್ದ ನಿಕಿನ್ ಇನಿಂಗ್ಸ್ಗೆ ಬಲ ತುಂಬಿದರು. ಅವರೊಂದಿಗೆ ಒಂದಿಷ್ಟು ಹೊತ್ತು ಕ್ರೀಸ್ನಲ್ಲಿದ್ದ ಸಮಿತ್ ದ್ರಾವಿಡ್ 25 ಎಸೆತಗಳಲ್ಲಿ 9 ರನ್ ಗಳಿಸಿದರು. ಆರ್ಯನ್ ಪಾಂಡೆ ಬೌಲಿಂಗ್ನಲ್ಲಿ ಹಿಮಾಂಶು ಮಂತ್ರಿ ಪಡೆದ ಕ್ಯಾಚ್ಗೆ ಸಮಿತ್ ಔಟಾದರು. ನಿಕಿನ್ ಜೊತೆಗೂಡಿದ ಧ್ರುವ ಅವರು ತಾಳ್ಮೆಯ ಆಟವಾಡಿದರು. ಇದರೊಂದಿಗೆ ವಿಕೆಟ್ ಪತನಕ್ಕೆ ತಡೆಯೊಡ್ಡಿದರು. </p>.<p>ಪಂದ್ಯದಲ್ಲಿ ಇನ್ನೆರಡು ದಿನಗಳು ಬಾಕಿ ಇವೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವ ತಂಡಕ್ಕೆ ಪ್ರಶಸ್ತಿ ಗೆಲುವಿನ ಅವಕಾಶ ಹೆಚ್ಚು.</p>.<p>ಇದಕ್ಕೂ ಮುನ್ನ ಮಧ್ಯಪ್ರದೇಶ ತಂಡದ ವೆಂಕಟೇಶ್ ಅಯ್ಯರ್ (48 ರನ್) ಕೇವಲ ಎರಡು ರನ್ಗಳ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರು. ಕರ್ನಾಟಕದ ವೇಗಿ ಎಂ. ವೆಂಕಟೇಶ್ ಅವರು (75ಕ್ಕೆ5) ಮಿಂಚಿದರು.</p>.<p><strong>ಸಂಕ್ಷಿಪ್ತ ಸ್ಕೋರು:</strong> </p><p><strong>ಮಧ್ಯಪ್ರದೇಶ:</strong> 101.2 ಓವರ್ಗಳಲ್ಲಿ 338 (ವೆಂಕಟೇಶ್ ಅಯ್ಯರ್ 48, ಎಂ. ವೆಂಕಟೇಶ್ 75ಕ್ಕೆ5, ಮಾಧವ್ ಪಿ ಬಜಾಜ್ 105ಕ್ಕೆ3) </p><p><strong>ಕೆಎಸ್ಸಿಎ ಕಾರ್ಯದರ್ಶಿ ಇಲೆವನ್:</strong> 58 ಓವರ್ಗಳಲ್ಲಿ 4ಕ್ಕೆ163 (ಲೋಚನ್ ಎಸ್ ಗೌಡ 20, ಎಸ್.ಜೆ. ನಿಕಿನ್ ಜೋಸ್ ಔಟಾಗದೇ 58, ತುಷಾರ್ ಸಿಂಗ್ 35, ಪಿ. ಧ್ರುವ ಔಟಾಗದೇ 28, ಕುಮಾರ ಕಾರ್ತಿಕೇಯ 35ಕ್ಕೆ2) </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>