<p><strong>ಆಲೂರು (ಬೆಂಗಳೂರು):</strong> ಮುಂದಿನ ತಿಂಗಳು ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಕಣಕ್ಕಿಳಿಯಲಿರುವ ಕರುಣ್ ನಾಯರ್ ಕ್ಯಾಪ್ಟನ್ ತಿಮ್ಮಪ್ಪಯ್ಯ ಟೂರ್ನಿಯ ಸೆಮಿಫೈನಲ್ನಲ್ಲಿ ಅಜೇಯ ಶತಕ ಬಾರಿಸಿದರು. ಅದರೊಂದಿಗೆ ಅವರು ತಮ್ಮ ಲಯಕ್ಕೆ ಮರಳಿದ್ದಾರೆ.</p>.<p>ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ಕಾರ್ಯದರ್ಶಿ ಇಲೆವನ್ ತಂಡವು 6 ವಿಕೆಟ್ಗಳಿಂದ ಜಯಿಸಲು ಕೂಡ ಕರುಣ್ (ಅಜೇಯ 151; 169ಎ, 4X12, 6X2) ಅವರ ಶತಕ ಕಾರಣವಾಯಿತು. ಅವರಿಗೆ ಪಿ.ಧ್ರುವ (ಅಜೇಯ 65; 102ಎ, 4X5) ಉತ್ತಮ ಜೊತೆ ನೀಡಿದರು. </p>.<p>ಪಂದ್ಯದ ಕೊನೆಯ ದಿನವಾದ ಬುಧವಾರ ಗೋವಾ ತಂಡವು ಕೆಎಸ್ಸಿಎಗೆ 265 ರನ್ಗಳ ಗುರಿಯೊಡ್ಡಿತು. ಆದರೆ ಆತಿಥೇಯ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಓವರ್ಗಳಲ್ಲಿ ರನ್ ಗಳಿಸಲೂ ಬ್ಯಾಟರ್ಗಳು ಪರದಾಡಿದರು. ಇದರಿಂದಾಗಿ 85 ರನ್ಗಳೀಗೆ 4 ವಿಕೆಟ್ ಪತನವಾದವು.ಅದರಲ್ಲಿ ನಾಯಕ ನಿಕಿನ್ ಜೋಸ್ (13 ರನ್), ಫೈಜನ್ ಖಾನ್ (19 ರನ್), ಲೋಚನ್ ಗೌಡ (13 ರನ್) ಮತ್ತು ಸಮಿತ್ ದ್ರಾವಿಡ್ (3 ರನ್) ಇದ್ದರು. ಗೋವಾ ತಂಡದ ದರ್ಶನ್ ಮಿಶಾಲ್ 3 ವಿಕೆಟ್ ಮತ್ತು ಮೋಹಿತ್ ರೇಡಕರ್ ಒಂದು ವಿಕೆಟ್ ಗಳಿಸಿದರು. </p>.<p>ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅನುಭವಿ ಕರುಣ್ ಮತ್ತು ಧ್ರುವ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಗೋವಾ ಬೌಲರ್ಗಳು ಇವರಿಬ್ಬರ ಆಟಕ್ಕೆ ನಿರುತ್ತರರಾದರು. </p>.<p><strong>ಸಂಕ್ಷಿಪ್ತ ಸ್ಕೋರು</strong></p><p><strong>ಮೊದಲ ಇನಿಂಗ್ಸ್:</strong> </p><p><strong>ಗೋವಾ:</strong> 94.4 ಓವರ್ಗಳಲ್ಲಿ 338. </p><p><strong>ಕರ್ನಾಟಕ:</strong> 97.1 ಓವರ್ಗಳಲ್ಲಿ 276. </p><p><strong>ಎರಡನೇ ಇನಿಂಗ್ಸ್:</strong> </p><p><strong>ಗೋವಾ:</strong> 89.2 ಓವರ್ಗಳಲ್ಲಿ 202. </p><p><strong>ಕರ್ನಾಟಕ ಕಾರ್ಯದರ್ಶಿಗಳ ಇಲೆವನ್:</strong> 66.4 ಓವರ್ಗಳಲ್ಲಿ 4ಕ್ಕೆ266 (ಕರುಣ್ ನಾಯರ್ ಅಜೇಯ 151, ಪಿ. ಧ್ರುವ ಅಜೇಯ 65,ದರ್ಶನ್ ಮಿಶಾಲ್ 106ಕ್ಕೆ3) </p><p><strong>ಫಲಿತಾಂಶ:</strong> ಕೆಎಸ್ಸಿಎ ಕಾರ್ಯದರ್ಶಿ ಇಲವೆನ್ ತಂಡಕ್ಕೆ 6 ವಿಕೆಟ್ಗಳ ಜಯ ಮತ್ತು ಫೈನಲ್ಗೆ ಅರ್ಹತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲೂರು (ಬೆಂಗಳೂರು):</strong> ಮುಂದಿನ ತಿಂಗಳು ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಕಣಕ್ಕಿಳಿಯಲಿರುವ ಕರುಣ್ ನಾಯರ್ ಕ್ಯಾಪ್ಟನ್ ತಿಮ್ಮಪ್ಪಯ್ಯ ಟೂರ್ನಿಯ ಸೆಮಿಫೈನಲ್ನಲ್ಲಿ ಅಜೇಯ ಶತಕ ಬಾರಿಸಿದರು. ಅದರೊಂದಿಗೆ ಅವರು ತಮ್ಮ ಲಯಕ್ಕೆ ಮರಳಿದ್ದಾರೆ.</p>.<p>ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ಕಾರ್ಯದರ್ಶಿ ಇಲೆವನ್ ತಂಡವು 6 ವಿಕೆಟ್ಗಳಿಂದ ಜಯಿಸಲು ಕೂಡ ಕರುಣ್ (ಅಜೇಯ 151; 169ಎ, 4X12, 6X2) ಅವರ ಶತಕ ಕಾರಣವಾಯಿತು. ಅವರಿಗೆ ಪಿ.ಧ್ರುವ (ಅಜೇಯ 65; 102ಎ, 4X5) ಉತ್ತಮ ಜೊತೆ ನೀಡಿದರು. </p>.<p>ಪಂದ್ಯದ ಕೊನೆಯ ದಿನವಾದ ಬುಧವಾರ ಗೋವಾ ತಂಡವು ಕೆಎಸ್ಸಿಎಗೆ 265 ರನ್ಗಳ ಗುರಿಯೊಡ್ಡಿತು. ಆದರೆ ಆತಿಥೇಯ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಓವರ್ಗಳಲ್ಲಿ ರನ್ ಗಳಿಸಲೂ ಬ್ಯಾಟರ್ಗಳು ಪರದಾಡಿದರು. ಇದರಿಂದಾಗಿ 85 ರನ್ಗಳೀಗೆ 4 ವಿಕೆಟ್ ಪತನವಾದವು.ಅದರಲ್ಲಿ ನಾಯಕ ನಿಕಿನ್ ಜೋಸ್ (13 ರನ್), ಫೈಜನ್ ಖಾನ್ (19 ರನ್), ಲೋಚನ್ ಗೌಡ (13 ರನ್) ಮತ್ತು ಸಮಿತ್ ದ್ರಾವಿಡ್ (3 ರನ್) ಇದ್ದರು. ಗೋವಾ ತಂಡದ ದರ್ಶನ್ ಮಿಶಾಲ್ 3 ವಿಕೆಟ್ ಮತ್ತು ಮೋಹಿತ್ ರೇಡಕರ್ ಒಂದು ವಿಕೆಟ್ ಗಳಿಸಿದರು. </p>.<p>ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅನುಭವಿ ಕರುಣ್ ಮತ್ತು ಧ್ರುವ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಗೋವಾ ಬೌಲರ್ಗಳು ಇವರಿಬ್ಬರ ಆಟಕ್ಕೆ ನಿರುತ್ತರರಾದರು. </p>.<p><strong>ಸಂಕ್ಷಿಪ್ತ ಸ್ಕೋರು</strong></p><p><strong>ಮೊದಲ ಇನಿಂಗ್ಸ್:</strong> </p><p><strong>ಗೋವಾ:</strong> 94.4 ಓವರ್ಗಳಲ್ಲಿ 338. </p><p><strong>ಕರ್ನಾಟಕ:</strong> 97.1 ಓವರ್ಗಳಲ್ಲಿ 276. </p><p><strong>ಎರಡನೇ ಇನಿಂಗ್ಸ್:</strong> </p><p><strong>ಗೋವಾ:</strong> 89.2 ಓವರ್ಗಳಲ್ಲಿ 202. </p><p><strong>ಕರ್ನಾಟಕ ಕಾರ್ಯದರ್ಶಿಗಳ ಇಲೆವನ್:</strong> 66.4 ಓವರ್ಗಳಲ್ಲಿ 4ಕ್ಕೆ266 (ಕರುಣ್ ನಾಯರ್ ಅಜೇಯ 151, ಪಿ. ಧ್ರುವ ಅಜೇಯ 65,ದರ್ಶನ್ ಮಿಶಾಲ್ 106ಕ್ಕೆ3) </p><p><strong>ಫಲಿತಾಂಶ:</strong> ಕೆಎಸ್ಸಿಎ ಕಾರ್ಯದರ್ಶಿ ಇಲವೆನ್ ತಂಡಕ್ಕೆ 6 ವಿಕೆಟ್ಗಳ ಜಯ ಮತ್ತು ಫೈನಲ್ಗೆ ಅರ್ಹತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>