<p><strong>ವಡೋದರಾ:</strong> ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿ ಬಂದ ನಂತರ ದೇಶಿ ಕ್ರಿಕೆಟ್ನಲ್ಲಿ ಮೊದಲ ಪಂದ್ಯವಾಡಿದ ದೇವದತ್ತ ಪಡಿಕ್ಕಲ್ ಶತಕ ಸಂಭ್ರಮ ಆಚರಿಸಿದರು. ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. </p><p>ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಶನಿವಾರ ಮೋತಿಭಾಗ್ನಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಬರೋಡಾ ತಂಡದ ಎದುರು 5 ರನ್ಗಳಿಂದ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಿಕಿನ್ ಜೋಸ್ ಅವರಿಗೆ ವಿಶ್ರಾಂತಿ ನೀಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ ಮತ್ತು ದೇವದತ್ತ ಇನಿಂಗ್ಸ್ ಆರಂಭಿಸಿದರು. </p><p>ಕ್ರೀಸ್ಗೆ ಬಂದವರೇ ದೇವದತ್ತ ರನ್ ಸೂರೆ ಮಾಡಲು ಆರಂಭಿಸಿದರು. ಈ ಟೂರ್ನಿಯಲ್ಲಿ ನಾಲ್ಕು ಶತಕ ಹೊಡೆದಿರುವ ಮಯಂಕ್ (6; 15ಎ) ಅವರ ಆಟಕ್ಕೆ ತಡೆಯೊಡ್ಡುವಲ್ಲಿ ಲಕ್ಮನ್ ಮೆರಿವಾಲಾ ಯಶಸ್ವಿಯಾದರು. ಐದನೇ ಓವರ್ನಲ್ಲಿ ಮಯಂಕ್ ಪೆವಿಲಿಯನ್ ಸೇರಿದರು. </p><p>ಆತ್ಮವಿಶ್ವಾಸದಿಂದ ಆಡುತ್ತಿದ್ದ ಪಡಿಕ್ಕಲ್ (102; 99ಎ) ಅವರೊಂದಿಗೆ ಸೇರಿಕೊಂಡ ಕೆ.ವಿ. ಅನೀಶ್ 2ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 281 ರನ್ ಗಳಿಸಿತು. </p><p>ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೆ 49.5 ಓವರ್ಗಳಲ್ಲಿ 276 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ (104; 126ಎ, 4X9, 6X1) ಮತ್ತು ಅತಿಥ್ ಶೇಟ್ (56; 59ಎ, 4X7, 6X1) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಕರ್ನಾಟಕದ ಬೌಲರ್ಗಳಾದ ಕೌಶಿಕ್, ಪ್ರಸಿದ್ಧಕೃಷ್ಣ, ಅಭಿಲಾಷ್ ಶೆಟ್ಟಿ ಹಾಗೂ ಶ್ರೇಯಸ್ ತಲಾ 2 ವಿಕೆಟ್ ಗಳಿಸಿದರು. </p><p>ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲಿ ಆಡಿದ್ದರು. ನಂತರ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿಯೂ ಇದ್ದರು. ಆ ಅನುಭವದೊಂದಿಗೆ ಮರಳಿದ್ದ ಅವರು ಇಲ್ಲಿ ಸೊಗಸಾದ ಶತಕ ಬಾರಿಸಿದರು. ಬೆಂಗಳೂರಿನ ಎಡಗೈ ಬ್ಯಾಟರ್ 15 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಅನೀಶ್ 64 ಎಸೆತಗಳಲ್ಲಿ 52 ರನ್ ಗಳಿಸಿದರು. 4 ಬೌಂಡರಿ, 1 ಸಿಕ್ಸರ್ ಹೊಡೆದರು. </p><p>ಅಭಿನವ್ ಮನೋಹರ್ (21; 18ಎ) ಮತ್ತು ಶ್ರೇಯಸ್ ಗೋಪಾಲ್ (16; 12ಎ) ಚುರುಕಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಿದರು. </p> <h2><strong>ಸಂಕ್ಷಿಪ್ತ ಸ್ಕೋರು</strong></h2><p><strong>ಕರ್ನಾಟಕ: 50 ಓವರ್ಗಳಲ್ಲಿ 8ಕ್ಕೆ281</strong> (ದೇವದತ್ತ ಪಡಿಕ್ಕಲ್ 102, ಕೆ.ವಿ. ಅನೀಶ್ 52, ಸ್ಮರಣ್ ಆರ್. 28, ಕೆ.ಎಲ್. ಶ್ರೀಜಿತ್ 28, ಅಭಿನವ್ ಮನೋಹರ್ 21, ರಾಜ್ ಲಿಂಬಾನಿ 47ಕ್ಕೆ3, ಅತಿಥ್ ಸೇಠ್ 41ಕ್ಕೆ3)</p><p><strong>ಬರೋಡಾ:</strong> 49.5 ಓವರ್ಗಳಲ್ಲಿ 276 (ಶಾಶ್ವತ್ ರಾವತ್ 104, ಅತಿಥ್ ಶೇಠ್ 56, ಕೃಣಾಲ್ ಪಾಂಡ್ಯ 30, ಭಾನು ಪನಿಯಾ 22, ಭಾರ್ಗವ್ ಭಟ್ 20, ವಿ. ಕೌಶಿಕ್ 39ಕ್ಕೆ2, ಪ್ರಸಿದ್ಧ ಕೃಷ್ಣ 60ಕ್ಕೆ2, ಅಭಿಲಾಷ್ ಶೆಟ್ಟಿ 70ಕ್ಕೆ2, ಶ್ರೇಯಸ್ ಗೋಪಾಲ್ 38ಕ್ಕೆ2)</p><p><strong>ಫಲಿತಾಂಶ:</strong> ಕರ್ನಾಟಕ ತಂಡಕ್ಕೆ 5 ರನ್ಗಳ ಜಯ. <strong>ಪಂದ್ಯಶ್ರೇಷ್ಠ</strong>: ದೇವದತ್ತ ಪಡಿಕ್ಕಲ್.</p>.<p><strong>ಇಂದಿನ ಕ್ವಾರ್ಟರ್ಫೈನಲ್</strong></p><ul><li><p>ಗುಜರಾತ್ –ಹರಿಯಾಣ</p></li><li><p>ವಿದರ್ಭ–ರಾಜಸ್ಥಾನ</p><p>ಆರಂಭ: ಬೆಳಿಗ್ಗೆ 9.</p></li></ul>.<h2><strong>ಕುಲಕರ್ಣಿ ಶತಕ: ಸೆಮಿಗೆ ಮಹಾರಾಷ್ಟ್ರ</strong></h2><p><strong>ವಡೋದರಾ</strong>: ಅರಿಷಿನ್ ಕುಲಕರ್ಣಿ (107; 137ಎ, 4X14) ಅವರ ಶತಕದ ಬಲದಿಂದ ಮಹಾರಾಷ್ಟ್ರ ತಂಡವು ಕ್ವಾರ್ಟರ್ಫೈನಲ್ನಲ್ಲಿ 70 ರನ್ಗಳಿಂದ ಪಂಜಾಬ್ ಎದುರು ಜಯಿಸಿತು. ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.</p><p>ಮಹಾರಾಷ್ಟ್ರ ತಂಡವು 50 ಓವರ್ಗಳಲ್ಲಿ 6ಕ್ಕೆ275 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು 44.4 ಓವರ್ಗಳಲ್ಲಿ 205 ರನ್ ಗಳಿಸಿ ಸೋತಿತು. ಮುಕೇಶ್ ಚೌಧರಿ 3 ಮತ್ತು ಪ್ರದೀಪ್ ದಾಧೆ 2 ವಿಕೆಟ್ ಗಳಿಸಿದರು.</p><p><strong>ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ: 50 ಓವರ್ಗಳಲ್ಲಿ 6 ವಿಕೆಟ್ಗಳಿಗೆ 275 </strong>(ಅರಿಷಿನ್ ಕುಲಕರ್ಣಿ 107, ಅಂಕಿತ್ ಭಾವ್ನೆ 60, ನಿಖಿಲ್ ನಾಯಕ್ ಔಟಾಗದೆ 52, ಸತ್ಯಜೀತ್ ಬಚಾವ್ ಔಟಾಗದೇ 20, ಅರ್ಷದೀಪ್ ಸಿಂಗ್ 56ಕ್ಕೆ3, ನಮನ್ ಧೀರ್ 29ಕ್ಕೆ2)</p><p><strong>ಪಂಜಾಬ್: 44.4 ಓವರ್ಗಳಲ್ಲಿ 205</strong> (ಅನ್ಮೋಲ್ಪ್ರೀತ್ ಸಿಂಗ್ 48, ಸನ್ವೀರ್ ಸಿಂಗ್ 24, ಅರ್ಷದೀಪ್ ಸಿಂಗ್ 49, ಮುಕೇಶ್ ಚೌಧರಿ 44ಕ್ಕೆ3, ಪ್ರದೀಪ್ ದಾಧೆ 31ಕ್ಕೆ2)</p><p><strong>ಫಲಿತಾಂಶ</strong>: ಮಹಾರಾಷ್ಟ್ರ ತಂಡಕ್ಕೆ 70 ರನ್ ಜಯ. </p>.<blockquote>ಮಾಹಿತಿ: ಬಿಸಿಸಿಐ ಡಾಟ್ ಟಿವಿ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡೋದರಾ:</strong> ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿ ಬಂದ ನಂತರ ದೇಶಿ ಕ್ರಿಕೆಟ್ನಲ್ಲಿ ಮೊದಲ ಪಂದ್ಯವಾಡಿದ ದೇವದತ್ತ ಪಡಿಕ್ಕಲ್ ಶತಕ ಸಂಭ್ರಮ ಆಚರಿಸಿದರು. ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. </p><p>ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಶನಿವಾರ ಮೋತಿಭಾಗ್ನಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಬರೋಡಾ ತಂಡದ ಎದುರು 5 ರನ್ಗಳಿಂದ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಿಕಿನ್ ಜೋಸ್ ಅವರಿಗೆ ವಿಶ್ರಾಂತಿ ನೀಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ ಮತ್ತು ದೇವದತ್ತ ಇನಿಂಗ್ಸ್ ಆರಂಭಿಸಿದರು. </p><p>ಕ್ರೀಸ್ಗೆ ಬಂದವರೇ ದೇವದತ್ತ ರನ್ ಸೂರೆ ಮಾಡಲು ಆರಂಭಿಸಿದರು. ಈ ಟೂರ್ನಿಯಲ್ಲಿ ನಾಲ್ಕು ಶತಕ ಹೊಡೆದಿರುವ ಮಯಂಕ್ (6; 15ಎ) ಅವರ ಆಟಕ್ಕೆ ತಡೆಯೊಡ್ಡುವಲ್ಲಿ ಲಕ್ಮನ್ ಮೆರಿವಾಲಾ ಯಶಸ್ವಿಯಾದರು. ಐದನೇ ಓವರ್ನಲ್ಲಿ ಮಯಂಕ್ ಪೆವಿಲಿಯನ್ ಸೇರಿದರು. </p><p>ಆತ್ಮವಿಶ್ವಾಸದಿಂದ ಆಡುತ್ತಿದ್ದ ಪಡಿಕ್ಕಲ್ (102; 99ಎ) ಅವರೊಂದಿಗೆ ಸೇರಿಕೊಂಡ ಕೆ.ವಿ. ಅನೀಶ್ 2ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 281 ರನ್ ಗಳಿಸಿತು. </p><p>ಗುರಿ ಬೆನ್ನಟ್ಟಿದ ಬರೋಡಾ ತಂಡಕ್ಕೆ 49.5 ಓವರ್ಗಳಲ್ಲಿ 276 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ (104; 126ಎ, 4X9, 6X1) ಮತ್ತು ಅತಿಥ್ ಶೇಟ್ (56; 59ಎ, 4X7, 6X1) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಕರ್ನಾಟಕದ ಬೌಲರ್ಗಳಾದ ಕೌಶಿಕ್, ಪ್ರಸಿದ್ಧಕೃಷ್ಣ, ಅಭಿಲಾಷ್ ಶೆಟ್ಟಿ ಹಾಗೂ ಶ್ರೇಯಸ್ ತಲಾ 2 ವಿಕೆಟ್ ಗಳಿಸಿದರು. </p><p>ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲಿ ಆಡಿದ್ದರು. ನಂತರ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿಯೂ ಇದ್ದರು. ಆ ಅನುಭವದೊಂದಿಗೆ ಮರಳಿದ್ದ ಅವರು ಇಲ್ಲಿ ಸೊಗಸಾದ ಶತಕ ಬಾರಿಸಿದರು. ಬೆಂಗಳೂರಿನ ಎಡಗೈ ಬ್ಯಾಟರ್ 15 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಅನೀಶ್ 64 ಎಸೆತಗಳಲ್ಲಿ 52 ರನ್ ಗಳಿಸಿದರು. 4 ಬೌಂಡರಿ, 1 ಸಿಕ್ಸರ್ ಹೊಡೆದರು. </p><p>ಅಭಿನವ್ ಮನೋಹರ್ (21; 18ಎ) ಮತ್ತು ಶ್ರೇಯಸ್ ಗೋಪಾಲ್ (16; 12ಎ) ಚುರುಕಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಿದರು. </p> <h2><strong>ಸಂಕ್ಷಿಪ್ತ ಸ್ಕೋರು</strong></h2><p><strong>ಕರ್ನಾಟಕ: 50 ಓವರ್ಗಳಲ್ಲಿ 8ಕ್ಕೆ281</strong> (ದೇವದತ್ತ ಪಡಿಕ್ಕಲ್ 102, ಕೆ.ವಿ. ಅನೀಶ್ 52, ಸ್ಮರಣ್ ಆರ್. 28, ಕೆ.ಎಲ್. ಶ್ರೀಜಿತ್ 28, ಅಭಿನವ್ ಮನೋಹರ್ 21, ರಾಜ್ ಲಿಂಬಾನಿ 47ಕ್ಕೆ3, ಅತಿಥ್ ಸೇಠ್ 41ಕ್ಕೆ3)</p><p><strong>ಬರೋಡಾ:</strong> 49.5 ಓವರ್ಗಳಲ್ಲಿ 276 (ಶಾಶ್ವತ್ ರಾವತ್ 104, ಅತಿಥ್ ಶೇಠ್ 56, ಕೃಣಾಲ್ ಪಾಂಡ್ಯ 30, ಭಾನು ಪನಿಯಾ 22, ಭಾರ್ಗವ್ ಭಟ್ 20, ವಿ. ಕೌಶಿಕ್ 39ಕ್ಕೆ2, ಪ್ರಸಿದ್ಧ ಕೃಷ್ಣ 60ಕ್ಕೆ2, ಅಭಿಲಾಷ್ ಶೆಟ್ಟಿ 70ಕ್ಕೆ2, ಶ್ರೇಯಸ್ ಗೋಪಾಲ್ 38ಕ್ಕೆ2)</p><p><strong>ಫಲಿತಾಂಶ:</strong> ಕರ್ನಾಟಕ ತಂಡಕ್ಕೆ 5 ರನ್ಗಳ ಜಯ. <strong>ಪಂದ್ಯಶ್ರೇಷ್ಠ</strong>: ದೇವದತ್ತ ಪಡಿಕ್ಕಲ್.</p>.<p><strong>ಇಂದಿನ ಕ್ವಾರ್ಟರ್ಫೈನಲ್</strong></p><ul><li><p>ಗುಜರಾತ್ –ಹರಿಯಾಣ</p></li><li><p>ವಿದರ್ಭ–ರಾಜಸ್ಥಾನ</p><p>ಆರಂಭ: ಬೆಳಿಗ್ಗೆ 9.</p></li></ul>.<h2><strong>ಕುಲಕರ್ಣಿ ಶತಕ: ಸೆಮಿಗೆ ಮಹಾರಾಷ್ಟ್ರ</strong></h2><p><strong>ವಡೋದರಾ</strong>: ಅರಿಷಿನ್ ಕುಲಕರ್ಣಿ (107; 137ಎ, 4X14) ಅವರ ಶತಕದ ಬಲದಿಂದ ಮಹಾರಾಷ್ಟ್ರ ತಂಡವು ಕ್ವಾರ್ಟರ್ಫೈನಲ್ನಲ್ಲಿ 70 ರನ್ಗಳಿಂದ ಪಂಜಾಬ್ ಎದುರು ಜಯಿಸಿತು. ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.</p><p>ಮಹಾರಾಷ್ಟ್ರ ತಂಡವು 50 ಓವರ್ಗಳಲ್ಲಿ 6ಕ್ಕೆ275 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು 44.4 ಓವರ್ಗಳಲ್ಲಿ 205 ರನ್ ಗಳಿಸಿ ಸೋತಿತು. ಮುಕೇಶ್ ಚೌಧರಿ 3 ಮತ್ತು ಪ್ರದೀಪ್ ದಾಧೆ 2 ವಿಕೆಟ್ ಗಳಿಸಿದರು.</p><p><strong>ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ: 50 ಓವರ್ಗಳಲ್ಲಿ 6 ವಿಕೆಟ್ಗಳಿಗೆ 275 </strong>(ಅರಿಷಿನ್ ಕುಲಕರ್ಣಿ 107, ಅಂಕಿತ್ ಭಾವ್ನೆ 60, ನಿಖಿಲ್ ನಾಯಕ್ ಔಟಾಗದೆ 52, ಸತ್ಯಜೀತ್ ಬಚಾವ್ ಔಟಾಗದೇ 20, ಅರ್ಷದೀಪ್ ಸಿಂಗ್ 56ಕ್ಕೆ3, ನಮನ್ ಧೀರ್ 29ಕ್ಕೆ2)</p><p><strong>ಪಂಜಾಬ್: 44.4 ಓವರ್ಗಳಲ್ಲಿ 205</strong> (ಅನ್ಮೋಲ್ಪ್ರೀತ್ ಸಿಂಗ್ 48, ಸನ್ವೀರ್ ಸಿಂಗ್ 24, ಅರ್ಷದೀಪ್ ಸಿಂಗ್ 49, ಮುಕೇಶ್ ಚೌಧರಿ 44ಕ್ಕೆ3, ಪ್ರದೀಪ್ ದಾಧೆ 31ಕ್ಕೆ2)</p><p><strong>ಫಲಿತಾಂಶ</strong>: ಮಹಾರಾಷ್ಟ್ರ ತಂಡಕ್ಕೆ 70 ರನ್ ಜಯ. </p>.<blockquote>ಮಾಹಿತಿ: ಬಿಸಿಸಿಐ ಡಾಟ್ ಟಿವಿ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>