<p><strong>ಬಾಂಬೊಲಿಮ್ : </strong>ಕೋವಿಡ್–19 ಪಿಡುಗಿನ ನಡುವೆಯೂ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿದ್ದನ್ನು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ನ (ಎಫ್ಎಸ್ಡಿಎಲ್) ಮುಖ್ಯಸ್ಥೆ ನೀತಾ ಅಂಬಾನಿ ಸ್ವಾಗತಿಸಿದ್ದಾರೆ. ಫುಟ್ಬಾಲ್ ಟೂರ್ನಿಗಳ ಪುನರಾರಂಭದಲ್ಲಿ ಬಹಳಷ್ಟು ಸ್ಥೈರ್ಯದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯು ಶುಕ್ರವಾರ ಕೇರಳ ಬ್ಲಾಸ್ಟರ್ಸ್ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಯಿತು. ಭಾರತದ ನೆಲದಲ್ಲಿ ಕೋವಿಡ್ ಕಾಲದಲ್ಲಿ ಆರಂಭಗೊಂಡ ಮೊದಲ ಪ್ರಮುಖ ಟೂರ್ನಿ ಎನಿಸಿಕೊಂಡಿತು.</p>.<p>‘ಐಎಸ್ಎಲ್ ಟೂರ್ನಿಯು ಕೋವಿಡ್ನಿಂದ ನಲುಗಿದ ಮನಸ್ಸುಗಳಿಗೆಮುಂದಿನ ನಾಲ್ಕು ತಿಂಗಳು ಸಂತಸವನ್ನು ಹಂಚಲಿದೆ‘ ಎಂದು ನೀತಾ ಹೇಳಿದ್ದಾರೆ.</p>.<p>’2020–21ರ ಆವೃತ್ತಿಯು ಎರಡು ಐತಿಹಾಸಿಕ ಕ್ಲಬ್ಗಳು (ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್) ಸೇರ್ಪಡೆಯಾಗುವುದರೊಂದಿಗೆ ಅತ್ಯಂತ ರೋಮಾಂಚನಕಾರಿಯಾಗಿ ಋತುವಾಗಿ ಪರಿಣಮಿಸಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಂಬೊಲಿಮ್ : </strong>ಕೋವಿಡ್–19 ಪಿಡುಗಿನ ನಡುವೆಯೂ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿದ್ದನ್ನು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ನ (ಎಫ್ಎಸ್ಡಿಎಲ್) ಮುಖ್ಯಸ್ಥೆ ನೀತಾ ಅಂಬಾನಿ ಸ್ವಾಗತಿಸಿದ್ದಾರೆ. ಫುಟ್ಬಾಲ್ ಟೂರ್ನಿಗಳ ಪುನರಾರಂಭದಲ್ಲಿ ಬಹಳಷ್ಟು ಸ್ಥೈರ್ಯದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯು ಶುಕ್ರವಾರ ಕೇರಳ ಬ್ಲಾಸ್ಟರ್ಸ್ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಯಿತು. ಭಾರತದ ನೆಲದಲ್ಲಿ ಕೋವಿಡ್ ಕಾಲದಲ್ಲಿ ಆರಂಭಗೊಂಡ ಮೊದಲ ಪ್ರಮುಖ ಟೂರ್ನಿ ಎನಿಸಿಕೊಂಡಿತು.</p>.<p>‘ಐಎಸ್ಎಲ್ ಟೂರ್ನಿಯು ಕೋವಿಡ್ನಿಂದ ನಲುಗಿದ ಮನಸ್ಸುಗಳಿಗೆಮುಂದಿನ ನಾಲ್ಕು ತಿಂಗಳು ಸಂತಸವನ್ನು ಹಂಚಲಿದೆ‘ ಎಂದು ನೀತಾ ಹೇಳಿದ್ದಾರೆ.</p>.<p>’2020–21ರ ಆವೃತ್ತಿಯು ಎರಡು ಐತಿಹಾಸಿಕ ಕ್ಲಬ್ಗಳು (ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್) ಸೇರ್ಪಡೆಯಾಗುವುದರೊಂದಿಗೆ ಅತ್ಯಂತ ರೋಮಾಂಚನಕಾರಿಯಾಗಿ ಋತುವಾಗಿ ಪರಿಣಮಿಸಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>