<p><strong>ನವದೆಹಲಿ: </strong>2022ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಸಿದ್ಧತೆ ನಡೆಸಲು ಭಾರತ ಫುಟ್ಬಾಲ್ ತಂಡವು ಇದೇ 19ರಂದು ಕತಾರ್ಗೆ ತೆರಳಲಿದೆ. ಜೂನ್ 3ರಿಂದ ನಡೆಯುವ ಪಂದ್ಯಗಳಿಗೆ ತಾಲೀಮು ನಡೆಸಲು ಭಾರತದ ಆಟಗಾರರಿಗೆ ಕತಾರ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಸಲ್ಲಿಸಿದ ಮನವಿಗೆ ಆ ರಾಷ್ಟ್ರವು ಸ್ಪಂದಿಸಿದೆ.</p>.<p>ಆಟಗಾರರಿಗೆ 10 ದಿನಗಳ ಕ್ವಾರಂಟೈನ್ ಅವಧಿಯಿಂದ ವಿನಾಯಿತಿ ನೀಡಬೇಕೆಂಬ ಮನವಿಗೂ ಕತಾರ್ ಒಪ್ಪಿದೆ. ಮೊದಲ ಪಂದ್ಯಕ್ಕೂ ಮುನ್ನ ಆಟಗಾರರು ಬಯೋಬಬಲ್ನಲ್ಲಿ ಎರಡು ವಾರಗಳ ಪೂರ್ವಸಿದ್ಧತಾ ಶಿಬಿರ ನಡೆಸಲಿದ್ದಾರೆ.</p>.<p>‘ಮೇ 19ರ ಸಂಜೆ ನಾವು ಕತಾರ್ಗೆ ತೆರಳಲಿದ್ದೇವೆ. ಅಲ್ಲಿ ಆಟಗಾರರಿಗೆ ಕ್ವಾರಂಟೈನ್ ಇರುವುದಿಲ್ಲ. ಆದರೆ ಬಯೋಬಬಲ್ ವ್ಯವಸ್ಥೆ ಇರಲಿದೆ. ಹೊರಡುವ ಮೊದಲು ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ‘ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ.</p>.<p>ಭಾರತ ತಂಡವು ವಿಶ್ವಕಪ್ ಅರ್ಹತೆಯಿಂದ ಈಗಾಗಲೇ ಹೊರಬಿದ್ದಿದೆ. ಆದರೆ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಈ ಪಂದ್ಯಗಳನ್ನು ಆಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>2022ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಸಿದ್ಧತೆ ನಡೆಸಲು ಭಾರತ ಫುಟ್ಬಾಲ್ ತಂಡವು ಇದೇ 19ರಂದು ಕತಾರ್ಗೆ ತೆರಳಲಿದೆ. ಜೂನ್ 3ರಿಂದ ನಡೆಯುವ ಪಂದ್ಯಗಳಿಗೆ ತಾಲೀಮು ನಡೆಸಲು ಭಾರತದ ಆಟಗಾರರಿಗೆ ಕತಾರ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಸಲ್ಲಿಸಿದ ಮನವಿಗೆ ಆ ರಾಷ್ಟ್ರವು ಸ್ಪಂದಿಸಿದೆ.</p>.<p>ಆಟಗಾರರಿಗೆ 10 ದಿನಗಳ ಕ್ವಾರಂಟೈನ್ ಅವಧಿಯಿಂದ ವಿನಾಯಿತಿ ನೀಡಬೇಕೆಂಬ ಮನವಿಗೂ ಕತಾರ್ ಒಪ್ಪಿದೆ. ಮೊದಲ ಪಂದ್ಯಕ್ಕೂ ಮುನ್ನ ಆಟಗಾರರು ಬಯೋಬಬಲ್ನಲ್ಲಿ ಎರಡು ವಾರಗಳ ಪೂರ್ವಸಿದ್ಧತಾ ಶಿಬಿರ ನಡೆಸಲಿದ್ದಾರೆ.</p>.<p>‘ಮೇ 19ರ ಸಂಜೆ ನಾವು ಕತಾರ್ಗೆ ತೆರಳಲಿದ್ದೇವೆ. ಅಲ್ಲಿ ಆಟಗಾರರಿಗೆ ಕ್ವಾರಂಟೈನ್ ಇರುವುದಿಲ್ಲ. ಆದರೆ ಬಯೋಬಬಲ್ ವ್ಯವಸ್ಥೆ ಇರಲಿದೆ. ಹೊರಡುವ ಮೊದಲು ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ‘ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ.</p>.<p>ಭಾರತ ತಂಡವು ವಿಶ್ವಕಪ್ ಅರ್ಹತೆಯಿಂದ ಈಗಾಗಲೇ ಹೊರಬಿದ್ದಿದೆ. ಆದರೆ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಈ ಪಂದ್ಯಗಳನ್ನು ಆಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>