<p><strong>ನವದೆಹಲಿ</strong>: ಅನಿಶ್ಚಿತ ಸ್ಥಿತಿಯಲ್ಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಆರಂಭಿಸಬೇಕೆಂದು ಫುಟ್ಬಾಲ್ ಆಡಳಿತವನ್ನು ಕೋರಿರುವ ಹಿರಿಯ ಆಟಗಾರರು, ‘ತಮ್ಮ ಸಿಟ್ಟು ಮತ್ತು ಹತಾಶೆ’ ಈಗ ನಿರಾಶೆಯ ಕೂಪವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ.</p>.<p>ಹೊಸ ವಾಣಿಜ್ಯ ಹಕ್ಕು ಪಡೆಯಲು ಬಿಡ್ನಲ್ಲಿ ಯಾರೂ ಮುಂದೆ ಬಂದಿಲ್ಲ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಹೋದ ವಾರ ತಿಳಿಸಿತ್ತು. ಅದರ ಬೆನ್ನಲ್ಲೇ ಆಟಗಾರರಿಂದ ಮನವಿ ಬಂದಿದೆ.</p>.<p>‘ಈಗಾಗಲೇ ವಿಳಂಬವಾಗಿದೆ. ತರಬೇತುದಾರು, ಅಭಿಮಾನಿಗಳು, ಸಿಬ್ಬಂದಿ, ಆಟಗಾರರು ಏನೂ ತೋಚದೇ ನಿಶ್ಚಲರಾಗಿದ್ದಾರೆ. ಈ ಲೀಗ್ನಲ್ಲಿ ಆಡಲು ನಾವು ತುಂಬಾ ಶ್ರಮ ಹಾಕಿದ್ದೆವು. ತ್ಯಾಗವನ್ನೂ ಮಾಡಿದ್ದೆವು’ ಎಂದು ಭಾರತ ತಂಡದ ಡಿಫೆಂಡರ್ ಸಂದೇಶ್ ಜಿಂಗಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಬೇಸರ ತೋಡಿಕೊಂಡಿದ್ದಾರೆ.</p>.<p>‘ಭಾರತದ ಫುಟ್ಬಾಲ್ ವ್ಯವಸ್ಥೆ ಅಯೋಮಯ ಸ್ಥಿತಿಯಲ್ಲಿದೆ. ಕನಸುಗಳು ಕಮರುತ್ತಿವೆ. ಮುಂದೇನು ಎಂಬ ಪ್ರಶ್ನೆ ಮೂಡಿದೆ. ಫುಟ್ಬಾಲ್ ಕ್ಷೇತ್ರ ಬಿಕ್ಕಟ್ಟಿನಿಂದ ಬಸವಳಿದಿದೆ. ಫೆಡರೇಷನ್ ಆಡಳಿತವು ಈಗಲೇ ಕಾಯ್ಮೋನ್ಮುಖವಾಗಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಭಾರತ ತಂಡದ ಅನುಭವಿ ಆಟಗಾರರಾದ ಸುನಿಲ್ ಚೆಟ್ರಿ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರು ಈ ಮೊದಲು ಇಂಥದ್ದೇ ಕಾಳಜಿ ವ್ಯಕ್ತಪಡಿಸಿದ್ದರು.</p>.<p>‘ನಮ್ಮ ಸಿಟ್ಟು, ಸೆಡವು ಈಗ ಹತಾಶೆಯಾಗಿ ಪರಿವರ್ತನೆಯಾಗಿದೆ. ಏನೇ ಆಗಲಿ ಆಟವಾಡಬೇಕು ಎಂದು ಹಾತೊರೆಯುವ ಸ್ಥಿತಿಯಲ್ಲಿದ್ದೇವೆ. ಅಭಿಮಾನಿಗಳು ನಮ್ಮ ಪಾಲಿಗೆ ಎಲ್ಲವೂ’ ಎಂದು ಹೇಳಿಕೆಯಲ್ಲಿ ಜಿಂಗಾನ್ ತಿಳಿಸಿದ್ದಾರೆ.</p>.<p>ಐಎಸ್ಎಲ್ ಬಿಕ್ಕಟ್ಟು ಮುಂದುವರಿದ ಕಾರಣ ಮೋಹನ್ ಬಾಗನ್ ಕ್ಲಬ್ ಈಗಾಗಲೇ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಇತರ ಕೆಲವು ಕ್ಲಬ್ಗಳೂ ಸಂಕಷ್ಟದಲ್ಲಿವೆ.</p>.<p>ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ (ನಿವೃತ್ತ) ನಾಗೇಶ್ವರ ರಾವ್ ಅವರ ನೇತೃತ್ವದ ಎಐಎಫ್ಎಫ್ ಬಿಡ್ ಮೌಲ್ಯಮಾಪನ ಸಮಿತಿಯು ಬಿಡ್ ಗೊಂದಲದ ಬಗ್ಗೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದೆ. ಕೋರ್ಟ್ ಕಣ್ಗಾವಲಿನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.</p>.<p>ಐಎಸ್ಎಲ್ಗೆ ಈಗ ಪರಿಷ್ಕೃತ ಚೌಕಟ್ಟಿನೊಡನೆ ಹೊಸ ವಾಣಿಜ್ಯ ಪಾಲುದಾರರನ್ನು ಕಂಡುಕೊಳ್ಳಬೇಕಾದ ಸವಾಲು ಎಐಎಫ್ಎಫ್ ಮುಂದಿದೆ. 2014ರಲ್ಲಿ ಮೊದಲ ಬಾರಿ ಐಎಸ್ಎಲ್ ಆಯೋಜನೆಗೊಂಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಅನಿಶ್ಚಿತ ಸ್ಥಿತಿಯಲ್ಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಆರಂಭಿಸಬೇಕೆಂದು ಫುಟ್ಬಾಲ್ ಆಡಳಿತವನ್ನು ಕೋರಿರುವ ಹಿರಿಯ ಆಟಗಾರರು, ‘ತಮ್ಮ ಸಿಟ್ಟು ಮತ್ತು ಹತಾಶೆ’ ಈಗ ನಿರಾಶೆಯ ಕೂಪವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ.</p>.<p>ಹೊಸ ವಾಣಿಜ್ಯ ಹಕ್ಕು ಪಡೆಯಲು ಬಿಡ್ನಲ್ಲಿ ಯಾರೂ ಮುಂದೆ ಬಂದಿಲ್ಲ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಹೋದ ವಾರ ತಿಳಿಸಿತ್ತು. ಅದರ ಬೆನ್ನಲ್ಲೇ ಆಟಗಾರರಿಂದ ಮನವಿ ಬಂದಿದೆ.</p>.<p>‘ಈಗಾಗಲೇ ವಿಳಂಬವಾಗಿದೆ. ತರಬೇತುದಾರು, ಅಭಿಮಾನಿಗಳು, ಸಿಬ್ಬಂದಿ, ಆಟಗಾರರು ಏನೂ ತೋಚದೇ ನಿಶ್ಚಲರಾಗಿದ್ದಾರೆ. ಈ ಲೀಗ್ನಲ್ಲಿ ಆಡಲು ನಾವು ತುಂಬಾ ಶ್ರಮ ಹಾಕಿದ್ದೆವು. ತ್ಯಾಗವನ್ನೂ ಮಾಡಿದ್ದೆವು’ ಎಂದು ಭಾರತ ತಂಡದ ಡಿಫೆಂಡರ್ ಸಂದೇಶ್ ಜಿಂಗಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಬೇಸರ ತೋಡಿಕೊಂಡಿದ್ದಾರೆ.</p>.<p>‘ಭಾರತದ ಫುಟ್ಬಾಲ್ ವ್ಯವಸ್ಥೆ ಅಯೋಮಯ ಸ್ಥಿತಿಯಲ್ಲಿದೆ. ಕನಸುಗಳು ಕಮರುತ್ತಿವೆ. ಮುಂದೇನು ಎಂಬ ಪ್ರಶ್ನೆ ಮೂಡಿದೆ. ಫುಟ್ಬಾಲ್ ಕ್ಷೇತ್ರ ಬಿಕ್ಕಟ್ಟಿನಿಂದ ಬಸವಳಿದಿದೆ. ಫೆಡರೇಷನ್ ಆಡಳಿತವು ಈಗಲೇ ಕಾಯ್ಮೋನ್ಮುಖವಾಗಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಭಾರತ ತಂಡದ ಅನುಭವಿ ಆಟಗಾರರಾದ ಸುನಿಲ್ ಚೆಟ್ರಿ ಮತ್ತು ಗುರುಪ್ರೀತ್ ಸಿಂಗ್ ಸಂಧು ಅವರು ಈ ಮೊದಲು ಇಂಥದ್ದೇ ಕಾಳಜಿ ವ್ಯಕ್ತಪಡಿಸಿದ್ದರು.</p>.<p>‘ನಮ್ಮ ಸಿಟ್ಟು, ಸೆಡವು ಈಗ ಹತಾಶೆಯಾಗಿ ಪರಿವರ್ತನೆಯಾಗಿದೆ. ಏನೇ ಆಗಲಿ ಆಟವಾಡಬೇಕು ಎಂದು ಹಾತೊರೆಯುವ ಸ್ಥಿತಿಯಲ್ಲಿದ್ದೇವೆ. ಅಭಿಮಾನಿಗಳು ನಮ್ಮ ಪಾಲಿಗೆ ಎಲ್ಲವೂ’ ಎಂದು ಹೇಳಿಕೆಯಲ್ಲಿ ಜಿಂಗಾನ್ ತಿಳಿಸಿದ್ದಾರೆ.</p>.<p>ಐಎಸ್ಎಲ್ ಬಿಕ್ಕಟ್ಟು ಮುಂದುವರಿದ ಕಾರಣ ಮೋಹನ್ ಬಾಗನ್ ಕ್ಲಬ್ ಈಗಾಗಲೇ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಇತರ ಕೆಲವು ಕ್ಲಬ್ಗಳೂ ಸಂಕಷ್ಟದಲ್ಲಿವೆ.</p>.<p>ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ (ನಿವೃತ್ತ) ನಾಗೇಶ್ವರ ರಾವ್ ಅವರ ನೇತೃತ್ವದ ಎಐಎಫ್ಎಫ್ ಬಿಡ್ ಮೌಲ್ಯಮಾಪನ ಸಮಿತಿಯು ಬಿಡ್ ಗೊಂದಲದ ಬಗ್ಗೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದೆ. ಕೋರ್ಟ್ ಕಣ್ಗಾವಲಿನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.</p>.<p>ಐಎಸ್ಎಲ್ಗೆ ಈಗ ಪರಿಷ್ಕೃತ ಚೌಕಟ್ಟಿನೊಡನೆ ಹೊಸ ವಾಣಿಜ್ಯ ಪಾಲುದಾರರನ್ನು ಕಂಡುಕೊಳ್ಳಬೇಕಾದ ಸವಾಲು ಎಐಎಫ್ಎಫ್ ಮುಂದಿದೆ. 2014ರಲ್ಲಿ ಮೊದಲ ಬಾರಿ ಐಎಸ್ಎಲ್ ಆಯೋಜನೆಗೊಂಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>