<p><strong>ಕೋಲ್ಕತ್ತ:</strong> ಡುರಾಂಡ್ ಕಪ್ಫುಟ್ಬಾಲ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡದ ನಾಯಕ ಸುನಿಲ್ ಚೆಟ್ರಿ ಅವರನ್ನು ಮಣಿಪುರ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರು ಪಕ್ಕಕ್ಕೆ ತಳ್ಳಿರುವ ವಿಡಿಯೊವೊಂದು ವೈರಲ್ ಆಗಿದೆ.</p>.<p>38 ವರ್ಷದ ಚೆಟ್ರಿ ಮುಂದಾಳತ್ವದಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಇದೇ ಮೊದಲ ಬಾರಿಗೆಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿಚಾಂಪಿಯನ್ ಪಟ್ಟ ಅಲಂಕರಿಸಿದೆ.ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಬಿಎಫ್ಸಿ ತಂಡವು ಮುಂಬೈ ಸಿಟಿ ಎಫ್ಸಿ ವಿರುದ್ಧ 2-1ರ ಅಂತರದ ಭರ್ಜರಿ ಗೆಲುವು ದಾಖಲಿಸಿ ಈ ಸಾಧನೆ ಮಾಡಿದೆ.</p>.<p>ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಈ ವೇಳೆಗಣೇಶನ್ ಅವರು ಕ್ಯಾಮರಾಗಳಿಗೆ ಅಡ್ಡಿ ಬರದಂತೆ ಚೆಟ್ರಿ ಅವರನ್ನು ಪಕ್ಕಕ್ಕೆ ಸರಿಸಿದ್ದರು. ಈ ವಿಡಿಯೊಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.</p>.<p>'ಈ ಕಾರಣಕ್ಕೆ ನಾವು ಭಾರತದ ರಾಜಕಾರಣಿಗಳಿಗೆ ತಲೆಯಲ್ಲಿ ಬುದ್ದಿ ಇಲ್ಲ ಎನ್ನುವುದು. ಅವರು ಕೇವಲ ಖ್ಯಾತಿ ಗಳಿಸುವ ಸಲುವಾಗಿ ಕ್ಯಾಮರಾಗೆ ಮುಖ ತೋರಿಸಲು ಬರುತ್ತಾರೆ. ಈ ವ್ಯಕ್ತಿ (ಲಾ ಗಣೇಶನ್) ತಾವೇ ಪ್ರಶಸ್ತಿ ಗೆದ್ದ ರೀತಿಯಲ್ಲಿ ಪ್ರಶಸ್ತಿ ಹಿಡಿದುಕೊಳ್ಳಲು ಸುನಿಲ್ ಚೆಟ್ರಿ ಅವರನ್ನು ಪಕ್ಕಕ್ಕೆ ನಿಲ್ಲಲು ಹೇಳಿದ್ದಾರೆ' ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಟೀಕಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/football/sunil-chhetri-bengaluru-fc-win-maiden-durand-cup-title-beat-mumbai-city-fc-2-1-in-final-973184.html" target="_blank">Durand Cup: ಮುಂಬೈ ಮಣಿಸಿದ ಬೆಂಗಳೂರು ಎಫ್ಸಿಗೆ ಚೊಚ್ಚಲ ಪ್ರಶಸ್ತಿ</a></p>.<p>ಗಣೇಶನ್ ಅವರು ಸುನಿಲ್ ಚೆಟ್ರಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.</p>.<p>ಮತ್ತಷ್ಟು ಟ್ವೀಟ್ಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಡುರಾಂಡ್ ಕಪ್ಫುಟ್ಬಾಲ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡದ ನಾಯಕ ಸುನಿಲ್ ಚೆಟ್ರಿ ಅವರನ್ನು ಮಣಿಪುರ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರು ಪಕ್ಕಕ್ಕೆ ತಳ್ಳಿರುವ ವಿಡಿಯೊವೊಂದು ವೈರಲ್ ಆಗಿದೆ.</p>.<p>38 ವರ್ಷದ ಚೆಟ್ರಿ ಮುಂದಾಳತ್ವದಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಇದೇ ಮೊದಲ ಬಾರಿಗೆಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿಚಾಂಪಿಯನ್ ಪಟ್ಟ ಅಲಂಕರಿಸಿದೆ.ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಬಿಎಫ್ಸಿ ತಂಡವು ಮುಂಬೈ ಸಿಟಿ ಎಫ್ಸಿ ವಿರುದ್ಧ 2-1ರ ಅಂತರದ ಭರ್ಜರಿ ಗೆಲುವು ದಾಖಲಿಸಿ ಈ ಸಾಧನೆ ಮಾಡಿದೆ.</p>.<p>ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಈ ವೇಳೆಗಣೇಶನ್ ಅವರು ಕ್ಯಾಮರಾಗಳಿಗೆ ಅಡ್ಡಿ ಬರದಂತೆ ಚೆಟ್ರಿ ಅವರನ್ನು ಪಕ್ಕಕ್ಕೆ ಸರಿಸಿದ್ದರು. ಈ ವಿಡಿಯೊಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.</p>.<p>'ಈ ಕಾರಣಕ್ಕೆ ನಾವು ಭಾರತದ ರಾಜಕಾರಣಿಗಳಿಗೆ ತಲೆಯಲ್ಲಿ ಬುದ್ದಿ ಇಲ್ಲ ಎನ್ನುವುದು. ಅವರು ಕೇವಲ ಖ್ಯಾತಿ ಗಳಿಸುವ ಸಲುವಾಗಿ ಕ್ಯಾಮರಾಗೆ ಮುಖ ತೋರಿಸಲು ಬರುತ್ತಾರೆ. ಈ ವ್ಯಕ್ತಿ (ಲಾ ಗಣೇಶನ್) ತಾವೇ ಪ್ರಶಸ್ತಿ ಗೆದ್ದ ರೀತಿಯಲ್ಲಿ ಪ್ರಶಸ್ತಿ ಹಿಡಿದುಕೊಳ್ಳಲು ಸುನಿಲ್ ಚೆಟ್ರಿ ಅವರನ್ನು ಪಕ್ಕಕ್ಕೆ ನಿಲ್ಲಲು ಹೇಳಿದ್ದಾರೆ' ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಟೀಕಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/sports/football/sunil-chhetri-bengaluru-fc-win-maiden-durand-cup-title-beat-mumbai-city-fc-2-1-in-final-973184.html" target="_blank">Durand Cup: ಮುಂಬೈ ಮಣಿಸಿದ ಬೆಂಗಳೂರು ಎಫ್ಸಿಗೆ ಚೊಚ್ಚಲ ಪ್ರಶಸ್ತಿ</a></p>.<p>ಗಣೇಶನ್ ಅವರು ಸುನಿಲ್ ಚೆಟ್ರಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.</p>.<p>ಮತ್ತಷ್ಟು ಟ್ವೀಟ್ಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>