‘ಸೆಮಿಫೈನಲ್ನಲ್ಲಿ ಸೋತಾಗ ತಂಡದಲ್ಲಿ ನಿರಾಸೆ ಆವರಿಸಿತ್ತು. ಈ ವೇಳೆ ಕೋಚ್ ಅವರು ಪ್ರಧಾನ ಮಂತ್ರಿ ನಿಮ್ಮೊಂದಿಗೆ ಮಾತನಾಡಲು ಬಯಸಿರುವುದಾಗಿ ತಿಳಿಸಿದರು. ಈ ವೇಳೆ ಮಾತನಾಡಿದ ಮೋದಿ ಅವರು, ನೀವೆಲ್ಲ ಚೆನ್ನಾಗಿ ಆಡಿದ್ದೀರಿ, ನಿರಾಶರಾಗಬೇಡಿ ಮುಂದಿರುವ ಪಂದ್ಯದತ್ತ ಗಮನಹರಿಸಿ, ಇಡೀ ದೇಶಕ್ಕೆ ನಿಮ್ಮ ಕುರಿತು ಹೆಮ್ಮೆಯಿದೆ ಎಂದರು. ಇದು ತಂಡದಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸಲು ಕಾರಣವಾಯಿತು‘ ಎಂದು ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮನ್ಪ್ರೀತ್ ಹೇಳಿದ್ದಾರೆ.