‘ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿರುವುದರಿಂದ ಉತ್ತಮ ಲಯದಲ್ಲಿದ್ದೇನೆ. ಆದರೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಕಾಮನ್ವೆಲ್ತ್ ಕೂಟದ ಕ್ವಾರ್ಟರ್ಫೈನಲ್ನಲ್ಲಿ ಆಡುವಾಗಲೇ ಕಾಲಿನಲ್ಲಿ ನೋವು ಇತ್ತು. ಗಾಯಗೊಳ್ಳುವ ಆತಂಕವೂ ಇತ್ತು. ಆದರೆ, ನನ್ನ ಕೋಚ್ ಮತ್ತು ಫಿಸಿಯೊ ಬಹಳಷ್ಟು ಮುತುವರ್ಜಿ ವಹಿಸಿ ಆರೈಕೆ ಮಾಡಿದ್ದರಿಂದ ಕೊನೆಯ ಹಂತದವರೆಗೂ ಆಡಲು ಸಾಧ್ಯವಾಯಿತು’ ಎಂದು ಸಿಂಧು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.