ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶುಕ್ರವಾರ, ಎರಡನೇ ಶ್ರೇಯಾಂಕದ ಪ್ರಣವ್ ರಾಮ್ ಎನ್. (ತೆಲಂಗಾಣ), ನಾಲ್ಕನೇ ಶ್ರೇಯಾಂಕದ ಕುನಾಲ್ ಚೌಧರಿ (ರಾಜಸ್ಥಾನ) ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು. ಪ್ರಣವ್ 21–14, 21–16ರಲ್ಲಿ ಆರಾಧ್ಯ ಶರ್ಮ ವಿರುದ್ಧ, ಕುನಾಲ್ 21–7, 21–18ರಲ್ಲಿ ಹತ್ತನೇ ಶ್ರೇಯಾಂಕದ ಕೇಶ್ರಿ ನೀರಜ್ (ಜಾರ್ಖಂಡ್) ವಿರುದ್ಧ ಜಯಗಳಿಸಿದರು.