ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ದಯಾನಂದ ಅಧ್ಯಕ್ಷ

Last Updated 9 ನವೆಂಬರ್ 2020, 4:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಐಪಿಎಸ್‌ ಅಧಿಕಾರಿ ಬಿ.ದಯಾನಂದ ಆಯ್ಕೆಯಾದರು. ಗೌರವ ಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್‌, ಚೇರ್‌ಮನ್ ಆಗಿ ನಿವೃತ್ತ ಐಎಎಸ್ ಅಧಿಕಾರಿ ಜೆ.ಅಲೆಕ್ಸಾಂಡರ್ ಆಯ್ಕೆಯಾದರು. ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಪೋಷಕರಾಗಿ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಓಂಪ್ರಕಾಶ್‌, ಎಸ್‌.ಸಿ.ಬರ್ಮನ್‌, ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಆರ್‌.ರಾಜನ್, ಗುಣಶೇಖರ, ಕೆ.ಕೆ.ಸುಮಿತಾ, ಖಜಾಂಚಿಯಾಗಿ ಶ್ರೀನಿವಾಸಮೂರ್ತಿ ಆಯ್ಕೆಯಾದರು.

ಸಹಕಾರ್ಯದರ್ಶಿಗಳಾಗಿ ಆರ್‌.ಪ್ರಕಾಶ್‌, ಅಂಚೆ ಅಶ್ವತ್ಥ್‌, ಜೆ.ಇ.ಮೋಹನ್ ಕುಮಾರ್ ಆಯ್ಕೆಯಾದರು. ದೇವಾಂಗ ಯೂನಿಯನ್‌, ವೈಎಂಎಂಎ, ಸದರ್ನ್ ಬ್ಲೂಸ್‌, ಬ್ಯಾಂಕ್ ಆಫ್ ಬರೋಡ, ಬ್ರದರ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ಗಳಿಗೆ ಕಾರ್ಯಕಾರಿ ಸದಸ್ಯತ್ವ ಮತ್ತು ಬಳ್ಳಾರಿ, ಧಾರವಾಡ, ಮಂಗಳೂರು, ಮೈಸೂರು ಘಟಕಗಳನ್ನು ಜಿಲ್ಲಾ ಸಂಸ್ಥೆಗಳಾಗಿ ಘೋಷಿಸಲಾಯಿತು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT