ಈ ಸಂದರ್ಭದಲ್ಲಿ ಹಾಜರಿದ್ದ ತಂಡದ ಮುಖ್ಯ ಕೋಚ್ ಅರವಿಂದ್ ಭಟ್, ‘ತಂಡಕ್ಕೆ ಬೆಂಗಳೂರು ಎಂದು ಹೆಸರಿಟ್ಟಿದ್ದೇವೆ. ಆದರೆ, ಇಲ್ಲಿಯೇ ನಡೆಯದಿದ್ದರೆ ಬೇಸರವಾಗುತ್ತದೆ. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣವನ್ನು ಅಧಿಕೃತ ಪ್ರಸಾರ ಟಿವಿ ವಾಹಿನಿಯ ತಂಡವು ಪರಿಶೀಲನೆ ನಡೆಸಿದೆ. ಅದು ಪ್ರಶಸ್ತವೂ ಆಗಿದೆ. ಬೆಂಗಳೂರಿನಲ್ಲಿ ಅವಕಾಶ ಸಿಗದಿದ್ದರೆ ಅಲ್ಲಿ ನಡೆಸುತ್ತೇವೆ. ಪಿಬಿಎಲ್ ಲೀಗ್ ಪಂದ್ಯಗಳಿಗೆ ಅವಕಾಶ ನೀಡಿದರೆ, ಕ್ರೀಡಾ ಇಲಾಖೆಗೆ ಶುಲ್ಕದ ರೂಪದಲ್ಲಿ ಉತ್ತಮ ಮೊತ್ತ ಸಂದಾಯವಾಗುತ್ತದೆ. ಅದು ಕ್ರೀಡಾಭಿವೃದ್ಧಿಗೆ ಬಳಕೆಯಾಗುತ್ತದೆ’ ಎಂದರು.