<p><strong>ಬೆಂಗಳೂರು:</strong> ವೈಟ್ಫೀಲ್ಡ್ ಬಳಿಯ ಕನ್ನಮಂಗಲದಲ್ಲಿ ಮಿನಿ ಲಾಲ್ಬಾಗ್ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ. ಇದರಿಂದಾಗಿ, ನಗರದ ಪಶ್ಚಿಮ ಭಾಗದ ನಿವಾಸಿಗಳು ಉದ್ಯಾನದಲ್ಲಿ ಅಡ್ಡಾಡಲು ಇನ್ನೂ 8 ವರ್ಷ ಕಾಯಬೇಕಾಗಿದೆ.</p>.<p>ಉದ್ಯಾನ ನಿರ್ಮಾಣಕ್ಕಾಗಿ ಅ.ನ.ಯಲ್ಲಪ್ಪರೆಡ್ಡಿ ನೇತೃತ್ವದ ತಜ್ಞರ ಸಮಿತಿಯು 2018ರ ಮೇ ತಿಂಗಳಲ್ಲಿ ಕ್ರಿಯಾಯೋಜನೆ ರೂಪಿಸಿತ್ತು. ಇದಕ್ಕಾಗಿ 150 ಜಾತಿಯ 3,500 ತೆಂಗಿನಮರಗಳಿರುವ 70 ಎಕರೆ ತೋಟವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.</p>.<p>ಕ್ರಿಯಾಯೋಜನೆ ರೂಪಿಸಿ ಒಂದು ವರ್ಷ ಗತಿಸಿದ್ದು, ₹50 ಲಕ್ಷದಂತೆ ಹಂತ ಹಂತವಾಗಿ ಇಲ್ಲಿಯವರೆಗೆ ₹1.25 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ಇದರಿಂದಾಗಿ ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ.</p>.<p>ಏನೇನು ಕೆಲಸಗಳಾಗಿವೆ?: ಇಲ್ಲಿರುವ ತೆಂಗಿನ ಮರಗಳಿಗೆ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ರಕ್ಷಣೆಗಾಗಿ ತೋಟದ ಸುತ್ತ ಆವರಣ ಗೋಡೆ ನಿರ್ಮಿಸಲಾಗಿದೆ. ತೋಟದೊಳಗೆ ಒಂದೂವರೆ ಕಿ.ಮೀ ಪಾದಚಾರಿ ಮಾರ್ಗ ಸಿದ್ಧಗೊಂಡಿದೆ. ಮಳೆನೀರು ಸಂಗ್ರಹಕ್ಕಾಗಿ ಮೂರು ಕಡೆ ಹೊಂಡಗಳನ್ನು ನಿರ್ಮಿಸಲಾಗಿದೆ. ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ.</p>.<p>‘ನೆರಳು ಉದ್ಯಾನವನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಸುಗಂಧ ಬೀರುವ ಸಸ್ಯಗಳನ್ನು ನೆಡಲಾಗುತ್ತದೆ. ಅದರ ನೆರಳಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜತೆಗೆ, ವಿದೇಶದ ಸಸ್ಯಗಳನ್ನೂ ನೆಡಬೇಕಿದೆ. ಆ ತೋಟದಲ್ಲಿರುವ ಸಸ್ಯಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸ್ಥಾಪಿಸಬೇಕಿದೆ. ಸಸ್ಯೋತ್ಪಾದನ ಕೇಂದ್ರ ತಲೆ ಎತ್ತಬೇಕಿರುವುದರಿಂದ ಮಿನಿ ಲಾಲ್ಬಾಗ್ ಸಿದ್ಧವಾಗಲು ಇನ್ನೂ 8 ವರ್ಷ ಬೇಕು’ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು</p>.<p>‘ಹಂತ–ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಯತ್ನಿಸುತ್ತೇವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತುಮಕೂರಿನ ದೊಡ್ಡಸಾಗರ, ಚಿಕ್ಕಬಳ್ಳಾಪುರದ ಅನ್ನಕುನೂರು, ಮೈಸೂರಿನ ದತ್ತಗಳ್ಳಿ, ಉತ್ತರ ಕನ್ನಡದ ತರಕನಹಳ್ಳಿ ಹಾಗೂ ಬೆಂಗಳೂರಿನ ಕನ್ನಮಂಗಲದಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಚಿಕ್ಕ ತೋಟಗಳ ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ 2011ರಲ್ಲಿ ಪ್ರಕಟಿಸಿತ್ತು.</p>.<p><strong>ಸಿಎಸ್ಆರ್ ಬಳಕೆಗೆ ಚಿಂತನೆ</strong><br />‘ಸರ್ಕಾರದ ಅನುದಾನವೊಂದನ್ನೇ ನೆಚ್ಚಿಕೊಂಡರೆ, ಆಗುವುದಿಲ್ಲ. ಆದ್ದರಿಂದ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅ.ನ.ಯಲ್ಲಪ್ಪ ರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವೈಟ್ಫೀಲ್ಡ್ ಬಳಿಯ ಕನ್ನಮಂಗಲದಲ್ಲಿ ಮಿನಿ ಲಾಲ್ಬಾಗ್ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ. ಇದರಿಂದಾಗಿ, ನಗರದ ಪಶ್ಚಿಮ ಭಾಗದ ನಿವಾಸಿಗಳು ಉದ್ಯಾನದಲ್ಲಿ ಅಡ್ಡಾಡಲು ಇನ್ನೂ 8 ವರ್ಷ ಕಾಯಬೇಕಾಗಿದೆ.</p>.<p>ಉದ್ಯಾನ ನಿರ್ಮಾಣಕ್ಕಾಗಿ ಅ.ನ.ಯಲ್ಲಪ್ಪರೆಡ್ಡಿ ನೇತೃತ್ವದ ತಜ್ಞರ ಸಮಿತಿಯು 2018ರ ಮೇ ತಿಂಗಳಲ್ಲಿ ಕ್ರಿಯಾಯೋಜನೆ ರೂಪಿಸಿತ್ತು. ಇದಕ್ಕಾಗಿ 150 ಜಾತಿಯ 3,500 ತೆಂಗಿನಮರಗಳಿರುವ 70 ಎಕರೆ ತೋಟವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.</p>.<p>ಕ್ರಿಯಾಯೋಜನೆ ರೂಪಿಸಿ ಒಂದು ವರ್ಷ ಗತಿಸಿದ್ದು, ₹50 ಲಕ್ಷದಂತೆ ಹಂತ ಹಂತವಾಗಿ ಇಲ್ಲಿಯವರೆಗೆ ₹1.25 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ಇದರಿಂದಾಗಿ ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ.</p>.<p>ಏನೇನು ಕೆಲಸಗಳಾಗಿವೆ?: ಇಲ್ಲಿರುವ ತೆಂಗಿನ ಮರಗಳಿಗೆ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ರಕ್ಷಣೆಗಾಗಿ ತೋಟದ ಸುತ್ತ ಆವರಣ ಗೋಡೆ ನಿರ್ಮಿಸಲಾಗಿದೆ. ತೋಟದೊಳಗೆ ಒಂದೂವರೆ ಕಿ.ಮೀ ಪಾದಚಾರಿ ಮಾರ್ಗ ಸಿದ್ಧಗೊಂಡಿದೆ. ಮಳೆನೀರು ಸಂಗ್ರಹಕ್ಕಾಗಿ ಮೂರು ಕಡೆ ಹೊಂಡಗಳನ್ನು ನಿರ್ಮಿಸಲಾಗಿದೆ. ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ.</p>.<p>‘ನೆರಳು ಉದ್ಯಾನವನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಸುಗಂಧ ಬೀರುವ ಸಸ್ಯಗಳನ್ನು ನೆಡಲಾಗುತ್ತದೆ. ಅದರ ನೆರಳಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜತೆಗೆ, ವಿದೇಶದ ಸಸ್ಯಗಳನ್ನೂ ನೆಡಬೇಕಿದೆ. ಆ ತೋಟದಲ್ಲಿರುವ ಸಸ್ಯಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸ್ಥಾಪಿಸಬೇಕಿದೆ. ಸಸ್ಯೋತ್ಪಾದನ ಕೇಂದ್ರ ತಲೆ ಎತ್ತಬೇಕಿರುವುದರಿಂದ ಮಿನಿ ಲಾಲ್ಬಾಗ್ ಸಿದ್ಧವಾಗಲು ಇನ್ನೂ 8 ವರ್ಷ ಬೇಕು’ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು</p>.<p>‘ಹಂತ–ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಯತ್ನಿಸುತ್ತೇವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತುಮಕೂರಿನ ದೊಡ್ಡಸಾಗರ, ಚಿಕ್ಕಬಳ್ಳಾಪುರದ ಅನ್ನಕುನೂರು, ಮೈಸೂರಿನ ದತ್ತಗಳ್ಳಿ, ಉತ್ತರ ಕನ್ನಡದ ತರಕನಹಳ್ಳಿ ಹಾಗೂ ಬೆಂಗಳೂರಿನ ಕನ್ನಮಂಗಲದಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಚಿಕ್ಕ ತೋಟಗಳ ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ 2011ರಲ್ಲಿ ಪ್ರಕಟಿಸಿತ್ತು.</p>.<p><strong>ಸಿಎಸ್ಆರ್ ಬಳಕೆಗೆ ಚಿಂತನೆ</strong><br />‘ಸರ್ಕಾರದ ಅನುದಾನವೊಂದನ್ನೇ ನೆಚ್ಚಿಕೊಂಡರೆ, ಆಗುವುದಿಲ್ಲ. ಆದ್ದರಿಂದ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅ.ನ.ಯಲ್ಲಪ್ಪ ರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>