<p><strong>ಸೂರತ್</strong>: ಕೋವಿಡ್ನಿಂದ ಗುಣಮುಖರಾಗಿರುವ ಗುಜರಾತ್ ಮೂಲದ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.</p>.<p>ಗುಜರಾತ್ನ ಸೂರತ್ ನಿವಾಸಿಯಾಗಿರುವ ಖಾದರ್ ಶೇಕ್ ಎಂಬುವವರು ತಮ್ಮ ಕಚೇರಿಯ ಆವರಣವನ್ನು 85 ಹಾಸಿಗೆಗಳ ಕೊರೊನಾ ವಾರ್ಡ್ ಆಗಿ ಪರಿವರ್ತಿಸಿದ್ದಾರೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯಲು ಸಹಾಯಹಸ್ತ ಚಾಚಿದ್ದಾರೆ.</p>.<p>ಉದ್ಯಮಿ ಖಾದರ್ ಶೇಕ್ ಅವರಿಗೆ ಕಳೆದ ತಿಂಗಳು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಸೂರತ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆಸ್ಪತ್ರೆ ನೀಡಿದ ಬಿಲ್ ನೋಡಿ ಗಾಬರಿಗೊಂಡಿದ್ದ ಶೇಕ್ ಅವರು ತಮ್ಮ ಕಚೇರಿಯನ್ನೇ ಕೊರೊನಾ ವಾರ್ಡ್ ಆಗಿ ಪರಿವರ್ತಿಸಿ ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.</p>.<p>'ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚವು ದುಬಾರಿಯಾಗಿದೆ. ಅಷ್ಟು ದೊಡ್ಡ ಮೊತ್ತವನ್ನುಬಡ ಜನರು ಭರಿಸುವುದು ಕಷ್ಟಸಾಧ್ಯ. ಹಾಗಾಗಿ, ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ನಿರ್ಧರಿಸಿದೆ' ಎಂದು ಶೇಕ್ ತಿಳಿಸಿದ್ದಾರೆ. </p>.<p>ಸರ್ಕಾರಿ ಅಧಿಕಾರಿಗಳಿಂದ ಪರವಾನಗಿ ಪಡೆದು ಕೊರೊನಾ ವಾರ್ಡ್ ಆರಂಭಿಸಿರುವುದಾಗಿ ಶೇಕ್ ಹೇಳಿದ್ದಾರೆ.</p>.<p>ಕೊರೊನಾ ಸೋಂಕಿತರ ಜಾತಿ, ಮತ, ಧರ್ಮಗಳನ್ನು ಲೆಕ್ಕಿಸದೇ ಇಲ್ಲಿ ಬರುವ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಲಾಗುವುದೆಂದು ಶೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೂರತ್</strong>: ಕೋವಿಡ್ನಿಂದ ಗುಣಮುಖರಾಗಿರುವ ಗುಜರಾತ್ ಮೂಲದ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.</p>.<p>ಗುಜರಾತ್ನ ಸೂರತ್ ನಿವಾಸಿಯಾಗಿರುವ ಖಾದರ್ ಶೇಕ್ ಎಂಬುವವರು ತಮ್ಮ ಕಚೇರಿಯ ಆವರಣವನ್ನು 85 ಹಾಸಿಗೆಗಳ ಕೊರೊನಾ ವಾರ್ಡ್ ಆಗಿ ಪರಿವರ್ತಿಸಿದ್ದಾರೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯಲು ಸಹಾಯಹಸ್ತ ಚಾಚಿದ್ದಾರೆ.</p>.<p>ಉದ್ಯಮಿ ಖಾದರ್ ಶೇಕ್ ಅವರಿಗೆ ಕಳೆದ ತಿಂಗಳು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಸೂರತ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆಸ್ಪತ್ರೆ ನೀಡಿದ ಬಿಲ್ ನೋಡಿ ಗಾಬರಿಗೊಂಡಿದ್ದ ಶೇಕ್ ಅವರು ತಮ್ಮ ಕಚೇರಿಯನ್ನೇ ಕೊರೊನಾ ವಾರ್ಡ್ ಆಗಿ ಪರಿವರ್ತಿಸಿ ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.</p>.<p>'ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚವು ದುಬಾರಿಯಾಗಿದೆ. ಅಷ್ಟು ದೊಡ್ಡ ಮೊತ್ತವನ್ನುಬಡ ಜನರು ಭರಿಸುವುದು ಕಷ್ಟಸಾಧ್ಯ. ಹಾಗಾಗಿ, ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ನಿರ್ಧರಿಸಿದೆ' ಎಂದು ಶೇಕ್ ತಿಳಿಸಿದ್ದಾರೆ. </p>.<p>ಸರ್ಕಾರಿ ಅಧಿಕಾರಿಗಳಿಂದ ಪರವಾನಗಿ ಪಡೆದು ಕೊರೊನಾ ವಾರ್ಡ್ ಆರಂಭಿಸಿರುವುದಾಗಿ ಶೇಕ್ ಹೇಳಿದ್ದಾರೆ.</p>.<p>ಕೊರೊನಾ ಸೋಂಕಿತರ ಜಾತಿ, ಮತ, ಧರ್ಮಗಳನ್ನು ಲೆಕ್ಕಿಸದೇ ಇಲ್ಲಿ ಬರುವ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಲಾಗುವುದೆಂದು ಶೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>