<p><strong>ನವದೆಹಲಿ:</strong> ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಣ ಭಿನ್ನಮತ ಶಮನಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಲು ಕೇಂದ್ರದ ವೀಕ್ಷಕರನ್ನಾಗಿ ಹಿರಿಯ ಮುಖಂಡರಾದ ಅಜಯ ಮಾಕೆನ್ ಹಾಗೂ ರಣದೀಪ್ ಸುರ್ಜೇವಾಲಾ ಅವರನ್ನು ಜೈಪುರಕ್ಕೆ ಭಾನುವಾರ ಕಳುಹಿಸಿದೆ.</p>.<p>ಇನ್ನೊಂದೆಡೆ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಉಸ್ತುವಾರಿ ಅವಿನಾಶ್ ಪಾಂಡೆ ಅವರು, ‘ರಾಜ್ಯ ಸರ್ಕಾರ ಸ್ಥಿರವಾಗಿದ್ದು, ತನ್ನ ಅವಧಿಯನ್ನು ಪೂರ್ಣಗೊಳಿಸುವುದು’ ಎಂದು ಹೇಳಿದ್ದಾರೆ.</p>.<p>‘ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಅವರಿಗೆ ಸಂದೇಶ ರವಾನಿಸಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇನೆ’ ಎಂದೂ ಪಾಂಡೆ ಹೇಳಿದ್ದಾರೆ.</p>.<p>ಈ ನಡುವೆ, ಪೈಲಟ್ ಅವರ ಬೆಂಬಲಿಗರು ಎಂದೇ ಪರಿಗಣಿಸಲಾಗಿದ್ದ ಮೂವರು ಶಾಸಕರು ಭಾನುವಾರ ದೆಹಲಿಯಿಂದ ಜೈಪುರಕ್ಕೆ ಮರಳಿದ್ದು, ತಮ್ಮ ಬೆಂಬಲ ಏನಿದ್ದರೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಎಂದು ಘೋಷಿಸಿದ್ದಾರೆ.</p>.<p>‘ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು’ ಎಂದು ಶಾಸಕರಾದ ಡ್ಯಾನಿಷ್ ಅಬ್ರಾರ್, ರೋಹಿತ್ ಬೋಹ್ರಾ ಹಾಗೂ ಚೇತನ್ ದೂಡಿ ಹೇಳಿದ್ದಾರೆ.</p>.<p>‘ಸಚಿನ್ ಪೈಲಟ್ ಅವರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶದಿಂದಲೇ ಅವರಿಗೆ ಎಸ್ಒಜಿ ನೋಟಿಸ್ ನೀಡಿದೆ’ ಎನ್ನುವ ಪೈಲಟ್ ಬೆಂಬಲಿಗರು,‘ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ನೋಟಿಸ್ ನೀಡಿರುವುದು ಕಣ್ಣೊರೆಸುವ ತಂತ್ರವಷ್ಟೇ’ ಎಂದಿದ್ದಾರೆ.</p>.<p>ಇನ್ನೊಂದೆಡೆ, ‘ಪ್ರತಿಯೊಬ್ಬರೂ ಎಸ್ಒಜಿಯೊಂದಿಗೆ ಸಹಕರಿಸಬೇಕು. ತನಿಖೆಗೆ ಒಳಪಡುವುದರಿಂದ ಯಾವುದೇ ಹಾನಿ ಇಲ್ಲ’ ಎಂದು ಅವಿನಾಶ್ ಪಾಂಡೆ ಹೇಳಿದ್ದಾರೆ.</p>.<p>‘ಆಡಳಿತಾರೂಢ ಪಕ್ಷವೊಂದು ಈ ಮೊದಲು ಮಧ್ಯಪ್ರದೇಶದಲ್ಲಿ ಶಾಸಕರನ್ನು ಖರೀದಿ ಮಾಡಿತು. ಈಗ ರಾಜಸ್ಥಾನದಲ್ಲಿ ಇಂತಹ ಕೆಲಸದಲ್ಲಿ ತೊಡಗಿದೆ’ ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಣ ಭಿನ್ನಮತ ಶಮನಕ್ಕೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಲು ಕೇಂದ್ರದ ವೀಕ್ಷಕರನ್ನಾಗಿ ಹಿರಿಯ ಮುಖಂಡರಾದ ಅಜಯ ಮಾಕೆನ್ ಹಾಗೂ ರಣದೀಪ್ ಸುರ್ಜೇವಾಲಾ ಅವರನ್ನು ಜೈಪುರಕ್ಕೆ ಭಾನುವಾರ ಕಳುಹಿಸಿದೆ.</p>.<p>ಇನ್ನೊಂದೆಡೆ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಉಸ್ತುವಾರಿ ಅವಿನಾಶ್ ಪಾಂಡೆ ಅವರು, ‘ರಾಜ್ಯ ಸರ್ಕಾರ ಸ್ಥಿರವಾಗಿದ್ದು, ತನ್ನ ಅವಧಿಯನ್ನು ಪೂರ್ಣಗೊಳಿಸುವುದು’ ಎಂದು ಹೇಳಿದ್ದಾರೆ.</p>.<p>‘ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಅವರಿಗೆ ಸಂದೇಶ ರವಾನಿಸಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇನೆ’ ಎಂದೂ ಪಾಂಡೆ ಹೇಳಿದ್ದಾರೆ.</p>.<p>ಈ ನಡುವೆ, ಪೈಲಟ್ ಅವರ ಬೆಂಬಲಿಗರು ಎಂದೇ ಪರಿಗಣಿಸಲಾಗಿದ್ದ ಮೂವರು ಶಾಸಕರು ಭಾನುವಾರ ದೆಹಲಿಯಿಂದ ಜೈಪುರಕ್ಕೆ ಮರಳಿದ್ದು, ತಮ್ಮ ಬೆಂಬಲ ಏನಿದ್ದರೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಎಂದು ಘೋಷಿಸಿದ್ದಾರೆ.</p>.<p>‘ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು’ ಎಂದು ಶಾಸಕರಾದ ಡ್ಯಾನಿಷ್ ಅಬ್ರಾರ್, ರೋಹಿತ್ ಬೋಹ್ರಾ ಹಾಗೂ ಚೇತನ್ ದೂಡಿ ಹೇಳಿದ್ದಾರೆ.</p>.<p>‘ಸಚಿನ್ ಪೈಲಟ್ ಅವರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶದಿಂದಲೇ ಅವರಿಗೆ ಎಸ್ಒಜಿ ನೋಟಿಸ್ ನೀಡಿದೆ’ ಎನ್ನುವ ಪೈಲಟ್ ಬೆಂಬಲಿಗರು,‘ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ನೋಟಿಸ್ ನೀಡಿರುವುದು ಕಣ್ಣೊರೆಸುವ ತಂತ್ರವಷ್ಟೇ’ ಎಂದಿದ್ದಾರೆ.</p>.<p>ಇನ್ನೊಂದೆಡೆ, ‘ಪ್ರತಿಯೊಬ್ಬರೂ ಎಸ್ಒಜಿಯೊಂದಿಗೆ ಸಹಕರಿಸಬೇಕು. ತನಿಖೆಗೆ ಒಳಪಡುವುದರಿಂದ ಯಾವುದೇ ಹಾನಿ ಇಲ್ಲ’ ಎಂದು ಅವಿನಾಶ್ ಪಾಂಡೆ ಹೇಳಿದ್ದಾರೆ.</p>.<p>‘ಆಡಳಿತಾರೂಢ ಪಕ್ಷವೊಂದು ಈ ಮೊದಲು ಮಧ್ಯಪ್ರದೇಶದಲ್ಲಿ ಶಾಸಕರನ್ನು ಖರೀದಿ ಮಾಡಿತು. ಈಗ ರಾಜಸ್ಥಾನದಲ್ಲಿ ಇಂತಹ ಕೆಲಸದಲ್ಲಿ ತೊಡಗಿದೆ’ ಎಂದು ರಣದೀಪ್ ಸುರ್ಜೇವಾಲಾ ಟ್ವೀಟ್ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>