'ರೋಗಿಗಳನ್ನು ಸುಲಿಗೆ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಏಕೆ ಅವಕಾಶ ಕೊಟ್ಟಿರಿ? ಸರ್ಕಾರ ಏಕೆ ಎಲ್ಲವನ್ನೂ ನೋಡಿಕೊಂಡು ಸುಮ್ಮನಿದೆ? ಚಿಕಿತ್ಸೆಗೆ ಶೀಘ್ರ ದರಮಿತಿ ವಿಧಿಸಬೇಕು' ಎಂದು ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಬಿ.ವಿಜಯಸೇನಾ ರೆಡ್ಡಿ ಅವರಿದ್ದ ನ್ಯಾಯಪೀಠವು ಸೂಚಿಸಿತು. ಕೇಂದ್ರ ಸರ್ಕಾರ ಮತ್ತು ಕ್ಲಿನಿಕಲ್ ಸೌಕರ್ಯಗಳ ರಾಷ್ಟ್ರೀಯ ಮಂಡಳಿ, ಖಾಸಗಿ ಆಸ್ಪತ್ರೆಗಳಾದ ಯಶೋಧಾ, ಕೇರ್, ಸನ್ಶೈನ್ ಮತ್ತು ಮೆಡಿಕವರ್ಗಳಿಗೂ ಹೈಕೋರ್ಟ್ ನೊಟೀಸ್ ಜಾರಿ ಮಾಡಿತು.