ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆಗೆ ಭಾರತ ಬದ್ಧವಾಗಿದೆ. ಅಲ್ಲಿ ನೌಕಾ ಸಂಚಾರ ನಿರ್ಬಂಧಿಸುವ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಯತ್ನಗಳನ್ನು ನಿರ್ಬಂಧಿಸುವ ಯಾವುದೇ ಕ್ರಮಗಳನ್ನು ಭಾರತ ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಬೆದರಿಕೆ ಅಥವಾ ಸೇನಾ ಬಲಪ್ರಯೋಗದ ಬದಲಾಗಿ, ಮಾತುಕತೆ ಮೂಲಕ ವಿವಾದ ಬಗೆಹರಸಿಕೊಳ್ಳುವ ಸಂಬಂಧ ಚೀನಾ ಸೇರಿದಂತೆ ಕಡಲ ನೆರೆಯಹೊರೆಯ ದೇಶಗಳಿಗೆ ಭಾರತ ಸದ್ಯದಲ್ಲೇ ಔಪಚಾರಿಕವಾಗಿ ಕರೆ ನೀಡಲಿದೆ.