ಹೈದರಾಬಾದ್: ‘ತೆಲಂಗಾಣದಲ್ಲಿ ಮೇ 29ರವರೆಗೂ ಲಾಕ್ಡೌನ್ ಮುಂದುವರಿಸಲಾಗುವುದು. ಆದರೆ ಗ್ರಾಮೀಣ ಹಾಗೂ ಮುನ್ಸಿಪಲ್ ಪ್ರದೇಶಗಳಲ್ಲಿ ನಿಯಮ ಸಡಿಲಿಸಲಾಗುವುದು’ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಹೇಳಿದ್ದಾರೆ.
ಮಂಗಳವಾರ ರಾತ್ರಿ ಸಂಪುಟ ಸಚಿವರ ಜತೆ ಸಭೆ ನಡೆಸಿದ ಬಳಿಕ ಈ ವಿಷಯ ಘೋಷಿಸಿರುವ ರಾವ್, ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸಲು ಬಹುತೇಕರು ಒಲವು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.