ನವದೆಹಲಿ: ತೆಲಂಗಾಣ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಪೊಲೀಸ್ ಎನ್ಕೌಂಟರ್ ಮಾಡಿರುವ ಸುದ್ದಿಗೆ ಪ್ರತಿಕ್ರಿಯಿಸಿದ ಸಂತ್ರಸ್ತೆಯ ಅಪ್ಪ ನನ್ನ ಮಗಳ ಆತ್ಮಕ್ಕೆ ಶಾಂತಿ ಲಭಿಸಿತು ಎಂದು ಹೇಳಿದ್ದಾರೆ.
ನವೆಂಬರ್ 27ರಂದು ಪಶು ವೈದ್ಯೆಯ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.
ನನ್ನ ಮಗಳಹತ್ಯೆಯಾಗಿ10 ದಿನ ಆಯ್ತು. ಪೊಲೀಸ್ ಮತ್ತು ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಲಭಿಸಿರಬಹುದು ಎಂದು ಸಂತ್ರಸ್ತೆಯ ಅಪ್ಪ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಅತ್ಯಾಚಾರವೆಸಗಿದ ನಾಲ್ವರು ಆರೋಪಿಗಳನ್ನುಎನ್ಕೌಂಟರ್ ಮಾಡಿರುವ ಸೈಬೆರಾಬಾದ್ ಪೊಲೀಸರನ್ನು ಅಭಿನಂದಿಸಿದ ನಿರ್ಭಯಾಳ ಅಮ್ಮ ಆಶಾದೇವಿ, ಎನ್ಕೌಂಟರ್ ಮಾಡಿದ ಪೊಲೀಸರ ವಿರುದ್ಧಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದಾರೆ.
Asha Devi, Nirbhaya's mother on all four accused in rape&murder of woman veterinarian in Telangana killed in encounter: I am extremely happy with this punishment.Police has done a great job & I demand that no action should be taken against the police personnel. pic.twitter.com/frL3sRqcD6
ಈ ಶಿಕ್ಷೆ ಬಗ್ಗೆ ಖುಷಿಯಾಗಿದೆ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದಿದ್ದಾರೆ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾಳ ಅಮ್ಮ.