ಸಂವಾದದ ನಡುವೆಯೇ ಯುವತಿಯೊಬ್ಬಳು ಕನ್ಹಯ್ಯಾ ಅವರ ಎಡಪಂಥೀಯ ನಿಲುವನ್ನು ಪ್ರಶ್ನಿಸುತ್ತಾ, ‘ಜೈ ಶ್ರೀರಾಮ್ ಘೋಷಣೆ’ ಕೂಗಿ ಎಂದು ಆಗ್ರಹಿಸಿದಳು. ‘ಒಂದು ಭಾರತ, ಒಂದು ಕಾನೂನು ಎಂಬುದನ್ನೂ ಒಪ್ಪಿಕೊಳ್ಳಬೇಕು. ಭಾರತ್ ಮಾತಾಕಿ ಜೈ ಎನ್ನಬೇಕು’ ಎಂದು ಒತ್ತಾಯಿಸಿದಳು. ಅದಕ್ಕೆ ಉತ್ತರಿಸಿದ ಕನ್ಹಯ್ಯಾ, ‘ನಾನು ಜೈ ಸೀತಾರಾಮ್ ಎನ್ನುತ್ತೇನೆ. ನಾನು ಅಪ್ಪ– ಅಮ್ಮ ಇಬ್ಬರಿಂದಲೂ ಜನಿಸಿದವನು.ನನಗೆ ತಾಯಿ ಮೇಲೆ ಇರುವಷ್ಟೇ ಪ್ರೀತಿ ದೇಶದ ಮೇಲೂ ಇದೆ. ಸಂವಿಧಾನವೇ ಬಹುತ್ವಕ್ಕೆ ಬುನಾದಿ ಹಾಕಿದೆ ಎಂದು ಅರಿಯಿರಿ’ ಎಂದರು.