<p><strong>ಔಸಾ (ಮಹಾರಾಷ್ಟ್ರ):</strong> ‘ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಬುದ್ಧಿವಂತಿಕೆ ತೋರಿದ್ದಿದ್ದರೆ 1947ರಲ್ಲಿ ಪಾಕಿಸ್ತಾನವೆಂಬ ರಾಷ್ಟ್ರ ಸೃಷ್ಟಿಯಾಗುತ್ತಲೇ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p>ಮಂಗಳವಾರ ಇಲ್ಲಿ ಬಿಜೆಪಿ– ಶಿವಸೇನಾ ಜಂಟಿ ರ್ಯಾಲಿಯಲ್ಲಿ ಕಾಂಗ್ರೆಸ್ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸಿದ ಅವರು, ‘ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ವಾದಿಸುತ್ತಿದೆ. ಪಾಕಿಸ್ತಾನವೂ ಅದೇ ಒತ್ತಾಯ ಮಾಡುತ್ತಿದೆ. ಆ ಮೂಲಕ ಭಯೋತ್ಪಾದಕರ ಓಡಾಟಕ್ಕೆ ಮುಕ್ತವಾದ ವಾತಾವರಣ ನಿರ್ಮಿಸುವುದು ಅವರ ಉದ್ದೇಶ’ ಎಂದು ಹೇಳಿದರು.</p>.<p>‘ದೇಶದ್ರೋಹದ ಕಾನೂನನ್ನು ರದ್ದು ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಬೆಂಬಲಿಸಲು ಕಾಂಗ್ರೆಸ್ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಎನ್ಸಿಪಿ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕಾಂಗ್ರೆಸ್ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಇಂಥವರು ದೇಶವನ್ನು ರಕ್ಷಿಸುವರೇ? ತನ್ನನ್ನು ತಾನು ಮರಾಠ ಎಂದು ಹೇಳಿಕೊಳ್ಳುತ್ತಿರುವ ಶರದ್ ಪವಾರ್ ಇಂಥವರ ಜೊತೆ ಸೇರಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದರು.</p>.<p><strong>ಠಾಕ್ರೆಗೆ ಪ್ರಧಾನಿ ಮೋದಿ ಶ್ಲಾಘನೆ</strong><br />ಔಸಾದಲ್ಲಿ ನಡೆದ ರ್ಯಾಲಿಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ‘ಸಹೋದರ’ ಎಂದು ಸಂಬೋಧಿಸಿದ ಮೋದಿ, ಸೇನಾ ಸಂಸ್ಥಾಪಕ ಬಾಳ ಠಾಕ್ರೆ ಅವರನ್ನೂ ಕೊಂಡಾಡಿದರು.</p>.<p>‘ಶಿವಸೇನಾ ಅಧಿಕಾರಕ್ಕೆ ಬಂದಾಗ ಬಾಳ ಠಾಕ್ರೆ ಅವರು ಸ್ವತಃ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬಹುದಾಗಿತ್ತು. ಅವರು ಹಾಗೆ ಮಾಡಲಿಲ್ಲ. ಅಷ್ಟೇ ಅಲ್ಲ ತನ್ನ ಮಗನನ್ನೂ ಆ ಸ್ಥಾನದಲ್ಲಿ ಕೂರಿಸಲಿಲ್ಲ. ವಂಶಾಡಳಿತ ಮಾಡುವವರು ಠಾಕ್ರೆ ಅವರಿಂದ ಪಾಠ ಕಲಿಯಬೇಕು’ ಎಂದರು.</p>.<p><strong>ಪಾಕ್ಗೆ ಪಾಠ ಕಲಿಸಿ:</strong> ಅದೇ ವೇದಿಕೆಯಿಂದ ಮಾತನಾಡಿದ ಉದ್ಧವ್ ಠಾಕ್ರೆ, ‘ಭಾರತದೊಂದಿಗೆ ಚೆಲ್ಲಾಟವಾಡಿದರೆ ಏನಾಗುತ್ತದೆ ಎಂಬುದು ಅರ್ಥವಾಗುವ ರೀತಿಯಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಿ’ ಎಂದು ಮೋದಿಗೆ ಮನವಿ ಮಾಡಿದರು.</p>.<p>ಮೋದಿ ಮತ್ತು ಉದ್ಧವ್ ಅವರು ನಾಲ್ಕು ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡಿದ್ದರು. ಉದ್ಧವ್ ಅವರ ಕೈ ಹಿಡಿದುಕೊಂಡೇ ಮೋದಿ ವೇದಿಕೆಯನ್ನು ಏರಿದರು.</p>.<p><strong>ಸ್ವಯಂಚಾಲಿತ ಟ್ವಿಟರ್ ಸಮರ</strong><br /><strong>ವಾಷಿಂಗ್ಟನ್:</strong> ಪ್ರಧಾನಿ ನರೇಂದ್ರ ಮೋದಿ ಅವರ ಪರ ಮತ್ತು ವಿರುದ್ಧ ಟ್ವಿಟರ್ನಲ್ಲಿ ಬಾಟ್ಗಳ (ಸ್ವಯಂಚಾಲಿತ ಸಂದೇಶ ರವಾನೆ ವ್ಯವಸ್ಥೆ) ಭಾರಿ ಸಂಖ್ಯೆಯಲ್ಲಿ ಸಂದೇಶಗಳು ರವಾನೆ ಆಗುತ್ತಿವೆ ಎಂದು ಅಮೆರಿಕದ ಅಟ್ಲಾಂಟಿಕ್ ಕೌನ್ಸಿಲ್ನ ಡಿಜಿಟಲ್ ಫೊರೆನ್ಸಿಕ್ ರಿಸರ್ಚ್ ಲ್ಯಾಬ್ ವರದಿ ಹೇಳಿದೆ.</p>.<p>ಫೆಬ್ರುವರಿ 9–10ರಂದು ಭಾರಿ ಸಂಖ್ಯೆಯಲ್ಲಿ ಇಂತಹ ಸ್ವಯಂಚಾಲಿತ ಖಾತೆಗಳನ್ನು ಸೃಷ್ಟಿಸಲಾಗಿದೆ. ಟ್ವಿಟರ್ ಖಾತೆಗಳ ಸಣ್ಣ ಸಣ್ಣ ಗುಂಪುಗಳು ತಾಸಿಗೆ ಸಾವಿರಾರು ಸಂದೇಶಗಳನ್ನು ಕಳುಹಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>ಮೋದಿ ಪರ ಮತ್ತು ಮೋದಿ ವಿರೋಧಿ ಖಾತೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ, ಮೋದಿ ಪರ ಖಾತೆಗಳೇ ಹೆಚ್ಚು ಸಂದೇಶಗಳನ್ನು ಕಳುಹಿಸುತ್ತಿವೆ.</p>.<p>‘ಟ್ವಿಟರ್ನಲ್ಲಿನ ಕಾರ್ಯಚಟುವಟಿಕೆಗಳನ್ನು ತಿರುಚಲು ಭಾರತದ ಮುಖ್ಯ ರಾಜಕೀಯ ಪಕ್ಷಗಳು ಇನ್ನಿಲ್ಲದ ಯತ್ನ ನಡೆಸುತ್ತಿವೆ. ಸಾಮಾಜಿಕ ಜಾಲ ತಾಣವೇ ಹೋರಾಟದ ಪ್ರಮುಖ ಕಣವಾಗಿಬಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p>ಇಂತಹ ಚಟುವಟಿಕೆ ಅಗಾಧ ಪ್ರಮಾಣದಲ್ಲಿ ಇದ್ದರೂ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಇಲ್ಲ. ಇಂತಹ ಖಾತೆಗಳ ‘ಫಾಲೋವರ್’ಗಳ ಸಂಖ್ಯೆ ಕಡಿಮೆ ಎಂದು ಲ್ಯಾಬ್ನ ಹಿರಿಯ ಅಧಿಕಾರಿ ಬೆನ್ ನಿಮ್ಮೊ ಹೇಳಿದ್ದಾರೆ.</p>.<p>ಟಿಎನ್ ವೆಲ್ಕಮ್ಸ್ ಮೋದಿ ಎಂಬ ಹ್ಯಾಷ್ಟ್ಯಾಗ್ನಲ್ಲಿ ‘ತಮಿಳುನಾಡು ವೆಲ್ಕಮ್ಸ್ ಮೋದಿ’ ಎಂಬುದು ಫೆ. 9–10ರಂದು 7.77 ಲಕ್ಷ ಬಾರಿ ಪ್ರಸ್ತಾಪವಾಗಿದೆ ಎಂಬುದನ್ನು ವರದಿಯಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔಸಾ (ಮಹಾರಾಷ್ಟ್ರ):</strong> ‘ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಬುದ್ಧಿವಂತಿಕೆ ತೋರಿದ್ದಿದ್ದರೆ 1947ರಲ್ಲಿ ಪಾಕಿಸ್ತಾನವೆಂಬ ರಾಷ್ಟ್ರ ಸೃಷ್ಟಿಯಾಗುತ್ತಲೇ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p>ಮಂಗಳವಾರ ಇಲ್ಲಿ ಬಿಜೆಪಿ– ಶಿವಸೇನಾ ಜಂಟಿ ರ್ಯಾಲಿಯಲ್ಲಿ ಕಾಂಗ್ರೆಸ್ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸಿದ ಅವರು, ‘ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ವಾದಿಸುತ್ತಿದೆ. ಪಾಕಿಸ್ತಾನವೂ ಅದೇ ಒತ್ತಾಯ ಮಾಡುತ್ತಿದೆ. ಆ ಮೂಲಕ ಭಯೋತ್ಪಾದಕರ ಓಡಾಟಕ್ಕೆ ಮುಕ್ತವಾದ ವಾತಾವರಣ ನಿರ್ಮಿಸುವುದು ಅವರ ಉದ್ದೇಶ’ ಎಂದು ಹೇಳಿದರು.</p>.<p>‘ದೇಶದ್ರೋಹದ ಕಾನೂನನ್ನು ರದ್ದು ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಬೆಂಬಲಿಸಲು ಕಾಂಗ್ರೆಸ್ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಎನ್ಸಿಪಿ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕಾಂಗ್ರೆಸ್ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಇಂಥವರು ದೇಶವನ್ನು ರಕ್ಷಿಸುವರೇ? ತನ್ನನ್ನು ತಾನು ಮರಾಠ ಎಂದು ಹೇಳಿಕೊಳ್ಳುತ್ತಿರುವ ಶರದ್ ಪವಾರ್ ಇಂಥವರ ಜೊತೆ ಸೇರಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದರು.</p>.<p><strong>ಠಾಕ್ರೆಗೆ ಪ್ರಧಾನಿ ಮೋದಿ ಶ್ಲಾಘನೆ</strong><br />ಔಸಾದಲ್ಲಿ ನಡೆದ ರ್ಯಾಲಿಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ‘ಸಹೋದರ’ ಎಂದು ಸಂಬೋಧಿಸಿದ ಮೋದಿ, ಸೇನಾ ಸಂಸ್ಥಾಪಕ ಬಾಳ ಠಾಕ್ರೆ ಅವರನ್ನೂ ಕೊಂಡಾಡಿದರು.</p>.<p>‘ಶಿವಸೇನಾ ಅಧಿಕಾರಕ್ಕೆ ಬಂದಾಗ ಬಾಳ ಠಾಕ್ರೆ ಅವರು ಸ್ವತಃ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬಹುದಾಗಿತ್ತು. ಅವರು ಹಾಗೆ ಮಾಡಲಿಲ್ಲ. ಅಷ್ಟೇ ಅಲ್ಲ ತನ್ನ ಮಗನನ್ನೂ ಆ ಸ್ಥಾನದಲ್ಲಿ ಕೂರಿಸಲಿಲ್ಲ. ವಂಶಾಡಳಿತ ಮಾಡುವವರು ಠಾಕ್ರೆ ಅವರಿಂದ ಪಾಠ ಕಲಿಯಬೇಕು’ ಎಂದರು.</p>.<p><strong>ಪಾಕ್ಗೆ ಪಾಠ ಕಲಿಸಿ:</strong> ಅದೇ ವೇದಿಕೆಯಿಂದ ಮಾತನಾಡಿದ ಉದ್ಧವ್ ಠಾಕ್ರೆ, ‘ಭಾರತದೊಂದಿಗೆ ಚೆಲ್ಲಾಟವಾಡಿದರೆ ಏನಾಗುತ್ತದೆ ಎಂಬುದು ಅರ್ಥವಾಗುವ ರೀತಿಯಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಿ’ ಎಂದು ಮೋದಿಗೆ ಮನವಿ ಮಾಡಿದರು.</p>.<p>ಮೋದಿ ಮತ್ತು ಉದ್ಧವ್ ಅವರು ನಾಲ್ಕು ವರ್ಷಗಳ ಬಳಿಕ ವೇದಿಕೆ ಹಂಚಿಕೊಂಡಿದ್ದರು. ಉದ್ಧವ್ ಅವರ ಕೈ ಹಿಡಿದುಕೊಂಡೇ ಮೋದಿ ವೇದಿಕೆಯನ್ನು ಏರಿದರು.</p>.<p><strong>ಸ್ವಯಂಚಾಲಿತ ಟ್ವಿಟರ್ ಸಮರ</strong><br /><strong>ವಾಷಿಂಗ್ಟನ್:</strong> ಪ್ರಧಾನಿ ನರೇಂದ್ರ ಮೋದಿ ಅವರ ಪರ ಮತ್ತು ವಿರುದ್ಧ ಟ್ವಿಟರ್ನಲ್ಲಿ ಬಾಟ್ಗಳ (ಸ್ವಯಂಚಾಲಿತ ಸಂದೇಶ ರವಾನೆ ವ್ಯವಸ್ಥೆ) ಭಾರಿ ಸಂಖ್ಯೆಯಲ್ಲಿ ಸಂದೇಶಗಳು ರವಾನೆ ಆಗುತ್ತಿವೆ ಎಂದು ಅಮೆರಿಕದ ಅಟ್ಲಾಂಟಿಕ್ ಕೌನ್ಸಿಲ್ನ ಡಿಜಿಟಲ್ ಫೊರೆನ್ಸಿಕ್ ರಿಸರ್ಚ್ ಲ್ಯಾಬ್ ವರದಿ ಹೇಳಿದೆ.</p>.<p>ಫೆಬ್ರುವರಿ 9–10ರಂದು ಭಾರಿ ಸಂಖ್ಯೆಯಲ್ಲಿ ಇಂತಹ ಸ್ವಯಂಚಾಲಿತ ಖಾತೆಗಳನ್ನು ಸೃಷ್ಟಿಸಲಾಗಿದೆ. ಟ್ವಿಟರ್ ಖಾತೆಗಳ ಸಣ್ಣ ಸಣ್ಣ ಗುಂಪುಗಳು ತಾಸಿಗೆ ಸಾವಿರಾರು ಸಂದೇಶಗಳನ್ನು ಕಳುಹಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>ಮೋದಿ ಪರ ಮತ್ತು ಮೋದಿ ವಿರೋಧಿ ಖಾತೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ, ಮೋದಿ ಪರ ಖಾತೆಗಳೇ ಹೆಚ್ಚು ಸಂದೇಶಗಳನ್ನು ಕಳುಹಿಸುತ್ತಿವೆ.</p>.<p>‘ಟ್ವಿಟರ್ನಲ್ಲಿನ ಕಾರ್ಯಚಟುವಟಿಕೆಗಳನ್ನು ತಿರುಚಲು ಭಾರತದ ಮುಖ್ಯ ರಾಜಕೀಯ ಪಕ್ಷಗಳು ಇನ್ನಿಲ್ಲದ ಯತ್ನ ನಡೆಸುತ್ತಿವೆ. ಸಾಮಾಜಿಕ ಜಾಲ ತಾಣವೇ ಹೋರಾಟದ ಪ್ರಮುಖ ಕಣವಾಗಿಬಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p>ಇಂತಹ ಚಟುವಟಿಕೆ ಅಗಾಧ ಪ್ರಮಾಣದಲ್ಲಿ ಇದ್ದರೂ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಇಲ್ಲ. ಇಂತಹ ಖಾತೆಗಳ ‘ಫಾಲೋವರ್’ಗಳ ಸಂಖ್ಯೆ ಕಡಿಮೆ ಎಂದು ಲ್ಯಾಬ್ನ ಹಿರಿಯ ಅಧಿಕಾರಿ ಬೆನ್ ನಿಮ್ಮೊ ಹೇಳಿದ್ದಾರೆ.</p>.<p>ಟಿಎನ್ ವೆಲ್ಕಮ್ಸ್ ಮೋದಿ ಎಂಬ ಹ್ಯಾಷ್ಟ್ಯಾಗ್ನಲ್ಲಿ ‘ತಮಿಳುನಾಡು ವೆಲ್ಕಮ್ಸ್ ಮೋದಿ’ ಎಂಬುದು ಫೆ. 9–10ರಂದು 7.77 ಲಕ್ಷ ಬಾರಿ ಪ್ರಸ್ತಾಪವಾಗಿದೆ ಎಂಬುದನ್ನು ವರದಿಯಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>