<p><strong>ಮುಂಬೈ:</strong>‘ಯಾರೋ ಕೆಲವರು ಮಾಡಿದ ತಪ್ಪನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ತಪ್ಪು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ (ಮುಖ್ಯಸ್ಥ) ಮೋಹಜ್ ಭಾಗವತ್ ಹೇಳಿದ್ದಾರೆ.</p>.<p>ನಾಗಪುರದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಿಂದ ವೆಬ್ಕಾಸ್ಟ್ಮೂಲಕ ಮಾತನಾಡಿದ ಅವರು, ‘130 ಕೋಟಿ ಭಾರತೀಯರು ನಮ್ಮ ಕುಟುಂಬದವರೇ. ನಾವೆಲ್ಲ ಒಂದೇ. ಕೆಲವರು ಮಾಡಿದ ತಪ್ಪಿಗೆ ಇಡಿಯಾಗಿ ಒಂದು ಸಮುದಾಯವನ್ನು ದೂರುವುದು ಸರಿಯಲ್ಲ’ ಎಂದು ವಿವರಿಸಿದ್ದಾರೆ.</p>.<p>‘ಪರಿಹಾರ ವಿತರಣೆಯಲ್ಲಿಯಾವುದೇ ತಾರತಮ್ಯ ಮಾಡಬಾರದರು. ಎಲ್ಲಸಂತ್ರಸ್ತರಿಗೆ ನೆರವಾಗಬೇಕು’ ಎಂದು ಮನವಿ ಮಾಡಿದ್ದಾರೆ.</p>.<p>ತಬ್ಲೀಗಿಜಮಾತ್ ಸಂಘಟನೆಯ ಹೆಸರನ್ನು ಹೇಳದೆ ಮಾತನಾಡಿದ ಭಾಗವತ್, ‘ಕೆಲವರುಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ಎರಡೂ ಸಮುದಾಯಗಳಲ್ಲಿನ ಪ್ರಜ್ಞಾವಂತರು ಮುಂದೆ ಬರಬೇಕು. ಜನರ ಮನಸ್ಸಿನಲ್ಲಿರುವ ಪೂರ್ವಗ್ರಹವನ್ನು ತೊಡೆದು ಹಾಕಲು ಸಂವಾದಗಳನ್ನು ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>ಇದೇ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಸಂತರ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಮತ್ತು ದಾಳಿಕೋರರನ್ನು ಟೀಕಿಸಿದ್ದಾರೆ.</p>.<p>‘ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಮೃತಪಟ್ಟ ಸಂತರಿಬ್ಬರೂ ನಿರಪರಾಧಿಗಳು. ನಾವು ಬೇರೆಲ್ಲವನ್ನು ಬದಿಗಿಟ್ಟು, ಮುಗ್ಧ ಜನರನ್ನು ಕೊಲ್ಲುವುದು ಸರಿಯೇ ಎಂದು ಯೋಚಿಸೋಣ. ಇಂಥ ಘಟನೆ ಸಂಭವಿಸಬೇಕಿತ್ತು ಎಂದೆನಿಸುತ್ತದೆಯೇ? ಆ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲಿಸರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.</p>.<p>‘ಗಲಭೆಗಳಿಗೆ ಪ್ರಚೋದಿಸುವವರ ಸಂಖ್ಯೆಗೇನೂ ಕೊರತೆ ಇಲ್ಲ. ಅವರು ಅದರಲ್ಲಿ ನಿಪುಣರು. ಸಮಾಜವನ್ನು ಒಡೆಯುವುದು ಅವರ ತಂತ್ರ. ನಾವು ಅಂಥವರಿಂದ ದೂರ ಇರಬೇಕು’ ಎಂದು ಕರೆ ನೀಡಿದ್ದಾರೆ.</p>.<p>‘ಕೊರನಾವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಲಾಕ್ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಪಾಲಿಸಬೇಕು’ ಎಂದು ಕೋರಿದ ಅವರು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong>‘ಯಾರೋ ಕೆಲವರು ಮಾಡಿದ ತಪ್ಪನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ತಪ್ಪು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ (ಮುಖ್ಯಸ್ಥ) ಮೋಹಜ್ ಭಾಗವತ್ ಹೇಳಿದ್ದಾರೆ.</p>.<p>ನಾಗಪುರದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಿಂದ ವೆಬ್ಕಾಸ್ಟ್ಮೂಲಕ ಮಾತನಾಡಿದ ಅವರು, ‘130 ಕೋಟಿ ಭಾರತೀಯರು ನಮ್ಮ ಕುಟುಂಬದವರೇ. ನಾವೆಲ್ಲ ಒಂದೇ. ಕೆಲವರು ಮಾಡಿದ ತಪ್ಪಿಗೆ ಇಡಿಯಾಗಿ ಒಂದು ಸಮುದಾಯವನ್ನು ದೂರುವುದು ಸರಿಯಲ್ಲ’ ಎಂದು ವಿವರಿಸಿದ್ದಾರೆ.</p>.<p>‘ಪರಿಹಾರ ವಿತರಣೆಯಲ್ಲಿಯಾವುದೇ ತಾರತಮ್ಯ ಮಾಡಬಾರದರು. ಎಲ್ಲಸಂತ್ರಸ್ತರಿಗೆ ನೆರವಾಗಬೇಕು’ ಎಂದು ಮನವಿ ಮಾಡಿದ್ದಾರೆ.</p>.<p>ತಬ್ಲೀಗಿಜಮಾತ್ ಸಂಘಟನೆಯ ಹೆಸರನ್ನು ಹೇಳದೆ ಮಾತನಾಡಿದ ಭಾಗವತ್, ‘ಕೆಲವರುಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ಎರಡೂ ಸಮುದಾಯಗಳಲ್ಲಿನ ಪ್ರಜ್ಞಾವಂತರು ಮುಂದೆ ಬರಬೇಕು. ಜನರ ಮನಸ್ಸಿನಲ್ಲಿರುವ ಪೂರ್ವಗ್ರಹವನ್ನು ತೊಡೆದು ಹಾಕಲು ಸಂವಾದಗಳನ್ನು ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>ಇದೇ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಸಂತರ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಮತ್ತು ದಾಳಿಕೋರರನ್ನು ಟೀಕಿಸಿದ್ದಾರೆ.</p>.<p>‘ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಮೃತಪಟ್ಟ ಸಂತರಿಬ್ಬರೂ ನಿರಪರಾಧಿಗಳು. ನಾವು ಬೇರೆಲ್ಲವನ್ನು ಬದಿಗಿಟ್ಟು, ಮುಗ್ಧ ಜನರನ್ನು ಕೊಲ್ಲುವುದು ಸರಿಯೇ ಎಂದು ಯೋಚಿಸೋಣ. ಇಂಥ ಘಟನೆ ಸಂಭವಿಸಬೇಕಿತ್ತು ಎಂದೆನಿಸುತ್ತದೆಯೇ? ಆ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲಿಸರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.</p>.<p>‘ಗಲಭೆಗಳಿಗೆ ಪ್ರಚೋದಿಸುವವರ ಸಂಖ್ಯೆಗೇನೂ ಕೊರತೆ ಇಲ್ಲ. ಅವರು ಅದರಲ್ಲಿ ನಿಪುಣರು. ಸಮಾಜವನ್ನು ಒಡೆಯುವುದು ಅವರ ತಂತ್ರ. ನಾವು ಅಂಥವರಿಂದ ದೂರ ಇರಬೇಕು’ ಎಂದು ಕರೆ ನೀಡಿದ್ದಾರೆ.</p>.<p>‘ಕೊರನಾವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಲಾಕ್ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮಗಳನ್ನು ಪಾಲಿಸಬೇಕು’ ಎಂದು ಕೋರಿದ ಅವರು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>