ಮಿಥಾಲಿ ಅವರ ಕಾರು ಧರ್ಮಶಿಲ್ಲಾ ಕ್ಯಾನ್ಸರ್ ಆಸ್ಪತ್ರೆಯ ಬಳಿ ತಲುಪಿದಾಗ ಕಾರಿನ ಮುಂದೆ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಅವರು ಹಾರಿಸಿದ ಮೂರು ಗುಂಡುಗಳಲ್ಲಿ ಎರಡು ಗುಂಡು ಕಾರಿನ ಮುಂಭಾಗಕ್ಕೆ ತಾಗಿದೆ, ಇನ್ನೊಂದು ಗುಂಡು ಆಕೆಯ ಬಲ ತೋಳಿಗೆ ತಾಗಿದೆ.ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ.ಗಾಯಗೊಂಡ ಮಿಥಾಲಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿಏಮ್ಸ್ಗೆ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಪೂರ್ವ ವಲಯ) ಅಲೋಕ್ ಕುಮಾರ್ ಹೇಳಿದ್ದಾರೆ.