ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ನಾಯಕಡಿ.ಕೆ. ಶಿವಕುಮಾರ್ ವಿರುದ್ಧದ ಬೆನ್ನಿಗಾನಹಳ್ಳಿ ಜಮೀನು ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆವಿಸ್ತೃತ ಅಫಿಡವಿಟ್ ಸಲ್ಲಿಸಲು ಸಮಾಜ ಪರಿವರ್ತನ ಸಮುದಾಯಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರಸೂಚನೆ ನೀಡಿದೆ.
ಅರ್ಜಿದಾರರಾದ ಎಸ್.ಆರ್. ಹಿರೇಮಠ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠ ಮೇಲಿನಂತೆ ಸೂಚನೆ ನೀಡಿತು.
ಈ ಬಾರಿ ಸಲ್ಲಿಸುವ ಅಫಿಡವಿಟ್ ಜೊತೆಗೆಲೋಕಾಯುಕ್ತಕ್ಕೆದೂರಿನ ಪ್ರತಿಯನ್ನೂ ನೀಡಬೇಕು.ಹೈಕೋರ್ಟ್ ವಿಚಾರಣೆಯಲ್ಲಿನೀವು ಏಕೆಭಾಗಿಯಾಗಲಿಲ್ಲ. ಪ್ರಕರಣದಲ್ಲಿ ನಿಮ್ಮ ಪಾತ್ರದ ಬಗ್ಗೆ ವಿವರಿಸಿ ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಪೀಠದ ಸೂಚಿಸಿತು.