ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕವಾಗಿರುವ, ಚೆನ್ನೈ ಕೋವಿಡ್ ನಿಗಾ ವ್ಯವಸ್ಥೆಯ ಉಸ್ತುವಾರಿ, ಕಂದಾಯ ಇಲಾಖೆ ಆಯುಕ್ತ ರಾಧಾಕೃಷ್ಣನ್ ಅವರು ಈ ಹಿಂದೆ 2012–2019ರ ವರೆಗೆ 6 ವರ್ಷಗಳ ಕಾಲ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು. 2004ರಲ್ಲಿ ಚೆನ್ನೈಗೆ ಅಪ್ಪಳಿಸಿದ್ದ ಸುನಾಮಿಯ ನಂತರದ ಪರಿಸ್ಥಿತಿಯನ್ನು ಇದೇ ರಾಧಾಕೃಷ್ಣ ಅವರು ಸಮರ್ಥವಾಗಿ ನಿಭಾಯಿಸಿದ್ದರು ಎಂಬ ಮಾತು ತಮಿಳುನಾಡಿನಲ್ಲಿದೆ.