<p><strong>ವಲ್ಸಾದ್:</strong>ಪ್ರೇಮಿಗಳ ದಿನದಂದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಆಶ್ಚರ್ಯವೊಂದು ಕಾದಿತ್ತು. ಕಾರ್ಯಕ್ರಮ ವೇದಿಕೆ ಮೇಲೆಮಹಿಳೆಯೊಬ್ಬರು ರಾಹುಲ್ಗೆ ಮುತ್ತಿಕ್ಕಿದ್ದಾರೆ. ಈ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಗುಜರಾತ್ನ ವಲ್ಸಾದ್ನಲ್ಲಿ ಗುರುವಾರ ಆಯೋಜಿಸಿದ್ದ ರ್ಯಾಲಿ ವೇಳೆ ಕಾರ್ಯಕ್ರಮವೇದಿಕೆ ಮೇಲೆ ಹಾರ ಹಿಡಿದು ಬಂದ ಅಭಿಮಾನಿ ಮಹಿಳೆಯರ ಗುಂಪಿನಲ್ಲಿದ್ದ ಒಬ್ಬ ಮಹಿಳೆ ರಾಹುಲ್ ಕೆನ್ನೆಗೆ ಮುತ್ತಿಕ್ಕಿದರು. ಬಳಿಕ ಗುಂಪು ರಾಹುಲ್ಗೆ ಹೂ ಮಾಲೆ ಹಾಕಿ ಅಭಿನಂದಿಸಿತು.</p>.<p>ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಅವರು(ನರೇಂದ್ರ ಮೋದಿ)ನನಗೆ ಮತ್ತು ನಮ್ಮ ಕುಟುಂಬ ಹಾಗೂ ಕಾಂಗ್ರೆಸ್ಅನ್ನು ಅವಮಾನಿಸುತ್ತಾರೆ ಎಂಬ ಸತ್ಯದ ಹೊರತಾಗಿಯೂ ಸಂಸತ್ನಲ್ಲಿ ಅವರನ್ನು ಆಲಂಗಿಸಿದೆ’ ಎಂದು ಹೇಳಿದ್ದಾರೆ.</p>.<p>ದ್ವೇಷವನ್ನು ಪ್ರೀತಿಯಿಂದ ಮಾತ್ರ ಸೋಲಿಸಬಹುದು. ಅವರು ದ್ವೇಷವನ್ನು ಹೊಂದಿದ್ದಾರೆ ಮತ್ತು ನಾನು ಪ್ರೀತಿಯಿಂದ ದ್ವೇಷವನ್ನು ಎದುರಿಸಿದೆ ಎಂದು ರಾಹುಲ್ ಹೇಳಿದ್ದಾರೆ.</p>.<p>ನಾವು ಮಾತು ನೀಡಿದಂತೆ ಪಕ್ಷ ಅಧಿಕಾರಕ್ಕೆ ಬಂದ 10 ದಿನಳ ಒಳಗಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೊಟ್ಟ ಮಾತಿಗೂ ಮುನ್ನವೇ ಈ ಕಾರ್ಯ ಮಾಡಿದ ಮುಖ್ಯಮಂತ್ರಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಲ್ಸಾದ್:</strong>ಪ್ರೇಮಿಗಳ ದಿನದಂದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಆಶ್ಚರ್ಯವೊಂದು ಕಾದಿತ್ತು. ಕಾರ್ಯಕ್ರಮ ವೇದಿಕೆ ಮೇಲೆಮಹಿಳೆಯೊಬ್ಬರು ರಾಹುಲ್ಗೆ ಮುತ್ತಿಕ್ಕಿದ್ದಾರೆ. ಈ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಗುಜರಾತ್ನ ವಲ್ಸಾದ್ನಲ್ಲಿ ಗುರುವಾರ ಆಯೋಜಿಸಿದ್ದ ರ್ಯಾಲಿ ವೇಳೆ ಕಾರ್ಯಕ್ರಮವೇದಿಕೆ ಮೇಲೆ ಹಾರ ಹಿಡಿದು ಬಂದ ಅಭಿಮಾನಿ ಮಹಿಳೆಯರ ಗುಂಪಿನಲ್ಲಿದ್ದ ಒಬ್ಬ ಮಹಿಳೆ ರಾಹುಲ್ ಕೆನ್ನೆಗೆ ಮುತ್ತಿಕ್ಕಿದರು. ಬಳಿಕ ಗುಂಪು ರಾಹುಲ್ಗೆ ಹೂ ಮಾಲೆ ಹಾಕಿ ಅಭಿನಂದಿಸಿತು.</p>.<p>ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ‘ಅವರು(ನರೇಂದ್ರ ಮೋದಿ)ನನಗೆ ಮತ್ತು ನಮ್ಮ ಕುಟುಂಬ ಹಾಗೂ ಕಾಂಗ್ರೆಸ್ಅನ್ನು ಅವಮಾನಿಸುತ್ತಾರೆ ಎಂಬ ಸತ್ಯದ ಹೊರತಾಗಿಯೂ ಸಂಸತ್ನಲ್ಲಿ ಅವರನ್ನು ಆಲಂಗಿಸಿದೆ’ ಎಂದು ಹೇಳಿದ್ದಾರೆ.</p>.<p>ದ್ವೇಷವನ್ನು ಪ್ರೀತಿಯಿಂದ ಮಾತ್ರ ಸೋಲಿಸಬಹುದು. ಅವರು ದ್ವೇಷವನ್ನು ಹೊಂದಿದ್ದಾರೆ ಮತ್ತು ನಾನು ಪ್ರೀತಿಯಿಂದ ದ್ವೇಷವನ್ನು ಎದುರಿಸಿದೆ ಎಂದು ರಾಹುಲ್ ಹೇಳಿದ್ದಾರೆ.</p>.<p>ನಾವು ಮಾತು ನೀಡಿದಂತೆ ಪಕ್ಷ ಅಧಿಕಾರಕ್ಕೆ ಬಂದ 10 ದಿನಳ ಒಳಗಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೊಟ್ಟ ಮಾತಿಗೂ ಮುನ್ನವೇ ಈ ಕಾರ್ಯ ಮಾಡಿದ ಮುಖ್ಯಮಂತ್ರಿಗಳಿಗೆ ನಾನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>