<p><strong>ಮಂಗಳೂರು: </strong>‘ಸಿಇಟಿ ಪರೀಕ್ಷೆಯನ್ನು ಉತ್ತಮವಾಗಿ ಮಾಡಿದ್ದು, ಮೊದಲ 10 ರ್ಯಾಂಕ್ನಲ್ಲಿ ಬರುವ ವಿಶ್ವಾಸವಿತ್ತು. ಇದೀಗ 2 ನೇ ರ್ಯಾಂಕ್ ಬಂದಿದೆ. ಬಹಳ ಸಂತಸವಾಗಿದೆ. ಮೊದಲಿನಿಂದಲೂ ವಿಜ್ಞಾನಿ ಆಗಬೇಕು ಎನ್ನುವ ಬಯಕೆ ಇದೆ. ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ.’</p>.<p>ಸಿಇಟಿ ಎಂಜಿನಿಯರಿಂಗ್ನಲ್ಲಿ 2 ನೇ ರ್ಯಾಂಕ್ ಹಾಗೂ ಫಾರ್ಮಸಿಯಲ್ಲಿ 3 ನೇ ರ್ಯಾಂಕ್ ಪಡೆದಿರುವ ನಗರದ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಮಾತಿದು.</p>.<p>ಮೈಸೂರಿನವರಾದ ಚಿನ್ಮಯ ತಂದೆ ರವಿಶಂಕರ್, ತಾಯಿ ಸುಧಾ ರವಿಶಂಕರ್ ಸದ್ಯಕ್ಕೆ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ರಾಜ್ಯ ಬೀಜ ನಿಗಮದ ಸಹಾಯಕ ನಿರ್ದೇಶಕರಾಗಿ ರವಿಶಂಕರ್ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಚಿನ್ಮಯ್ ಬಳ್ಳಾರಿಯ ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದಾರೆ.</p>.<p>‘ಎರಡು ವರ್ಷ ಹಾಸ್ಟೆಲ್ನಲ್ಲಿದ್ದು, ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದೇನೆ. ಐಐಟಿ ಮದ್ರಾಸ್ನಲ್ಲಿ ಎಂಜಿನಿಯರಿಂಗ್ ಅಥವಾ ಇಂಡಿಯನ್ ಇನ್ಸ್ಟಿಟ್ಯೂಟರ್ ಆಫ್ ಸೈನ್ಸ್ನಲ್ಲಿ ಸಂಶೋಧನೆ ಮಾಡಬೇಕು ಎನ್ನುವ ಬಯಕೆ ನನ್ನದು’ ಎಂದು ಚಿನ್ಮಯ್ ಹೇಳುತ್ತಾರೆ.</p>.<p class="Briefhead"><strong>‘ವೈದ್ಯನಾಗುವ ಹೆಬ್ಬಯಕೆ’</strong></p>.<p>ಬಿಎಸ್ಸಿ ಕೃಷಿಯಲ್ಲಿ 2 ನೇ ರ್ಯಾಂಕ್ ಹಾಗೂ ನ್ಯಾಚರೋಪತಿಯಲ್ಲಿ 6 ನೇ ರ್ಯಾಂಕ್ ಪಡೆದಿರುವ ಎಕ್ಸ್ಪರ್ಟ್ ಕಾಲೇಜಿನ ಭುವನ್ ವಿ.ಬಿ.ಗೆ ವೈದ್ಯನಾಗುವ ಆಸೆ ಇದೆ.</p>.<p>‘ನೀಟ್ ಪರೀಕ್ಷೆಯ ಫಲಿತಾಂಶವನ್ನು ಕಾಯುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಆಸೆ. ಬೆಂಗಳೂರಿನವನಾದ ನಾನು, ಎರಡು ವರ್ಷಗಳಿಂದ ಇಲ್ಲಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ಕಲಿತಿದ್ದೇನೆ. ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, 2 ನೇ ರ್ಯಾಂಕ್ ಬರುತ್ತದೆ ಎಂದು ಎಣಿಸಿರಲಿಲ್ಲ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.</p>.<p>ಭೂವನ್ ವಿ.ಬಿ., ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಿ.ಎಂ. ವೀರೇಗೌಡ ಹಾಗೂ ಡಾ. ಲೀನಾ ಗೌಡರ ದಂಪತಿಯ ಪುತ್ರ.</p>.<p><strong>ಮೈಸೂರಿನ ಇಬ್ಬರ ಸಾಧನೆ</strong></p>.<p>ಮೈಸೂರಿನ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ, ಯೋಗವಿಜ್ಞಾನದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. ಪಶು ವಿಜ್ಞಾನ (4), ಔಷಧ ವಿಜ್ಞಾನ (7), ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ (7), ಕೃಷಿ ವಿಜ್ಞಾನ (13) ವಿಭಾಗದಲ್ಲಿಯೂ ಉತ್ತಮ ಸ್ಥಾನ ಪಡೆದಿರುವ ಅವರು ಎಂಜಿನಿಯರಿಂಗ್ ವಿಭಾಗದಲ್ಲಿ 193ನೇ ರ್ಯಾಂಕ್ ಪಡೆದಿದ್ದಾರೆ.</p>.<p>‘ಫಲಿತಾಂಶ ಸಂತಸ ನೀಡಿದೆ. ನಾನು ನೀಟ್ ಫಲಿತಾಂಶ ಎದುರುನೋಡುತ್ತಿದ್ದೇನೆ. ವೈದ್ಯಕೀಯ ಶಿಕ್ಷಣ ಪಡೆಯುವುದು ನನ್ನ ಆಸೆಯಾಗಿದೆ’ ಎಂದು ವಾಸುದೇವ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಪಿಯುಕಾಲೇಜಿನ ವಿದ್ಯಾರ್ಥಿ ರೋಹಿತ್ ರಾಜ್, ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 6ನೇರ್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು.</p>.<p>**</p>.<p>ಕೋಚಿಂಗ್ಗೆ ಹೋಗಿದ್ದರಿಂದ ಪರೀಕ್ಷೆ ಎದುರಿಸಲು ಅನುಕೂಲವಾಯಿತು. ಮೂಲ ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಆಸಕ್ತಿಯಿದೆ. ಯೋಚಿಸಿ ಮುಂದಿನ ಕೋರ್ಸ್ ಆಯ್ದುಕೊಳ್ಳುತ್ತೇನೆ.<br /><em><strong>–ಕೀರ್ತನಾ ಎಂ ಅರುಣ್,ನ್ಯಾಷನಲ್ ಪಬ್ಲಿಕ್ ಶಾಲೆ, ಬೆಂಗಳೂರು</strong></em></p>.<p>**</p>.<p>ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಓದುತ್ತಿದ್ದೇನೆ. ಈ ಮಧ್ಯೆ ಸಿಇಟಿ ಬರೆದೆ. ಮುಂದೆ ಉತ್ತಮ ಎಂಜಿನಿಯರ್ ಆಗುವ ಗುರಿಯಿದೆ.<br /><em><strong>– ಸಾಯಿ ಸಾಕೇತಿಕಾ ಚೆಕುರಿ, ಚೈತನ್ಯ ಟೆಕ್ನೊ ಕಾಲೇಜು, ಬೆಂಗಳೂರು</strong></em></p>.<p>**</p>.<p>**</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>‘ಸಿಇಟಿ ಪರೀಕ್ಷೆಯನ್ನು ಉತ್ತಮವಾಗಿ ಮಾಡಿದ್ದು, ಮೊದಲ 10 ರ್ಯಾಂಕ್ನಲ್ಲಿ ಬರುವ ವಿಶ್ವಾಸವಿತ್ತು. ಇದೀಗ 2 ನೇ ರ್ಯಾಂಕ್ ಬಂದಿದೆ. ಬಹಳ ಸಂತಸವಾಗಿದೆ. ಮೊದಲಿನಿಂದಲೂ ವಿಜ್ಞಾನಿ ಆಗಬೇಕು ಎನ್ನುವ ಬಯಕೆ ಇದೆ. ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ.’</p>.<p>ಸಿಇಟಿ ಎಂಜಿನಿಯರಿಂಗ್ನಲ್ಲಿ 2 ನೇ ರ್ಯಾಂಕ್ ಹಾಗೂ ಫಾರ್ಮಸಿಯಲ್ಲಿ 3 ನೇ ರ್ಯಾಂಕ್ ಪಡೆದಿರುವ ನಗರದ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಮಾತಿದು.</p>.<p>ಮೈಸೂರಿನವರಾದ ಚಿನ್ಮಯ ತಂದೆ ರವಿಶಂಕರ್, ತಾಯಿ ಸುಧಾ ರವಿಶಂಕರ್ ಸದ್ಯಕ್ಕೆ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ರಾಜ್ಯ ಬೀಜ ನಿಗಮದ ಸಹಾಯಕ ನಿರ್ದೇಶಕರಾಗಿ ರವಿಶಂಕರ್ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಚಿನ್ಮಯ್ ಬಳ್ಳಾರಿಯ ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದಾರೆ.</p>.<p>‘ಎರಡು ವರ್ಷ ಹಾಸ್ಟೆಲ್ನಲ್ಲಿದ್ದು, ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದೇನೆ. ಐಐಟಿ ಮದ್ರಾಸ್ನಲ್ಲಿ ಎಂಜಿನಿಯರಿಂಗ್ ಅಥವಾ ಇಂಡಿಯನ್ ಇನ್ಸ್ಟಿಟ್ಯೂಟರ್ ಆಫ್ ಸೈನ್ಸ್ನಲ್ಲಿ ಸಂಶೋಧನೆ ಮಾಡಬೇಕು ಎನ್ನುವ ಬಯಕೆ ನನ್ನದು’ ಎಂದು ಚಿನ್ಮಯ್ ಹೇಳುತ್ತಾರೆ.</p>.<p class="Briefhead"><strong>‘ವೈದ್ಯನಾಗುವ ಹೆಬ್ಬಯಕೆ’</strong></p>.<p>ಬಿಎಸ್ಸಿ ಕೃಷಿಯಲ್ಲಿ 2 ನೇ ರ್ಯಾಂಕ್ ಹಾಗೂ ನ್ಯಾಚರೋಪತಿಯಲ್ಲಿ 6 ನೇ ರ್ಯಾಂಕ್ ಪಡೆದಿರುವ ಎಕ್ಸ್ಪರ್ಟ್ ಕಾಲೇಜಿನ ಭುವನ್ ವಿ.ಬಿ.ಗೆ ವೈದ್ಯನಾಗುವ ಆಸೆ ಇದೆ.</p>.<p>‘ನೀಟ್ ಪರೀಕ್ಷೆಯ ಫಲಿತಾಂಶವನ್ನು ಕಾಯುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಆಸೆ. ಬೆಂಗಳೂರಿನವನಾದ ನಾನು, ಎರಡು ವರ್ಷಗಳಿಂದ ಇಲ್ಲಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ಕಲಿತಿದ್ದೇನೆ. ರ್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, 2 ನೇ ರ್ಯಾಂಕ್ ಬರುತ್ತದೆ ಎಂದು ಎಣಿಸಿರಲಿಲ್ಲ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.</p>.<p>ಭೂವನ್ ವಿ.ಬಿ., ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಿ.ಎಂ. ವೀರೇಗೌಡ ಹಾಗೂ ಡಾ. ಲೀನಾ ಗೌಡರ ದಂಪತಿಯ ಪುತ್ರ.</p>.<p><strong>ಮೈಸೂರಿನ ಇಬ್ಬರ ಸಾಧನೆ</strong></p>.<p>ಮೈಸೂರಿನ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ, ಯೋಗವಿಜ್ಞಾನದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. ಪಶು ವಿಜ್ಞಾನ (4), ಔಷಧ ವಿಜ್ಞಾನ (7), ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ (7), ಕೃಷಿ ವಿಜ್ಞಾನ (13) ವಿಭಾಗದಲ್ಲಿಯೂ ಉತ್ತಮ ಸ್ಥಾನ ಪಡೆದಿರುವ ಅವರು ಎಂಜಿನಿಯರಿಂಗ್ ವಿಭಾಗದಲ್ಲಿ 193ನೇ ರ್ಯಾಂಕ್ ಪಡೆದಿದ್ದಾರೆ.</p>.<p>‘ಫಲಿತಾಂಶ ಸಂತಸ ನೀಡಿದೆ. ನಾನು ನೀಟ್ ಫಲಿತಾಂಶ ಎದುರುನೋಡುತ್ತಿದ್ದೇನೆ. ವೈದ್ಯಕೀಯ ಶಿಕ್ಷಣ ಪಡೆಯುವುದು ನನ್ನ ಆಸೆಯಾಗಿದೆ’ ಎಂದು ವಾಸುದೇವ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಪಿಯುಕಾಲೇಜಿನ ವಿದ್ಯಾರ್ಥಿ ರೋಹಿತ್ ರಾಜ್, ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 6ನೇರ್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು.</p>.<p>**</p>.<p>ಕೋಚಿಂಗ್ಗೆ ಹೋಗಿದ್ದರಿಂದ ಪರೀಕ್ಷೆ ಎದುರಿಸಲು ಅನುಕೂಲವಾಯಿತು. ಮೂಲ ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಆಸಕ್ತಿಯಿದೆ. ಯೋಚಿಸಿ ಮುಂದಿನ ಕೋರ್ಸ್ ಆಯ್ದುಕೊಳ್ಳುತ್ತೇನೆ.<br /><em><strong>–ಕೀರ್ತನಾ ಎಂ ಅರುಣ್,ನ್ಯಾಷನಲ್ ಪಬ್ಲಿಕ್ ಶಾಲೆ, ಬೆಂಗಳೂರು</strong></em></p>.<p>**</p>.<p>ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಓದುತ್ತಿದ್ದೇನೆ. ಈ ಮಧ್ಯೆ ಸಿಇಟಿ ಬರೆದೆ. ಮುಂದೆ ಉತ್ತಮ ಎಂಜಿನಿಯರ್ ಆಗುವ ಗುರಿಯಿದೆ.<br /><em><strong>– ಸಾಯಿ ಸಾಕೇತಿಕಾ ಚೆಕುರಿ, ಚೈತನ್ಯ ಟೆಕ್ನೊ ಕಾಲೇಜು, ಬೆಂಗಳೂರು</strong></em></p>.<p>**</p>.<p>**</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>