<p><strong>ತುಮಕೂರು</strong>: ದೇಶದ ಲಾಕ್ಡೌನ್ನಿಂದ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ತಮಿಳುನಾಡಿನ ಹೊಸೂರಿನಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗಿ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಹಳ್ಳಿಯನ್ನು ತಲುಪಲು 410 ಕಿ.ಮೀ. ಪ್ರಯಾಣ ಆರಂಭಿಸಿದ್ದಾರೆ.</p>.<p>ಈ ಕಾರ್ಮಿಕರು ತುಮಕೂರು ನಗರವನ್ನುಗುರುವಾರಮಧ್ಯಾಹ್ನದ ಸುಡುಬಿಸಿಲಿನಲ್ಲಿಯೇ ಹಾದುಹೋದರು.</p>.<p>ಕಾರ್ಮಿಕರು ಎದುರಿಸುರು ಬಿಡುತ್ತ ನಗರದ ಬಿ.ಎಚ್.ರಸ್ತೆಯಲ್ಲಿ ಮಧ್ಯಾಹ್ನ ಸಾಗುತ್ತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.</p>.<p>‘ಹೊಸೂರಿನ ಗಾಂಧಿನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದೆವು. ಈಗ ಕೆಲಸ ಇಲ್ಲ. ಅಲ್ಲಿದ್ದು ಏನು ಮಾಡೋಣಂತ ಊರು ದಾರಿ ಹಿಡಿದ್ದೇವೆ. ಯಾವ ಗಾಡಿಗಳೂ ಇಲ್ಲ. ಹಾಗಾಗಿ ನಡಕೊಂಡೆ ಊರು ಕಡಿ ನಡೆದಿದ್ದಿವಿ’ ಎಂದು ಕಾರ್ಮಿಕರಲ್ಲಿ ಒಬ್ಬರಾದ ಶಿವು ತಿಳಿಸಿದರು.</p>.<p>ಬುಧವಾರ ರಾತ್ರಿ 2 ಗಂಟೆಗೆ ಮನೆ ಬಿಟ್ಟಿದ್ದ ಈ ಕಾರ್ಮಿಕರು, ಗುರುವಾರ ಮಧ್ಯಾಹ್ನ 2ರ ಹೊತ್ತಿಗೆ ತುಮಕೂರು ತಲುಪಿದ್ದರು.</p>.<p>‘ನಡುಕೊಂಡು ಹೋಗಕಾಲಕ್ಕೆ ಸುಸ್ತಾದರೆ, ನೆರಳಿದ್ದಲ್ಲಿ ಸ್ವಲ್ಪ ಹೊತ್ತು ಕೂರುತ್ತಿದ್ದೇವೆ. ನೀರು ಸಿಕ್ಕಲ್ಲಿ ಕುಡಿಯುತ್ತಿದ್ದೇವೆ. ಅಂಗಡಿ, ಹೋಟೆಲ್ ಎಲ್ಲಾದರೂ ತೆರೆದಿದ್ದರೆ, ತಿನ್ನಲು ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮತ್ತೊಬ್ಬ ಕಾರ್ಮಿಕ ತಿಳಿಸಿದರು.</p>.<p>‘ನಮ್ಮೂರು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಕೆ.ರಾಂಪುರ. ಊರಿಗೆ ಮುಟ್ಟಲು ಇನ್ನು ಎಷ್ಟು ದಿನ ಬೇಕೋ ಗೊತ್ತಿಲ್ಲ. ನಡಕೊಂಡು ಹೊಂಟಿವಿ. ನಾವು ಮೊದಲೆ ಬಿಸಿಲೂರಿನ ಮಂದಿ. ಈ ಬ್ಯಾಸಿಗಿ ಬಿಸಿಲೇನೂ ನಮಗ ಹೊಸದಲ್ಲ ಬಿಡ್ರಿ’ ಎನ್ನುತ್ತಲೇ ಕಾರ್ಮಿಕರು ಮುಂದೆ ಸಾಗಿದರು.</p>.<p><strong>ನೀರು ವಿತರಿಸಿದ ಸಹೋದರರು</strong></p>.<p>ಲಾಕ್ ಡೌನ್ನಿಂದ ಊರು–ಮನೆ ಸೇರಲಾದರೆ ಅತಂತ್ರ ಸ್ಥಿತಿಗೆ ಸಿಲುಕಿರುವ ಜನರಿಗೆ ಕ್ಯಾತ್ಸಂದ್ರದ ಫಿರೋಜ್ ಮತ್ತು ಮನ್ಸೂರ್ ಎಂಬ ಅಣ್ಣ–ತಮ್ಮ ಕುಡಿಯುವ ನೀರು ವಿತರಿಸುತ್ತಿದ್ದರು.</p>.<p>ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ್ದ ಕಾರ್ಮಿಕರು ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆಯುತ್ತಿದ್ದಾಗ, ಅವರನ್ನು ತಡೆದು ನೀರಿನ ಬಾಟಲ್ಗಳನ್ನು ವಿತರಿಸಿದರು.</p>.<p>‘ಸುಮಾರು 500 ಲೀಟರ್ ಬಾಟಲ್ ನೀರನ್ನು ಖರೀದಿಸಿದ್ದೇವೆ. ಸಾಧ್ಯವಾದಷ್ಟು ಬಾಟಲ್ಗಳನ್ನು ಕಾರಿನಲ್ಲಿ ಇಟ್ಟುಕೊಂಡು, ಅಗತ್ಯ ಇರುವವರಿಗೆ ವಿತರಣೆ ಮಾಡುತ್ತಿದ್ದೇವೆ’ ಎಂದು ಫಿರೋಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ದೇಶದ ಲಾಕ್ಡೌನ್ನಿಂದ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ತಮಿಳುನಾಡಿನ ಹೊಸೂರಿನಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗಿ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಹಳ್ಳಿಯನ್ನು ತಲುಪಲು 410 ಕಿ.ಮೀ. ಪ್ರಯಾಣ ಆರಂಭಿಸಿದ್ದಾರೆ.</p>.<p>ಈ ಕಾರ್ಮಿಕರು ತುಮಕೂರು ನಗರವನ್ನುಗುರುವಾರಮಧ್ಯಾಹ್ನದ ಸುಡುಬಿಸಿಲಿನಲ್ಲಿಯೇ ಹಾದುಹೋದರು.</p>.<p>ಕಾರ್ಮಿಕರು ಎದುರಿಸುರು ಬಿಡುತ್ತ ನಗರದ ಬಿ.ಎಚ್.ರಸ್ತೆಯಲ್ಲಿ ಮಧ್ಯಾಹ್ನ ಸಾಗುತ್ತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.</p>.<p>‘ಹೊಸೂರಿನ ಗಾಂಧಿನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದೆವು. ಈಗ ಕೆಲಸ ಇಲ್ಲ. ಅಲ್ಲಿದ್ದು ಏನು ಮಾಡೋಣಂತ ಊರು ದಾರಿ ಹಿಡಿದ್ದೇವೆ. ಯಾವ ಗಾಡಿಗಳೂ ಇಲ್ಲ. ಹಾಗಾಗಿ ನಡಕೊಂಡೆ ಊರು ಕಡಿ ನಡೆದಿದ್ದಿವಿ’ ಎಂದು ಕಾರ್ಮಿಕರಲ್ಲಿ ಒಬ್ಬರಾದ ಶಿವು ತಿಳಿಸಿದರು.</p>.<p>ಬುಧವಾರ ರಾತ್ರಿ 2 ಗಂಟೆಗೆ ಮನೆ ಬಿಟ್ಟಿದ್ದ ಈ ಕಾರ್ಮಿಕರು, ಗುರುವಾರ ಮಧ್ಯಾಹ್ನ 2ರ ಹೊತ್ತಿಗೆ ತುಮಕೂರು ತಲುಪಿದ್ದರು.</p>.<p>‘ನಡುಕೊಂಡು ಹೋಗಕಾಲಕ್ಕೆ ಸುಸ್ತಾದರೆ, ನೆರಳಿದ್ದಲ್ಲಿ ಸ್ವಲ್ಪ ಹೊತ್ತು ಕೂರುತ್ತಿದ್ದೇವೆ. ನೀರು ಸಿಕ್ಕಲ್ಲಿ ಕುಡಿಯುತ್ತಿದ್ದೇವೆ. ಅಂಗಡಿ, ಹೋಟೆಲ್ ಎಲ್ಲಾದರೂ ತೆರೆದಿದ್ದರೆ, ತಿನ್ನಲು ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮತ್ತೊಬ್ಬ ಕಾರ್ಮಿಕ ತಿಳಿಸಿದರು.</p>.<p>‘ನಮ್ಮೂರು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಕೆ.ರಾಂಪುರ. ಊರಿಗೆ ಮುಟ್ಟಲು ಇನ್ನು ಎಷ್ಟು ದಿನ ಬೇಕೋ ಗೊತ್ತಿಲ್ಲ. ನಡಕೊಂಡು ಹೊಂಟಿವಿ. ನಾವು ಮೊದಲೆ ಬಿಸಿಲೂರಿನ ಮಂದಿ. ಈ ಬ್ಯಾಸಿಗಿ ಬಿಸಿಲೇನೂ ನಮಗ ಹೊಸದಲ್ಲ ಬಿಡ್ರಿ’ ಎನ್ನುತ್ತಲೇ ಕಾರ್ಮಿಕರು ಮುಂದೆ ಸಾಗಿದರು.</p>.<p><strong>ನೀರು ವಿತರಿಸಿದ ಸಹೋದರರು</strong></p>.<p>ಲಾಕ್ ಡೌನ್ನಿಂದ ಊರು–ಮನೆ ಸೇರಲಾದರೆ ಅತಂತ್ರ ಸ್ಥಿತಿಗೆ ಸಿಲುಕಿರುವ ಜನರಿಗೆ ಕ್ಯಾತ್ಸಂದ್ರದ ಫಿರೋಜ್ ಮತ್ತು ಮನ್ಸೂರ್ ಎಂಬ ಅಣ್ಣ–ತಮ್ಮ ಕುಡಿಯುವ ನೀರು ವಿತರಿಸುತ್ತಿದ್ದರು.</p>.<p>ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ್ದ ಕಾರ್ಮಿಕರು ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆಯುತ್ತಿದ್ದಾಗ, ಅವರನ್ನು ತಡೆದು ನೀರಿನ ಬಾಟಲ್ಗಳನ್ನು ವಿತರಿಸಿದರು.</p>.<p>‘ಸುಮಾರು 500 ಲೀಟರ್ ಬಾಟಲ್ ನೀರನ್ನು ಖರೀದಿಸಿದ್ದೇವೆ. ಸಾಧ್ಯವಾದಷ್ಟು ಬಾಟಲ್ಗಳನ್ನು ಕಾರಿನಲ್ಲಿ ಇಟ್ಟುಕೊಂಡು, ಅಗತ್ಯ ಇರುವವರಿಗೆ ವಿತರಣೆ ಮಾಡುತ್ತಿದ್ದೇವೆ’ ಎಂದು ಫಿರೋಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>