‘ಬೆಳಗಾವಿಯಲ್ಲಿ 15 ದಿನಗಳಿಂದ ಮನೆಗೂ ಹೋಗದೆ ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ದಾದಿ ಸುನಂದಾ ಅವರ ಪುತ್ರಿ ಅಮ್ಮನಿಗಾಗಿ ಹಂಬಲಿಸುತ್ತಿರುವ ದೃಶ್ಯ ರಾಜ್ಯದ ಮನ ಕಲಕಿತ್ತು. ಮುಖ್ಯಮಂತ್ರಿ ಅವರು ಇದಕ್ಕಾಗಿ ಸುನಂದಾ ಅವರಿಗೆ ಸ್ವತಃ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ರಾಜ್ಯದಲ್ಲಿ ಸುನಂದಾ ಅವರಂತಹ ಸಾಕಷ್ಟು ಮಂದಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳು ಇರುವ ದಾದಿಯರು, ವೈದ್ಯರನ್ನು ಕರ್ತವ್ಯದಿಂದ ದೂರ ಇಡುವ ಪ್ರಸ್ತಾಪ ಸದ್ಯಕ್ಕಿಲ್ಲ, ಇದರಿಂದ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಬಹುದು’ ಎಂದು ಸುರೇಶ್ ಕುಮಾರ್ ಹೇಳಿದರು.