ಮುಳಬಾಗಿಲು: ತಾಲ್ಲೂಕಿನ ಮುಷ್ಠೂರು ಗ್ರಾಮದಲ್ಲಿ ಮಂಗಳವಾರ ಮದ್ಯದ ನಶೆಯಲ್ಲಿ ದಾರಿಗೆ ಅಡ್ಡಬಂದ ಹಾವನ್ನು ಹಿಂಸಿಸಿ, ಬಾಯಲ್ಲಿ ಕಚ್ಚಿ ಕೊಂದ ಆರೋಪಿ ಕುಮಾರ್ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬಂಧಿಸಿ ವನ್ಯಜೀವಿ ಸಂರಕ್ಷಣೆ– 1972 ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದೋಬಿ ಕೆಲಸ ಮಾಡುವ ಕುಮಾರ್, ಹಾವಿನ ಚರ್ಮವನ್ನು ಸುಲಿದು ವಿಕೃತವಾಗಿ ವರ್ತಿಸಿ ಬಳಿಕ ಪರಾರಿಯಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬುಧವಾರ ಬೆಳಗಿನ ಜಾವ ನೆಗವಾರ ಗ್ರಾಮದ ಬಳಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.