ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಠಾಧಿಪತಿಯಾಗಿ ಪಟ್ಟಕ್ಕೇರಿದ ದಿವಾನ್ ಶರೀಫ್‌ ಮುಲ್ಲಾ

ಖಜೂರಿ ಕೋರಣೇಶ್ವರ ಶಾಖಾ ಮಠ: ಲಿಂಗದೀಕ್ಷೆ ಪಡೆದ ಮುಸ್ಲಿಂ ಯುವಕನಿಗೆ ಪಟ್ಟಾಧಿಕಾರ ಮಹೋತ್ಸವ
Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ರೋಣ(ಗದಗ ಜಿಲ್ಲೆ): ಬಸವ ತತ್ವಕ್ಕೆ ಮಾರುಹೋಗಿ, ಲಿಂಗದೀಕ್ಷೆ ಪಡೆದುಕೊಂಡಿದ್ದ ತಾಲ್ಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕ ದಿವಾನ್ ಶರೀಫ್‌ ಮುಲ್ಲಾ ಬುಧವಾರ ಇಲ್ಲಿ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿಪಟ್ಟಕ್ಕೇರಿದರು.

ಈ ಸಂದರ್ಭದಲ್ಲಿಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ಹಸಮಣೆ ಏರಿದರು.

ಅಸೂಟಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ, ಮಠಕ್ಕೆ ಸೇರಿದ ಶಾಂತಿಧಾಮದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರಶ್ರೀಗಳು ಪಟ್ಟಾಧಿಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇಲ್ಲಿ ಎರಡು ಎಕರೆ ಜಾಗದಲ್ಲಿ ಕೋರಣೇಶ್ವರ ಶಾಖಾ ಮಠ ‘ಶಾಂತಿಧಾಮ’ ನಿರ್ಮಾಣಗೊಳ್ಳುತ್ತಿದ್ದು, ದಿವಾನ್ ಶರೀಫ್‌ ಸ್ವಾಮೀಜಿ ಅವರು ಈ ಪೀಠದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT