<p><strong>ಉಡುಪಿ:</strong> ಮಹಾನಗರಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಕರಾವಳಿಗರು ಸ್ವಂತ ಊರುಗಳಿಗೆ ಈಗ ಮರಳಿದ್ದು, ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಮನಸ್ಸು ಮಾಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಅನುಭವಿಸಿದ ಕಷ್ಟ, ಭವಿಷ್ಯದ ಆತಂಕಗಳು, ಕೃಷಿಯೆಡೆಗಿನ ಸೆಳೆತ, ತವರಿನ ಮೇಲೆ ಮೋಹ ಹೆಚ್ಚಾಗಲು ಕಾರಣ.</p>.<p>ಜಿಲ್ಲೆಯ 20,000ಕ್ಕೂ ಹೆಚ್ಚು ಮಂದಿ ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್ ಸೇರಿ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಹೋಟೆಲ್, ಗಾರ್ಮೆಂಟ್ಸ್ ಹಾಗೂ ಸಣ್ಣ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದು, ಲಾಕ್ಡೌನ್ನಿಂದಾಗಿ ಸದ್ಯ ಉದ್ಯೋಗ ಹಾಗೂ ವೇತನವಿಲ್ಲದಂತಾಗಿದೆ. ಕೆಲವರನ್ನು ಕೆಲಸದಿಂದ ತೆಗೆಯಲಾಗಿದೆ.</p>.<p>ಇವರೆಲ್ಲರೂ ಲಾಕ್ಡೌನ್ ಬಳಿಕ ಸ್ವಗ್ರಾಮಗಳಿಗೆ ಬಂದಿದ್ದು, ಹೆಚ್ಚಿನವರು ಮರಳಿ ನಗರಗಳತ್ತ ಮುಖಮಾಡದೆ ಇಲ್ಲಿಯೇ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮಳೆಗಾಲದ ಬೆಳೆಗೆ ಹಡಿಲು ಬಿದ್ದ ಗದ್ದೆಗಳನ್ನು ಉಳುಮೆಗೆ ಸಿದ್ಧಗೊಳಿಸುತ್ತಿದ್ದಾರೆ.</p>.<p><strong>ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ:</strong> ಯುವಕರು ಕೃಷಿಯತ್ತ ಹೊರಳುತ್ತಿರುವುದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಮೇ ಮೊದಲ ವಾರದಲ್ಲಿ ಬೇಡಿಕೆ ಕಡಿಮೆ ಇರುತ್ತಿತ್ತು. ಈ ವರ್ಷ ಮಾರಾಟ ಶುರುವಾದ ದಿನವೇ ಖರೀದಿಗೆ ನೂಕುನುಗ್ಗಲು ಉಂಟಾಗಿದೆ ಎನ್ನುತ್ತಾರೆಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ.</p>.<p>ಉಡುಪಿಯಲ್ಲಿ 585 ಕ್ವಿಂಟಲ್,ಕುಂದಾಪುರದಲ್ಲಿ 540 ಕ್ವಿಂಟಲ್ ಮತ್ತುಕಾರ್ಕಳದಲ್ಲಿ 75 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ. ಕಳೆದ ವರ್ಷ ಈ ವೇಳೆಗೆ ಅರ್ಧದಷ್ಟು ಮಾತ್ರ ಮಾರಾಟವಾಗಿತ್ತು. ಮಳೆ ಶುರುವಾದ ಬಳಿಕ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಒಟ್ಟಾರೆ, ಈ ವರ್ಷ ಗುರಿಗಿಂತ ಹೆಚ್ಚಿನ ಪ್ರಮಾಣದ ಕೃಷಿ ನಡೆಯಲಿದೆ ಎಂದರು.</p>.<p>ಕೃಷಿ ಇಲಾಖೆಗೆ ಕರೆ:ಯಾವ ಭತ್ತದ ತಳಿ ಬೆಳೆದರೆ ಸೂಕ್ತ, ಎಕರೆಗೆ ಎಷ್ಟು ಬಿತ್ತನೆ ಬೀಜ ಬೇಕು, ಇಳುವರಿ ಎಷ್ಟು ಸಿಗಲಿದೆ ಹೀಗೆ, ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಯುವಕರು ರೈತ ಸಂಪರ್ಕ ಕೇಂದ್ರಗಳಿಗೆ ಕರೆ ಮಾಡುತ್ತಿದ್ದಾರೆ. ಕೆಲವರು ಖುದ್ದು ಬಂದು ವಿಚಾರಿಸುತ್ತಿದ್ದಾರೆ. ಈ ವರ್ಷ ಹಡಿಲು ಬಿದ್ದ ಭೂಮಿಯೂ ನಳನಳಿಸುವ ನಿರೀಕ್ಷೆ ಇದೆ ಎಂದರು.</p>.<p>ಬಂಡವಾಳ ಕಡಿಮೆ; ಲಾಭ ಹೆಚ್ಚು: ಎಕರೆ ಭತ್ತ ಕೃಷಿಗೆ ₹ 15,000 ಖರ್ಚಾಗುತ್ತಿತ್ತು. ಈ ಬಾರಿ ಮನೆಮಂದಿಯೆಲ್ಲ ಕೃಷಿಯಲ್ಲಿ ತೊಡಗಿದ್ದು, ಕೂಲಿಯಾಳುಗಳ ಮೇಲಿನ ಅವಲಂಬನೆ ತಗ್ಗಿದೆ. ಬಂಡವಾಳ ಹೂಡಿಕೆ ಕಡಿಮೆಯಾಗಿ, ಹೆಚ್ಚು ಲಾಭ ಕೈಸೇರಲಿದೆ ಎಂದು ರೈತ ಮಂಜುನಾಥ್ ತಿಳಿಸಿದರು.</p>.<p><strong>‘ಅಪ್ಪ– ಅಮ್ಮನಿಗೆ ಆಸರೆ’</strong></p>.<p>‘ಬೆಂಗಳೂರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ₹ 15 ಸಾವಿರ ಸಿಗುತ್ತಿತ್ತು. ಮನೆ ಬಾಡಿಗೆ, ಖರ್ಚು ಕಳೆದು ₹ 5 ಸಾವಿರ ಉಳಿಯುತ್ತಿತ್ತು. 2 ತಿಂಗಳಿನಿಂದ ಕೆಲಸವಿಲ್ಲ, ಸಂಬಳವಿಲ್ಲ. ಹೋಟೆಲ್ ಉದ್ಯಮ ಸಹಜ ಸ್ಥಿತಿಗೆ ಬರುವ ಲಕ್ಷಣಗಳಿಲ್ಲ. ಊರಿನಲ್ಲಿದ್ದುಕೊಂಡು ಕೃಷಿ ಮಾಡಲು ನಿರ್ಧರಿಸಿದ್ದೇನೆ. ಅಪ್ಪ –ಅಮ್ಮನಿಗೂ ಆಸರೆಯಾದಂತಾಗುತ್ತದೆ’ ಎಂದರು ಯುವಕ ರಂಜಿತ್.</p>.<p><strong>***</strong></p>.<p>ಕೃಷಿಯ ಜತೆಗೆ ಹೈನುಗಾರಿಕೆ, ಮಲ್ಲಿಗೆ ಕೃಷಿ, ತರಕಾರಿ ಬೆಳೆಯುವ ಬಗ್ಗೆಯೂ ಯುವಕರಲ್ಲಿ ಉತ್ಸಾಹ ಇದೆ. ಇದೆಲ್ಲ ಲಾಕ್ಡೌನ್ ಪರಿಣಾಮ.<br /><strong>– ಕೆಂಪೇಗೌಡ, ಕೃಷಿ ಇಲಾಕೆ ಜಂಟಿ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಮಹಾನಗರಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಕರಾವಳಿಗರು ಸ್ವಂತ ಊರುಗಳಿಗೆ ಈಗ ಮರಳಿದ್ದು, ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಮನಸ್ಸು ಮಾಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಅನುಭವಿಸಿದ ಕಷ್ಟ, ಭವಿಷ್ಯದ ಆತಂಕಗಳು, ಕೃಷಿಯೆಡೆಗಿನ ಸೆಳೆತ, ತವರಿನ ಮೇಲೆ ಮೋಹ ಹೆಚ್ಚಾಗಲು ಕಾರಣ.</p>.<p>ಜಿಲ್ಲೆಯ 20,000ಕ್ಕೂ ಹೆಚ್ಚು ಮಂದಿ ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್ ಸೇರಿ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಹೋಟೆಲ್, ಗಾರ್ಮೆಂಟ್ಸ್ ಹಾಗೂ ಸಣ್ಣ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದು, ಲಾಕ್ಡೌನ್ನಿಂದಾಗಿ ಸದ್ಯ ಉದ್ಯೋಗ ಹಾಗೂ ವೇತನವಿಲ್ಲದಂತಾಗಿದೆ. ಕೆಲವರನ್ನು ಕೆಲಸದಿಂದ ತೆಗೆಯಲಾಗಿದೆ.</p>.<p>ಇವರೆಲ್ಲರೂ ಲಾಕ್ಡೌನ್ ಬಳಿಕ ಸ್ವಗ್ರಾಮಗಳಿಗೆ ಬಂದಿದ್ದು, ಹೆಚ್ಚಿನವರು ಮರಳಿ ನಗರಗಳತ್ತ ಮುಖಮಾಡದೆ ಇಲ್ಲಿಯೇ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮಳೆಗಾಲದ ಬೆಳೆಗೆ ಹಡಿಲು ಬಿದ್ದ ಗದ್ದೆಗಳನ್ನು ಉಳುಮೆಗೆ ಸಿದ್ಧಗೊಳಿಸುತ್ತಿದ್ದಾರೆ.</p>.<p><strong>ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ:</strong> ಯುವಕರು ಕೃಷಿಯತ್ತ ಹೊರಳುತ್ತಿರುವುದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಮೇ ಮೊದಲ ವಾರದಲ್ಲಿ ಬೇಡಿಕೆ ಕಡಿಮೆ ಇರುತ್ತಿತ್ತು. ಈ ವರ್ಷ ಮಾರಾಟ ಶುರುವಾದ ದಿನವೇ ಖರೀದಿಗೆ ನೂಕುನುಗ್ಗಲು ಉಂಟಾಗಿದೆ ಎನ್ನುತ್ತಾರೆಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ.</p>.<p>ಉಡುಪಿಯಲ್ಲಿ 585 ಕ್ವಿಂಟಲ್,ಕುಂದಾಪುರದಲ್ಲಿ 540 ಕ್ವಿಂಟಲ್ ಮತ್ತುಕಾರ್ಕಳದಲ್ಲಿ 75 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ. ಕಳೆದ ವರ್ಷ ಈ ವೇಳೆಗೆ ಅರ್ಧದಷ್ಟು ಮಾತ್ರ ಮಾರಾಟವಾಗಿತ್ತು. ಮಳೆ ಶುರುವಾದ ಬಳಿಕ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಒಟ್ಟಾರೆ, ಈ ವರ್ಷ ಗುರಿಗಿಂತ ಹೆಚ್ಚಿನ ಪ್ರಮಾಣದ ಕೃಷಿ ನಡೆಯಲಿದೆ ಎಂದರು.</p>.<p>ಕೃಷಿ ಇಲಾಖೆಗೆ ಕರೆ:ಯಾವ ಭತ್ತದ ತಳಿ ಬೆಳೆದರೆ ಸೂಕ್ತ, ಎಕರೆಗೆ ಎಷ್ಟು ಬಿತ್ತನೆ ಬೀಜ ಬೇಕು, ಇಳುವರಿ ಎಷ್ಟು ಸಿಗಲಿದೆ ಹೀಗೆ, ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಯುವಕರು ರೈತ ಸಂಪರ್ಕ ಕೇಂದ್ರಗಳಿಗೆ ಕರೆ ಮಾಡುತ್ತಿದ್ದಾರೆ. ಕೆಲವರು ಖುದ್ದು ಬಂದು ವಿಚಾರಿಸುತ್ತಿದ್ದಾರೆ. ಈ ವರ್ಷ ಹಡಿಲು ಬಿದ್ದ ಭೂಮಿಯೂ ನಳನಳಿಸುವ ನಿರೀಕ್ಷೆ ಇದೆ ಎಂದರು.</p>.<p>ಬಂಡವಾಳ ಕಡಿಮೆ; ಲಾಭ ಹೆಚ್ಚು: ಎಕರೆ ಭತ್ತ ಕೃಷಿಗೆ ₹ 15,000 ಖರ್ಚಾಗುತ್ತಿತ್ತು. ಈ ಬಾರಿ ಮನೆಮಂದಿಯೆಲ್ಲ ಕೃಷಿಯಲ್ಲಿ ತೊಡಗಿದ್ದು, ಕೂಲಿಯಾಳುಗಳ ಮೇಲಿನ ಅವಲಂಬನೆ ತಗ್ಗಿದೆ. ಬಂಡವಾಳ ಹೂಡಿಕೆ ಕಡಿಮೆಯಾಗಿ, ಹೆಚ್ಚು ಲಾಭ ಕೈಸೇರಲಿದೆ ಎಂದು ರೈತ ಮಂಜುನಾಥ್ ತಿಳಿಸಿದರು.</p>.<p><strong>‘ಅಪ್ಪ– ಅಮ್ಮನಿಗೆ ಆಸರೆ’</strong></p>.<p>‘ಬೆಂಗಳೂರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ₹ 15 ಸಾವಿರ ಸಿಗುತ್ತಿತ್ತು. ಮನೆ ಬಾಡಿಗೆ, ಖರ್ಚು ಕಳೆದು ₹ 5 ಸಾವಿರ ಉಳಿಯುತ್ತಿತ್ತು. 2 ತಿಂಗಳಿನಿಂದ ಕೆಲಸವಿಲ್ಲ, ಸಂಬಳವಿಲ್ಲ. ಹೋಟೆಲ್ ಉದ್ಯಮ ಸಹಜ ಸ್ಥಿತಿಗೆ ಬರುವ ಲಕ್ಷಣಗಳಿಲ್ಲ. ಊರಿನಲ್ಲಿದ್ದುಕೊಂಡು ಕೃಷಿ ಮಾಡಲು ನಿರ್ಧರಿಸಿದ್ದೇನೆ. ಅಪ್ಪ –ಅಮ್ಮನಿಗೂ ಆಸರೆಯಾದಂತಾಗುತ್ತದೆ’ ಎಂದರು ಯುವಕ ರಂಜಿತ್.</p>.<p><strong>***</strong></p>.<p>ಕೃಷಿಯ ಜತೆಗೆ ಹೈನುಗಾರಿಕೆ, ಮಲ್ಲಿಗೆ ಕೃಷಿ, ತರಕಾರಿ ಬೆಳೆಯುವ ಬಗ್ಗೆಯೂ ಯುವಕರಲ್ಲಿ ಉತ್ಸಾಹ ಇದೆ. ಇದೆಲ್ಲ ಲಾಕ್ಡೌನ್ ಪರಿಣಾಮ.<br /><strong>– ಕೆಂಪೇಗೌಡ, ಕೃಷಿ ಇಲಾಕೆ ಜಂಟಿ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>