‘ಎಚ್.ಟಿ.ಮಂಜು ಕಾನೂನು ಬಾಹಿರವಾಗಿ ಗಣಿ ಚಟುವಟಿಕೆ ನಡೆಸುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ₹ 10 ಕೋಟಿ ದಂಡ ವಿಧಿಸಿದೆ. ಮಂಡ್ಯದ ಹಿರಿಯ ಭೂ ವಿಜ್ಞಾನಿಗಳು ಕಳೆದ ಫೆ.28ರಂದು ಪಾಂಡವಪುರ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಅಕ್ರಮದ ವರದಿ ನೀಡಿದ್ದಾರೆ. ಕಾನೂನು ಬಾಹಿರವಾಗಿ 2,15,402 ಮೆಟ್ರಿಕ್ ಟನ್ ಕಲ್ಲು ಹೊರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಮಾಜಿ ಪ್ರಧಾನಿ ಕಾನೂನು ಬಾಹಿರ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ’ ಎಂದು ಆರೋಪಿಸಿದರು.