ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗುವುದನ್ನು ಜಿಂದಾಲ್ ಕಂಪನಿಯವರು ನಿಲ್ಲಿಸಬೇಕು. ಜಿಂದಾಲ್ ಅಲ್ಲದೇ ಕಲ್ಯಾಣಿ, ಕಿರ್ಲೋಸ್ಕರ್... ಹೀಗೆ ಬಳ್ಳಾರಿ ಜಿಲ್ಲೆಯ ಯಾವುದೇ ಕಂಪನಿಗಳಿರಲಿ, ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.