ಕೊರೊನಾವೈರಸ್ ಸೋಂಕು ಹರಡುವಿಕೆಗೆ ಧರ್ಮವನ್ನು ದೂರುವುದು, ಶಾಂತಿ ಕದಡುವುದಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಸುಳ್ಳು ಸುದ್ದಿಯಿಂದಾಗಿ ಜನರಿಗೆ ಬಹಿಷ್ಕಾರ ಹಾಕಿದ ಅಥವಾ ಹೊರಗಟ್ಟಿದ ಘಟನೆಗಳು ನಡೆದಿವೆ. ಎಲ್ಲೋ ಒಂದೆರಡು ಕಡೆ ನಡೆದಘಟನೆಗಳಿಗೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುತ್ತಿರುವವರ ಮೇಲೆ ಕ್ರಮ ಕೈತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಇದು ಬರೀ ಬಾಯಿ ಮಾತಲ್ಲೇ ಉಳಿಯದಿರಲಿ ಎಂದು ಡಿಕೆಶಿ ಹೇಳಿದ್ದಾರೆ.