‘ರಂಗಾಯಣ ನಿರ್ವಹಣೆಯಲ್ಲಿ ಸಮಸ್ಯೆ ಇದ್ದರೆ ತನಿಖೆ ನಡೆಸಲಿ. ಆದರೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿ ಸರ್ಕಾರ ರಾಜಕೀಯ ಮಾಡುತ್ತಿದೆ. ಹೊಸದಾಗಿ ನೇಮಕವಾಗುವ ನಿರ್ದೇಶಕರು ಹಾಗೂ ಸದಸ್ಯರು ಬಿಜೆಪಿ ಏಜೆಂಟ್ಗಳಾಗುವ ಅಪಾಯವಿದೆ. ಕಲಾವಿದರು ರಾಜಕೀಯ ಪ್ರತಿನಿಧಿಗಳಾಗುವ ಸಾಧ್ಯತೆ ಇರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.