<p><strong>ಕಲಬುರ್ಗಿ:</strong> ನಗರದಲ್ಲಿ ಫೆ.5ರಿಂದ 7ರ ವರೆಗೆ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈವರೆಗೆ ಒಂದು ರೂಪಾಯಿ ದೇಣಿಗೆಯೂ ಸಂಗ್ರಹವಾಗಿಲ್ಲ. ಸಮ್ಮೇಳನಕ್ಕೆ ನೆರವು ನೀಡುವಂತೆ ಸಂಘಟನಾ ಸಮಿತಿಯವರು ದಾನಿಗಳನ್ನು ಹಾಗೂ ವಾಣಿಜ್ಯೋದ್ಯಮಿಗಳನ್ನು ಈ ವರೆಗೂ ಸಂಪರ್ಕಿಸಿಲ್ಲ!</p>.<p>ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿ ನಡೆಸಿದ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಈ ವಿಷಯ ಕೇಳಿ ಅಚ್ಚರಿ ವ್ಯಕ್ತಪಡಿಸಿದರು.</p>.<p>ಸಿದ್ಧತೆಯ ವರದಿ ಮಂಡಿಸಿದ ವಿವಿಧ ಸಮಿತಿಯವರು, ‘ಉಪಕರಣ ಖರೀದಿಗೆ ಕೋಟೇಷನ್ ಕರೆದಿದ್ದೇವೆ. ಇಷ್ಟು ಹಣ ಬೇಕು’ ಎಂದು ಲಕ್ಷ/ಕೋಟಿ ಲೆಕ್ಕದಲ್ಲಿ ಬೇಡಿಕೆ ಮಂಡಿಸಿದರು. ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಬೇಕಾದ ಮಹಾನಗರ ಪಾಲಿಕೆ, ಆರೋಗ್ಯ ಸೇವೆ ಕಲ್ಪಿಸಬೇಕಾದ ಆರೋಗ್ಯ ಇಲಾಖೆಯವರೂ ಹಣ ಬೇಕು ಎಂದು ಪಟ್ಟಿ ಮುಂದಿಟ್ಟರು.</p>.<p>ಇದನ್ನು ಕೇಳಿ ದಂಗಾದ ಕಾರಜೋಳ, ‘ನೀವು ಬೇಡಿಕೆ ಇಟ್ಟಿರುವ ಮೊತ್ತ ಗಮನಿಸಿದರೆ ₹ 100 ಕೋಟಿ ನೀಡಿದರೂ ಸಾಲದು. ಉಳ್ಳವರು–ಇಲ್ಲದವರೆಲ್ಲರೂ ಸೇರಿ ಆಚರಿಸುವ ಕನ್ನಡದ ಹಬ್ಬವಿದು. ಉದಾರವಾಗಿ ದೇಣಿಗೆ ನೀಡುವವರು ಸಾಕಷ್ಟು ಜನ ಇದ್ದಾರೆ. ನೀವು ಈ ವರೆಗೂ ಅವರನ್ನು ಸಂಪರ್ಕಿಸಿಲ್ಲವೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು.</p>.<p>ಕಾರಜೋಳ ಅವರ ಕೋರಿಕೆ ಮೇರೆಗೆ ಸ್ವಯಂ ಸೇವಕರಿಗಾಗಿ ತಮ್ಮ ಶಿಕ್ಷಣ ಸಂಸ್ಥೆಯಿಂದ 5 ಸಾವಿರ ಟಿ–ಶರ್ಟ್ ಕೊಡಲು ಒಪ್ಪಿಕೊಂಡ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಈ ವರೆಗೆ ತಮ್ಮನ್ನು ಯಾರೂ ಸಂಪರ್ಕಿಸಿಯೇ ಇಲ್ಲ ಎಂದರು.</p>.<p>‘ನಮ್ಮಲ್ಲಿ ಶ್ರೀಮಂತರು ಸಾಕಷ್ಟು ಜನ ಇದ್ದಾರೆ. ಆದರೆ, ಕೊಡುಗೈ ಕಡಿಮೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮನವಿ ಮಾಡಿದರು.</p>.<p>‘ಇಂತಿಷ್ಟು ದೇಣಿಗೆ ಸಂಗ್ರಹಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಗುರಿ ನಿಗದಿ ಮಾಡಿ. ನಾವೆಲ್ಲ ಸಂಗ್ರಹಿಸು<br />ತ್ತೇವೆ. ಆ ಹಣ ಡಿಸಿ ಖಾತೆಗೆ ಜಮೆ ಆಗಲಿ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.</p>.<p>ದೇಣಿಗೆ ಸಂಗ್ರಹಿಸಲು ಯಾರನ್ನೆಲ್ಲ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಕಾರಜೋಳ, ‘ಅವಶ್ಯಬಿದ್ದರೆ ನಾನೂ ಅವರೊಂದಿಗೆ ಮಾತನಾಡಿ ಮನವಿ ಮಾಡುತ್ತೇನೆ. ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟು ಆಗದಂತೆ ಎಲ್ಲರೂ ಸೇರಿ ಕೆಲಸ ಮಾಡೋಣ. ಸರ್ಕಾರವೂ ಕೊಡಬೇಕಾದ ಹಣ ಕೊಟ್ಟೇ ಕೊಡುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ನಗರದಲ್ಲಿ ಫೆ.5ರಿಂದ 7ರ ವರೆಗೆ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈವರೆಗೆ ಒಂದು ರೂಪಾಯಿ ದೇಣಿಗೆಯೂ ಸಂಗ್ರಹವಾಗಿಲ್ಲ. ಸಮ್ಮೇಳನಕ್ಕೆ ನೆರವು ನೀಡುವಂತೆ ಸಂಘಟನಾ ಸಮಿತಿಯವರು ದಾನಿಗಳನ್ನು ಹಾಗೂ ವಾಣಿಜ್ಯೋದ್ಯಮಿಗಳನ್ನು ಈ ವರೆಗೂ ಸಂಪರ್ಕಿಸಿಲ್ಲ!</p>.<p>ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿ ನಡೆಸಿದ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಈ ವಿಷಯ ಕೇಳಿ ಅಚ್ಚರಿ ವ್ಯಕ್ತಪಡಿಸಿದರು.</p>.<p>ಸಿದ್ಧತೆಯ ವರದಿ ಮಂಡಿಸಿದ ವಿವಿಧ ಸಮಿತಿಯವರು, ‘ಉಪಕರಣ ಖರೀದಿಗೆ ಕೋಟೇಷನ್ ಕರೆದಿದ್ದೇವೆ. ಇಷ್ಟು ಹಣ ಬೇಕು’ ಎಂದು ಲಕ್ಷ/ಕೋಟಿ ಲೆಕ್ಕದಲ್ಲಿ ಬೇಡಿಕೆ ಮಂಡಿಸಿದರು. ಸ್ವಚ್ಛತೆಯ ಜವಾಬ್ದಾರಿ ನಿರ್ವಹಿಸಬೇಕಾದ ಮಹಾನಗರ ಪಾಲಿಕೆ, ಆರೋಗ್ಯ ಸೇವೆ ಕಲ್ಪಿಸಬೇಕಾದ ಆರೋಗ್ಯ ಇಲಾಖೆಯವರೂ ಹಣ ಬೇಕು ಎಂದು ಪಟ್ಟಿ ಮುಂದಿಟ್ಟರು.</p>.<p>ಇದನ್ನು ಕೇಳಿ ದಂಗಾದ ಕಾರಜೋಳ, ‘ನೀವು ಬೇಡಿಕೆ ಇಟ್ಟಿರುವ ಮೊತ್ತ ಗಮನಿಸಿದರೆ ₹ 100 ಕೋಟಿ ನೀಡಿದರೂ ಸಾಲದು. ಉಳ್ಳವರು–ಇಲ್ಲದವರೆಲ್ಲರೂ ಸೇರಿ ಆಚರಿಸುವ ಕನ್ನಡದ ಹಬ್ಬವಿದು. ಉದಾರವಾಗಿ ದೇಣಿಗೆ ನೀಡುವವರು ಸಾಕಷ್ಟು ಜನ ಇದ್ದಾರೆ. ನೀವು ಈ ವರೆಗೂ ಅವರನ್ನು ಸಂಪರ್ಕಿಸಿಲ್ಲವೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು.</p>.<p>ಕಾರಜೋಳ ಅವರ ಕೋರಿಕೆ ಮೇರೆಗೆ ಸ್ವಯಂ ಸೇವಕರಿಗಾಗಿ ತಮ್ಮ ಶಿಕ್ಷಣ ಸಂಸ್ಥೆಯಿಂದ 5 ಸಾವಿರ ಟಿ–ಶರ್ಟ್ ಕೊಡಲು ಒಪ್ಪಿಕೊಂಡ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಈ ವರೆಗೆ ತಮ್ಮನ್ನು ಯಾರೂ ಸಂಪರ್ಕಿಸಿಯೇ ಇಲ್ಲ ಎಂದರು.</p>.<p>‘ನಮ್ಮಲ್ಲಿ ಶ್ರೀಮಂತರು ಸಾಕಷ್ಟು ಜನ ಇದ್ದಾರೆ. ಆದರೆ, ಕೊಡುಗೈ ಕಡಿಮೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮನವಿ ಮಾಡಿದರು.</p>.<p>‘ಇಂತಿಷ್ಟು ದೇಣಿಗೆ ಸಂಗ್ರಹಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಗುರಿ ನಿಗದಿ ಮಾಡಿ. ನಾವೆಲ್ಲ ಸಂಗ್ರಹಿಸು<br />ತ್ತೇವೆ. ಆ ಹಣ ಡಿಸಿ ಖಾತೆಗೆ ಜಮೆ ಆಗಲಿ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.</p>.<p>ದೇಣಿಗೆ ಸಂಗ್ರಹಿಸಲು ಯಾರನ್ನೆಲ್ಲ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ ಕಾರಜೋಳ, ‘ಅವಶ್ಯಬಿದ್ದರೆ ನಾನೂ ಅವರೊಂದಿಗೆ ಮಾತನಾಡಿ ಮನವಿ ಮಾಡುತ್ತೇನೆ. ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟು ಆಗದಂತೆ ಎಲ್ಲರೂ ಸೇರಿ ಕೆಲಸ ಮಾಡೋಣ. ಸರ್ಕಾರವೂ ಕೊಡಬೇಕಾದ ಹಣ ಕೊಟ್ಟೇ ಕೊಡುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>