ಶ್ರೀಗಳು ಪೀಠತ್ಯಾಗ ದುರಾದೃಷ್ಟಕರ ಮಠದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲಎಂಬುವುದು ಸುಳ್ಳು. ಮಠದಲ್ಲಿರುವ ಶ್ರೀಗಳಕುಟುಂಬದವರ ಆಸ್ತಿ ಜಗಳ, ಪಟ್ಟಭದ್ರ ಹಿತಾಸಕ್ತಿತನದ ಸ್ವಭಾವ ಮತ್ತು ಜಗಳದಿಂದ ಮಠದ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳು ಕಳೆದ 25 ವರ್ಷಗಳಿಂದ ನಿಂತುಹೋಗಿವೆ. ಮಠದಲ್ಲಿರುವ ಕಟ್ಟಿಮನಿ ಹಿರೇಮಠ ಇನಾಮದಾರ ವಂಶಸ್ಥರು ತಮ್ಮ ಹಿತಾಸಕ್ತಿಗಾಗಿ, ಅಸ್ತಿತ್ವಕ್ಕಾಗಿ ಮಠದಲ್ಲಿ ಇದ್ದರೆ ವಿನಾ ಗ್ರಾಮದ ಭಕ್ತರ ಒಳಿತಿಗಾಗಿ ಅಲ್ಲ ಎಂದು ಅವರು ತಿಳಿಸಿದ್ದಾರೆ.