ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಿದ ತಾಲ್ಲೂಕಿನ ಕಾರಾಪುರ ಗ್ರಾಮದ ಶ್ರೀನಿವಾಸ (27) ಎಂಬಾತನನ್ನು ಮೈಸೂರು ಅರಣ್ಯ ಸಂಚಾರ ದಳ ಹಾಗೂ ವಿರಾಜಪೇಟೆ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಶ್ರೀನಿವಾಸ ಬಳಿ ಜಿಂಕೆ ಚರ್ಮ ಇದೆ ಎಂಬ ವಿಷಯ ತಿಳಿದ ಅಧಿಕಾರಿಗಳು ಖರೀದಿದಾರರಂತೆ ನಟಿಸಿ ಮಾರಮ್ಮ ದೇವಸ್ಥಾನದ ಬಳಿ ಬರುವಂತೆ ಹೇಳಿದ್ದಾರೆ. ಚರ್ಮದೊಂದಿಗೆ ಬಂದ ಆರೋಪಿಯನ್ನು ಬಂಧಿಸುವ ವೇಳೆ ಜತೆಯಲ್ಲಿದ್ದ ಪ್ರಸನ್ನ ಎಂಬಾತ ಪರಾರಿಯಾಗಿದ್ದಾನೆ.