‘ಮಾಸ್ಕ್, ಆಹಾರ, ಔಷಧಗಳ ವಿತರಣೆ ಮಾಡಲು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಸಮುದಾಯದ ಹಲವು ಮಂದಿ ಸ್ಥಳೀಯರಿಗೆ ನೆರವಾಗಿರುವುದು ಕಂಡುಬಂದಿದೆ. ಕೌಟುಂಬಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ಅಥವಾ ಸಕಾರಾತ್ಮಕ ಬದಲಾವಣೆ ಆಗಿಲ್ಲ ಎಂದು ಭಾರತೀಯ ಮೂಲದ ಆರರಲ್ಲಿ ಐದು ಮಂದಿ ಹೇಳಿದ್ದರೆ, ನಾಲ್ಕರಲ್ಲಿ ಒಬ್ಬರು, ಒತ್ತಡ ಹಾಗೂ ಹತಾಶೆಗೆ ಒಳಗಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಎಫ್ಐಐಡಿಎಸ್ನ ನಿರ್ದೇಶಕ ಖಂಡೇರಾವ್ ಕಂಡ್ ತಿಳಿಸಿದ್ದಾರೆ.